27.7 C
Mumbai
July 23, 2026
Mumbai News Kannada
ಮುಂಬಯಿ

ತುಳು ಸಂಘ ಬೊರಿವಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ







ತುಳು ನಾಡಿನ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯ ಪ್ರಶಂಸನೀಯ – ಕವಿತಾ ವೇದಪ್ರಕಾಶ್ ಶ್ರೀಯಾನ್

 ಮುಂಬಯಿ : ತುಳು ನಾಡಿನ ಸಂಸ್ಕೃತಿಯನ್ನು ಹೊರನಾಡಿನಲ್ಲಿ ಉಳಿಸಿ, ಇಲ್ಲಿರುವ ನಾಡಿನ ಮಹಿಳೆಯರನ್ನು ಅರಸಿನ ಕುಂಕುಮ ದಂತಹ ಕಾರ್ಯಕ್ರಮದ ಮೂಲಕ ಒಗ್ಗೂಡಿಸುತ್ತಿರುವ ತುಳು ಸಂಘ ಬೊರಿವಲಿ ಯನ್ನು ಅಭಿನಂದಿಸಬೇಕಾಗಿದೆ ಎಂದು ಉದ್ಯಮಿ, ದಿವ್ಯ ಲೋಜಿಸ್ಠಿಕ್ ಗ್ರೂಪ್ ನ ಕವಿತಾ ವೇದಪ್ರಕಾಶ್ ಶ್ರೀಯಾನ್ ಅಭಿಪ್ರಾಯ ಪಟ್ಟರು.

 ಫೆಬ್ರವರಿ  28 ರಂದು ಬೋರಿವಲಿ ಪಶ್ಚಿಮದ ಮ್ಹಾತ್ರೆ ಗಾರ್ಡನ್ಸ್ ಹಾಲ್ ನಲ್ಲಿ ತುಳು ಸಂಘ, ಬೋರಿವಲಿ ಇದರ ಮಹಿಳಾ ವಿಭಾಗದಿಂದ ಜರಗಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾದುತ್ತಾ ಹಳದಿ ಕುಂಕುಮದ ಮಹತ್ವದ ಬಗ್ಗೆ ತಿಳಿಸಿ, ಮಹಿಳೆಯರ ಏಕತೆ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು.

ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ಮಾತನಾಡುತ್ತ ಸಂಘದ ಇತ್ತೀಚಿನ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಮಾಹಿತಿಯಿತ್ತರು. ಮಹಿಳಾ ಅಧ್ಯಕ್ಷೆ  ಶೋಭಾ ಶೆಟ್ಟಿ ಅವರು ಮುಖ್ಯ ಅತಿಥಿ ಕವಿತಾ ವೇದಪ್ರಕಾಶ್ ಶ್ರೀಯಾನ್ ಅವರನ್ನು ಪರಿಚಯಿಸಿದರು. ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಅವರು ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ತಿಲ್ಲೋತ್ತಮಾ ವೈದ್ಯ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಸಿದರು. 

ಮಹಿಷಮರ್ಧಿನಿ ಭಜನಾ ಮಂಡಳಿಯವರಿಂದ ಭಕ್ತಿಗೀತೆ ನಡೆಯಿತು.

 ಈ ಸಂದರ್ಭದಲ್ಲಿ 2026ರ ಎನ್‌ಪಿಎಲ್ ಪಂದ್ಯದಲ್ಲಿ ವಿಜೇತರಾದ ತುಳು ಯುವ ಕ್ರಿಕೆಟ್ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ತಂಡದ ನಾಯಕ ರೋಹಿತ್ ಪೂಜಾರಿ, ಆಕರ್ಷ್ ಪೂಜಾರಿ,

ಅಕ್ಷಯ್ ಸುವರ್ಣ, ಧೀರಜ್ ಶೆಟ್ಟಿ, ವಿಜಯ್ ಆಚಾರ್ಯ, ವಿಕಾಸ್ ಆಚಾರ್ಯ, ಹರ್ಷ ಸೋಲಂಕಿ ಮತ್ತು  ಸಚಿನ್ ಆಚಾರ್ಯ ಅವರನ್ನು ಗೌರವಿಸಲಾಯಿತು. ತಂಡಕ್ಕೆ ಬೆಂಬಲ ನೀಡಿದ ನ್ಯಾ. ರಾಘವ ಎಂ ಅವರಿಗೂ ಅಭಿನಂದನೆ ಸಲ್ಲಿಸಲಾಯಿತು.

ನಂತರ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿತು. ಚಂದ್ರಿಕಾ ಭಟ್ ಅವರ ತೀರ್ಪಿನಲ್ಲಿ ಪ್ರತಿಭಾ ಸ್ಪರ್ಧೆ ಆಯೋಜಿಸಲಾಯಿತು. ಬಹುಮಾನಗಳನ್ನು ಸರಸ್ವತಿ ರಾವ್ ಹಾಗೂ ಶೋಭಾ ಶೆಟ್ಟಿ ಪ್ರಾಯೋಜಿಸಿದರು.

ಸಂಘದ ಗೌರವ ಕೋಶಾಧಿಕಾರಿ ದಿವಾಕರ ಕರ್ಕೇರ ವಂದನಾರ್ಪಣೆ ಮಾಡಿದರು. 

ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಮಾಜಿ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ, ರತಿ ಶಂಕರ್ ಶೆಟ್ಟಿ  ಕುಸುಮಾ ಶೆಟ್ಟಿ, ಟಿ.ವಿ. ಪೂಜಾರಿ, ಲಕ್ಷ್ಮಿ ದೇವಾಡಿಗ,  ಮಾಜಿ ಮಹಿಳಾ ಅಧ್ಯಕ್ಷೆ  ಹರಿಣಿ ಶೆಟ್ಟಿ, ಸುನಂದ ಶೆಟ್ಟಿ, ವೇದ ಶೆಟ್ಟಿ ಪ್ರಿಯಲಕ್ಷ್ಮಿ ಉಪ್ಪೊರ್ ವಸುದಾ ಪೈ ಜಯಂತಿ ಶೆಟ್ಟಿ, ಕಸ್ತೂರಿ ಶೆಟ್ಟಿ, ಜಯಂತಿ ಶೆಟ್ಟಿ, ಕೃಷ್ಣ ಸಾಲಿಯನ್, ಅಶೋಕ್ ಪೂಜಾರಿ, ಯಶವಂತ್ ಪೂಜಾರಿ, ಬಾಲಕೃಷ್ಣ ಬಂಗೇರ, ವಿಜಯಕುಮರ್ ಮೂಲ್ಕಿ, ಸಮಿತಿಯ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು.

ಚಿತ್ರ / ವರದಿ : ಈಶ್ವರ ಎಂ. ಐಲ್



Related posts

ಮುಂಬೈ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಣವಿ ಸುಧೀರ್ ಅಮೀನ್ ಗೆ ಶೇ.94.60 ಅಂಕ.

Mumbai News Desk

ಸಯನ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಗಸ್ಟ್ 15, 2026ಕ್ಕೆ ಗಡುವು ವಿಸ್ತರಣೆ; ವೆಚ್ಚದಲ್ಲೂ ಏರಿಕೆ

Mumbai News Desk

ತುಳುವೆಲ್‌ಫೇರ ಎಸೋಸಿಯೇಶನ್ ಡೊಂಬಿವಲಿ : ದಾಸರ ಭಜನಾ ಸ್ಪರ್ಧೆ.

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಮಹಾರಾಷ್ಟ್ರ Education Today.Co.ಇವರ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ – ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್

Mumbai News Desk

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk