32 C
Mumbai
April 24, 2026
Mumbai News Kannada
ಪ್ರಕಟಣೆ

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ





ಕಲೆ .ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇವರ ಜಂಟಿ  ಪ್ರಾಯೋಜಕದಲ್ಲಿ ಮೆಕ್ಕೆಕಟ್ಟು ಮೇಳ ಹಾಗೂ ಹಟ್ಟಿಯಂಗಡಿ ಮೇಳದ ಕಲಾವಿದರ ಕೂಡುವಿಕೆಯಲ್ಲಿ

ಜುಲೈ 12-ರಂದು ಶುಕ್ರವಾರ ಸಂಜೆ 4ರಿಂದ ಅಂಧೇರಿಯ ಪಶ್ಚಿಮದ  ವೀರಾ ದೇಸಾಯಿ ರೋಡ್ ಇಲ್ಲಿ ಮೊಗವೀರ ಭವನದಲ್ಲಿ.

‘ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶಿಸಲಿದ್ದಾರೆ.

ಯಕ್ಷಗಾನದ ಮಧ್ಯಾಂತರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದ ವನ್ನು  ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಗೌರವ ಅಧ್ಯಕ್ಷರಾದ ಸುರೇಶ್ ಆರ್ ಕಾಂಚನ್  ಉದ್ಘಾಟಿಸಲಿದ್ದಾರೆ,

ಸಭಾಧ್ಯಕ್ಷತೆ  ಅರುಣ್‌ ಕುಮಾರ್ (ಅಧ್ಯಕ್ಷರು : ಮೊಗವೀರ ವ್ಯವಸ್ಥಾಪಕ ಮಂಡಳಿ) ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅರವಿಂದ ಎಂ. ಶೆಟ್ಟಿ (ಮಾಜಿ ಕಾರ್ಪೋರೇಟರ್, ಮೀರಾ-ಭಾಯಂದರ್),

 ಗೋಪಾಲ್ ಎಸ್. ಪುತ್ರನ್ (ಈಕ್ವಿಟಿ ಗ್ರೂಪ್ ಆಫ್ ಹೊಟೇಲ್ಸ್)ಮಹಾಬಲ ಕುಂದರ್ (ಮುತ್ತ ಪ್ಲಾಸ್ಟಿಕ್‌ ಇಂಡಸ್ಟ್ರೀಸ್)ಸಂತೋಷ್ ಪುತ್ರನ್ ( ಮ್ಯಾನೇಜಿಂಗ್ ಪಾರ್ಟ್‌ನರ್ ಎಸ್.ಎ. ಗ್ರೂಪ್ ಆಫ್ ಹೊಟೇಲ್ಸ್)

ರಾಜೇಶ್ ಆರ್. ಕುಂದ‌ರ್ (ಮ್ಯಾನೇಜಿಂಗ್ ಪಾರ್ಟ್ನ‌ರ್ ಹ್ಯಾಪಿ ಬ್ರಿವಿಂಗ್ ಕಂಪನಿ) ಅಶೋಕ್ ಶೆಟ್ಟಿ, (ಮ್ಯಾನೇಜಿಂಗ್ ಪಾರ್ಟ್‌ನರ್, ಎಸ್.ಎ. ಗ್ರೂಪ್ ಆಫ್ ಹೊಟೇಲ್ಸ್)ಉದಯ ಶೆಟ್ಟಿ (ಸೇಲ್ಸ್ ಮ್ಯಾನೇಜರ್, ಸ್ವಿಫ್ಟ್ ಪ್ರೈಟ್ ಇಂಡಿಯಾ)ರಮೇಶ್ ಬಂಗೇರ ( ಸಿ ಓ. ಡಾಲ್ಫಿನ್ ಮೆರಿಟೈಮ್ ಏಜೆನ್ಸಿ ಪ್ರೈ.ಲಿ.)ರತ್ನಾಕರ ಚಂದನ್ (ಮ್ಯಾನೇಜಿಂಗ್ ಪಾರ್ಟ್‌ನ‌ರ್ ಸ್ಟೇಟಸ್ ಗ್ರೂಪ್ ಆಫ್ ಹೊಟೇಲ್ಸ್) ವಿನೋದ್ ಎಸ್. ಕೋಟ್ಯಾನ್ (ಮ್ಯಾನೇಜಿಂಗ್ ಪಾರ್ಟ್‌ನರ್ ರಾಯಲ್ ಸರ್ವಿಸಸ್ ಮುಂಬಯಿ ಪಾಲ್ಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ಯಕ್ಷಗಾನ ತಂಡದ ಹಾಸ್ಯ ಕಲಾವಿದ

ರಮೇಶ್ ಭಂಡಾರಿ . ಖ್ಯಾತ ಕಲಾವಿದ ಜಲವಲ್ಲಿ ವಿದ್ಯಾಧರ್ ರಾವ್, ಶ್ರೀ ಪಾತ್ರಧಾರಿ 

ನೀಲೋಡು ಶಂಕರ ಹೆಗಡೆ ಇವರನ್ನು ಸನ್ಮಾನಿಸಲಾಗುವುದು ಹಾಗೂ ಮೇಲದ ಯಜಮಾನರಾದ ರಂಜಿತ್ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು,

ಯಕ್ಷಗಾನದಲ್ಲಿ ಪ್ರಭುತ್ವ ರಂಗ ಕಲಾವಿದರಾದ  ಡೈನಮಿಕ್ ಸ್ಟಾರ್ ವಿದ್ಯಾಧರ ಜಲ್ವಳ್ಳಿ, ನೇಲ್ಕೊಡು ಶಂಕರ ಹೆಗಡೆ, ರಮೇಶ್ ಭಂಡಾರಿ ಮೂರೂರು, ರಾಜೇಶ್ ಭಂಡಾರಿ ,ಗುಣವಂತೆ, ನರಸಿಂಹ ಗಾವ್ಕರ್, ಜಯರಾಮ್ ಕೊಟಾರಿ ಕಮಲಿ ಶಿಲೆ, ಶ್ರೀಕಾಂತ ರಟ್ಟಾಡಿ, ದ್ವಿತೇಶ್ ಕಾಮತ್ ಹಿರಿಯಡ್ಕ, ಅಜಿತ್ ಶೆಟ್ಟಿ, ಮುಂತಾದ ಕಲಾವಿದರು ಭಾಗವಹಿಸಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಆರ್ ಡಿ ಸಂತೋಷ್ ಕುಮಾರ್,ಸುಧೀರ್ ಭಟ್ ಪೆರಡೂರು ಮದ್ದಲೆದಾರರಾಗಿ ಸುಬ್ರಹ್ಮಣ್ಯ ಹೆಗಡೆ ಮೂರೂರು ಚಂಡೆ ವಾದಕರಾಗಿ  ಪ್ರಶಾಂತ್ ಭಂಡಾರಿ ಭಾಗವಹಿಸಲಿದ್ದಾರೆ.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕಾಗಿ ಮಗುವಿರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ,

ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಧಿಕಾರಿ ಸತೀಶ್ ಶ್ರೀಯಾನ್ ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್. ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಗೌರವ ಕೋಶಧಿಕಾರಿ ಪ್ರತಾಪ್ ಕರ್ಕೇರ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ



Related posts

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ, ಜ. 26 ರಂದು ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ

Mumbai News Desk

ಏಪ್ರಿಲ್ 4ರಿಂದ ಕುರುಡುಂಜೆ ಗರಡಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಂಭ್ರಮ

Mumbai News Desk