30.6 C
Mumbai
April 23, 2026
Mumbai News Kannada
ಪ್ರಕಟಣೆ

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ





ಮೀರಾ ರೋಡ್, ಜ. 25:  ಬಾಲಾಜಿ ಸನ್ನಿಧಿ ಪಲಿಮಾರು ಮಠ ಮೀರಾ ರೋಡ್ ಜ.  26ರಂದು  ರವಿವಾರ ಬೆಳಿಗ್ಗೆ 7ರಿಂದ ಸಾಯಂಕಾಲ 8ರ ತನಕ ಶ್ರೀ ಸನ್ನಿಧಿಯಲ್ಲಿ ಮಹಾನಗರದ ವಿವಿಧ ಸಂಘಸಂಸ್ಥೆಗಳ ಸಹಕಾರ ದಲ್ಲಿ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ  ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠ ಇಲ್ಲಿ ಆಯೋಜಿಸಲಾಗಿದೆ.

   ಈ ವಿಶೇಷ ಏಕಾಹ ಭಜನಾ ಕಾರ್ಯಕ್ರಮ ದಲ್ಲಿ ಮೀರಾ ಬಾಯಂಧರ್ ಪರಿಸರದ ವಿವಿಧ ಸಂಸ್ಥೆಯ ಭಜನಾ ಮಂಡಳಿಗಳು  ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 7ಘಂಟೆಗೆ  ಶ್ರೀ ಬಾಲಾಜಿ ಭಜನಾ ಮಂಡಳಿರ ಸದಸ್ಯ ರಿಂದ ಭಜನೆ ಪ್ರಾರಂಭಗೊಳ್ಳಲಿದೆ.

    . ಆಬಳಿ ರಜಕ ಭಜನಾ ಮಂಡಳಿ ,ಬಂಟರ ಸಂಘ ಮೀರಾ ಭಯಂದರ್ ಸಮಿತಿ, ಆರಾಧನಾ ಭಜನಾ ಮಂಡಳಿ, ಬಿಲ್ಲವರ ಎಸೋಶಿಯೇಶನ್ ಮೀರಾರೋಡ್ ಸಮಿತಿ ಭಜನಾ ಮಂಡಳಿ, ಶ್ರೀ ಹನುಮಾನ್ ಭಜನಾ ಮಂಡಳಿ, ಶ್ರೀಕಟಿಲೇಶ್ವರಿ ಭಜನ ಮಂಡಳಿ ಮೊಗವೀರ ಭಜನಾ ಮಂಡಳಿ,  ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,  ಶ್ರೀ ಶನೇಶ್ವರ ಭಜನಾ ಮಂಡಳಿ, ಕರ್ನಾಟಕ ಭಜನಾ ಮಂಡಳಿ,  ಬಂಟ್ಸ್ ಫೋರಂ ಭಜನಾ ಸಮಿತಿ,ಮೀರಾ ಬೈಂದರ್. ಕನ್ನಡ ಸಂಘ ,ಶ್ರೀ ವಿಠ್ಠಲ ಭಜನಾ ಮಂಡಳಿ ಹೀಗೆ ಸುಮಾರು 17 ಭಜನ ಮಂಡಳಿಯ ವರಿಂದ ಭಜನೆ ಜರಗಲಿದೆ, ಕೊನೆಯಲ್ಲಿ ರಾತ್ರಿ 8ಘಂಟೆಗೆ ಶ್ರೀ ಬಾಲಾಜಿ ಭಜನಾ ಮಂಡಳಿಯವರಿಂದ  ಸಮರೋಪ ಭಜನೆಯ ಬಳಿಕ  ಮಹಾ ಮಂಗಳಾರತಿ ಜರುಗವುದು.

       ಸರ್ವ ಭಜನಾ ಸಂದ್ಭಕ್ತರು  ದಿನ ಪೂರ್ತಿ ಜರಗುವ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಆಡಳಿತ ಮಂಡಳಿ ವಿನಂತಿಸಿದೆ.



Related posts

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk

ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಯಿಂದ ಸೆ. 28 ರಂದು ಶನಿ ಸಿಂಗನಾಪುರದಲ್ಲಿ ಶನಿ ಪೂಜೆ.

Mumbai News Desk

ಡಿ.10 ರಂದು ಕರ್ನಾಟಕ ಸಂಘ, ಡೊಂಬಿವಲಿಯ ನಾಡಹಬ್ಬ ಸಮಾರಂಭ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :ಜ. 7 ರಂದು 36ನೇ ವಾರ್ಷಿಕೋತ್ಸವ

Mumbai News Desk