July 23, 2026
Mumbai News Kannada
ಪ್ರಕಟಣೆ

ಜೂ. 23ಕ್ಕೆ ಸಾರಂತಾಯ ಗರೋಡಿ, ಉಲ್ಲಾಯ ದೈವಸ್ಥಾನ, ಸಸಿಹಿತ್ಲು, ಇದರ ಜೀರ್ಣೋದ್ಧಾರದ ಸಭೆ,







ಸಾರಂತಾಯ ಗರೋಡಿ, ಉಲ್ಲಾಯ ದೈವಸ್ಥಾನ, ಸಸಿಹಿತ್ಲು, ಇದರ ಜೀರ್ಣೋದ್ಧಾರದ ಬಗ್ಗೆ ಕ್ಷೇತ್ರದಲ್ಲಿ ನಡೆದ ಊರಿನ ಆಡಳಿತ ಮಂಡಳಿ ಏರ್ಪಡಿಸಿದ ಬ್ರಹತ್ ಸಭೆಯಲ್ಲಿ, ದೈವಸ್ಥಾನ ಪೂರ್ಣ ರೀತಿಯಲಿ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಪುನರ್ ನಿರ್ಮಾಣಗೊಂಡು,ಬರುವ ವಾರ್ಷಿಕ ನೇಮೋತ್ಸವದ ಮೊದಲು ಸುಸಜ್ಜಿತವಾಗಿ, ಪರಿವಾರ ದೈವಗಳಿಗೆ ಸೇವೆ ಸಲ್ಲಿಸ ಬೇಕೆಂದು ಧೃಡೀಕರಿಸಿ, ಶಂಕು ಪೂಜೆ ಇತ್ಯಾದಿ ಕಾರ್ಯಕ್ರಮಗಳನ್ನ ನಡೆಸುವಂತ್ತೆ ನಿರ್ಧಾರ ಕೈಗೊಳ್ಳಲಾಗಿದೆ.

ಊರಿನ ಆಡಳಿತ ಕಮಿಟಿಯ ಪ್ರಕಾರ ಪುನರ್ ನಿರ್ಮಾಣದ ಅಂದಾಜು ಬಜೆಟ್ ವೆಚ್ಚ ಸುಮಾರು ಒಂದೂವರೇ ಕೋಟಿ (1.50 Crores) ತಗಲ ಬಹುದೆಂದು ಲೆಕ್ಕ ಹಾಕಲಾಗಿದೆ.
ಹಾಗಾಗಿ ಮುಂಬಯಿಯಲ್ಲಿ ನೆಲೆಸಿರುವ ನಾವುಗಳು ಆರಾಧಿಸಿಕೊಂಡು ಬಂದಿರುವಂತ ಪರಿವಾರ ದೈವಗಳ ಕ್ಷೇತ್ರ ಜೀರ್ಣೋದ್ಧಾರದ ಹಣ ಸಂಗ್ರಹಣೆ (ಫಂಡ್ ರೈಸಿಂಗ್) ಬಗ್ಗೆ ಚರ್ಚಿಸುವರೇ ಜೂ.23, ರಂದು ಭಾನುವಾರ, ಬೆಳಿಗ್ಗೆ 10.30 ಕ್ಕೆ ಸರಿಯಾಗಿ, ಗೋರೆಗಾಂವ್ ಪೂರ್ವದಲ್ಲಿರುವ, ಹೋಟೆಲ್ ಜಯ ಲೀಲಾದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಸಸಿಹಿತ್ಲು ಗ್ರಾಮಸ್ಥರು ,ಭಕ್ತರು ಅಧಿಕ ಸಂಖ್ಯೆಯಲ್ಲಿ ಕ್ಲಪ್ತ ಸಮಯಕ್ಕೆ ಸಭೆಯಲ್ಲಿ ಉಪಸ್ಥಿತಿರಿದ್ದು, ಸಲಹೆ -ಸೂಚನೆ ನೀಡುವಂತ್ತೆ
ಮುಂಬಯಿ ಸಮಿತಿಯ ಪರವಾಗಿ.
ಅಧ್ಯಕ್ಷರಾದ ಸತೀಶ್ ಕೋಟ್ಯಾನ್ ವಿನಂತಿಸಿಕೊಂಡಿದ್ದಾರೆ
ಹೆಚ್ಚಿನ ಮಾಹಿತಿಗಾಗಿ
ಮೊಬೈಲ್ : 9867603767 ಸಂಪರ್ಕಿಸಿ.



Related posts

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಮುಂಬೈ ಘಾಟ್‌ಕೋಪರ್‌ನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜೂನ್ 26 ರಂದು ಶ್ರೀ ದೇವಿಯ ದರ್ಶನ ಸೇವೆ ಮತ್ತು ಅನ್ನಸಂತರ್ಪಣೆ

Mumbai News Desk

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನ ಅಸಲ್ಫಾನ.25 ರಂದು ಸಾಮೂಹಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ  “ತ್ರಿದಿನ ಹರಿಕಥಾ ಸಂಕೀರ್ತನೆ”

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk