



‘ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬ (125ನೇ ವಾರ್ಷಿಕೋತ್ಸವ) ಸಮಾರಂಭ’ವು ನವಂಬರ್ 17 ಮತ್ತು 18 ರಂದು ಉಡುಪಿ ನ್ಯಾಯಾಲಯದ ಆವರಣದಲ್ಲಿ ಜರಗಲಿದೆ.
ಕಾರ್ಯಕ್ರಮದ ವಿವರ :
ತಾ. 17ರಂದು ಬೆಳ್ಳಿಗೆ 9.30 ಗಂಟೆಗೆ ಜೋಡುಕಟ್ಟೆ ಜಂಕ್ಷನ್ ನಿಂದ ಉಡುಪಿ ನ್ಯಾಯಲಯದ ತನಕ ಮೆರವಣಿಗೆ.
10 ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮ
ಮಧ್ಯಾಹ್ನ 2.30 ರಿಂದ 3.30ರ ತನಕ ವಿಚಾರ ಸಂಕಿರಣ/ಉಪನ್ಯಾಸ – 1
3.45ರಿಂದ 4.45ರ ತನಕ ವಿಚಾರ ಸಂಕಿರಣ/ಉಪನ್ಯಾಸ -2
ಸಂಜೆ 5 ರಿಂದ 5.30 : ಸಾಂಸ್ಕೃತಿಕ ಕಾರ್ಯಕ್ರಮ (ಉಡುಪಿ ವಕೀಲರ ಸಂಘದವರಿಂದ )
ಸಂಜೆ 5.30ಯಿಂದ 6 : ಸಾಂಸ್ಕೃತಿಕ ಕಾರ್ಯಕ್ರಮ (ಕುಂದಾಪುರ ವಕೀಲರ ಸಂಘದವರಿಂದ )
ಸಂಜೆ 6 ರಿಂದ 6.30 : ಕಾರ್ಕಳ ವಕೀಲರ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ )
6.30 ಯಿಂದ 7 : ವೈಕುಂಠ ಬಾಳಿಗ ಕಾಲೇಜ್ ಆಪ್ ಲಾ ದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
7 ರಿಂದ 9 “ಕಲಮಯಂ”, ಉಡುಪಿ ಇವರಿಂದ ಜಾನಪದ ಸಂಭ್ರಮ
ತಾ. 18.11.24
ಬೆಳಿಗ್ಗೆ 10ರಿಂದ 11 : ವಿಚಾರ ಸಂಕಿರಣ/ಉಪನ್ಯಾಸ-3
11.15ರಿಂದ 12.15 : ವಿಚಾರ ಸಂಕಿರಣ/ಉಪನ್ಯಾಸ-4
ಮದ್ಯಾಹ್ನ 2.30ರಿಂದ 4 : ಪ್ರಾಣೇಶ್ ಗಂಗಾವತಿ ಮತ್ತು ತಂಡದವರಿಂದ ಹಾಸ್ಯ ರಂಜನೆ
ಸಂಜೆ 4.30ರಿಂದ 6 : ಸಮಾರೋಪ ಸಮಾರಂಭ
6ರಿಂದ 9 : ರಾಜ್ ಗೋಪಾಲ ಮತ್ತು ತಂಡದವರಿಂದ ರಸಮಂಜರಿ (ಗಾಯಕರುಗಳಾದ ಜಸ್ಕರನ್ ಸಿಂಗ್ ಮತ್ತು ಅನನ್ಯ ಪ್ರಕಾಶ್ ಹಾಗೂ ಕರ್ನಾಟಕ/ಕೇರಳದ ಗಾಯಕರಿಂದ )
ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಕಾರ್ಯಧ್ಯಕ್ಷ ಮಟ್ಟಾರು ರತ್ನಕರ ಹೆಗ್ಡೆ, ಕಾರ್ಯದರ್ಶಿ ಕೆ ಆರ್ ರಾಮಚಂದ್ರ ಅಡಿಗ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೇನೋಲ್ಡ್ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ. ಆರ್, ಜತೆ ಕಾರ್ಯದರ್ಶಿ ರವೀಂದ್ರ ದೇವಾಡಿಗ ಬೈಲೂರು, ಕ್ರೀಡಾ ಕಾರ್ಯದರ್ಶಿ ಸುಮಿತ್ ಹೆಗ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ ಕುಮಾರ್ ಮೂಡುಬೆಳ್ಳೆ, ಕೋಶಧಿಕಾರಿ ಗಂಗಾಧರ್ ಎಚ್. ಎಂ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಎರಡೂ ದಿನಗಳ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಬಯಸಿದ್ದಾರೆ.




