July 23, 2026
Mumbai News Kannada
ಕ್ರೀಡೆ

ತುಳು ಸಂಘ ಬೊರಿವಲಿ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟ, – ಕ್ರೀಡೆಗಳು ಸಂಘದ ಅಭಿವೃದ್ದಿಗೆ ಪೂರಕವಾಗಲಿ – ಹರೀಶ್ ಮೈಂದನ್







ಮುಂಬಯಿ : ಪರಿಸರದ ತುಳು – ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ತುಳು ಸಂಘ ಬೊರಿವಲಿ ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂಘದ ಯುವ ವಿಭಾಗದಿಂದ ನಡೆದ ಕ್ರಿಕೆಟ್ ಪಂದ್ಯಾಟ ಸಂಘದ ಹಿರಿ ಕಿರಿಯ ಸದಸ್ಯರುಗಳನ್ನು ಒಗ್ಗೂಡಿಸುದರೊಂದಿಗೆ ಸಂಘದ ಬೆಳವಣೆಗೆಗೆ ಸಹಕಾರಿಯಾಗುವುದು ಎಂದು ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಹಾರೈಸಿದರು.


ಸಂಘದ ಯುವ ವಿಭಾಗದ ವತಿಯಿಂದ ಕ್ರಿಕೆಟ್ ಪಂದ್ಯಾಟವು ಮಾ. 30 ರಂದು ಬೊರಿವಲಿ (ಪ.) ಎಕ್ಸರ್ ವಿಲೇಜ್ ಹ್ಯಾಟ್ರಿಕ್ ಸ್ಪೋರ್ಟ್ಸ್ ಫೀಲ್ಡ್ ನ್ಯೂ ಲಿಂಕ್ ರಸ್ತೆ, ಇಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ನ್ಯಾ. ರಾಘವ ಎಂ. ಇವರ ಮಾರ್ಗದರ್ಶನದಲ್ಲಿ ನಡೆಯಿತು. ಸಂಘದ ಯುವ ವಿಭಾಗದ ರೋಹಿತ್ ಪೂಜಾರಿ ನಾಯಕತ್ವದ ತುಳು ಸೂಪರ್ ಕಿಂಗ್ಸ್ ಟೀಮ್ ವಿಜಯಿ ಸಾಧಿಸಿದೆ. ರನ್ನರ್ ಅಫ್ ಆಗಿ ಚಂದ್ರಹಾಸ ಬೆಲ್ಚಡ ನಾಯಕತ್ವದ ತುಳು ಸೂಪರ್ ರೈಸರ್ಸ್.
ಇದರಲ್ಲಿ ಸಂಘದ ಎಲ್ಲಾ ಟೀಮ್ ಗಳು ಬಾಗವಹಿಸಿದ್ದು ದಿಲೀಪ್ ಜವೇರಿ ಪಟೇಲ್ ಮತ್ತು ಹರ್ಷ್ ಸೋಲಂಕಿ ತೀರ್ಪುಗಾರರಾಗಿ ಸಹಕರಿಸಿದರು.
ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್, ಪ್ರಧಾನ ಕಾರ್ಯದರ್ಶಿ ಕೃಷ್ಣ ರಾಜ್ ಸುವರ್ಣ, ಗೌ. ಕೋಶಾಧಿಕಾರಿ ದಿವಾಕರ ಕರ್ಕೇರ, ತುಳು ಸಂಘ ಬೊರಿವಲಿ ಯ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕೋಶಾಧಿಕಾರಿ ಟಿವಿ ಪೂಜಾರಿ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ವಿಜಯಕುಮಾರ್ ಮೂಲ್ಕಿ, ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ, ಸವಿತ ಸಿ. ಶೆಟ್ಟಿ, ಕಸ್ತೂರಿ ಎಸ್. ಶೆಟ್ಟಿ, ರಾಜೇಶ್ವರಿ ಜಿ. ಸುವರ್ಣ, ಜಯಂತಿ ಕೆ. ಶೆಟ್ಟಿ, ಸುಮತಿ ಸಾಲ್ಯಾನ್, ಕುಸುಮ ಬಿ. ಶೆಟ್ಟಿ, ಪೂರ್ಣಿಮಾ ಆರ್. ಪೂಜಾರಿ, ವೇದ ಶೆಟ್ಟಿ, ಅಶೋಕ್ ಪೂಜಾರಿ, ಲಕ್ಷ್ಮಿ ದೇವಾಡಿಗ, ಜಯರಾಮ್ ಶೆಟ್ಟಿ, ಸರಸ್ವತಿ ರಾವ್, ಸುನಂದ ಶೆಟ್ಟಿ, ಪ್ರವೀಣ್ ಶೆಟ್ಟಿ ಹಾಗೂ ಸಂಘ ಉಪವಿಭಾಗಗಳ ಇತರ ಸದಸ್ಯರು ಸಹಕರಿಸಿದರು.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ (ಮೀರಾ-ಭಾಯಂದರ್ ಶಾಖೆ): ಕ್ರೀಡಾಕೂಟ – 2026 ಸಂಭ್ರಮ

Mumbai News Desk

ಸಿದ್ಧಕಟ್ಟೆ: ಕೊಡಂಗೆ ವೀರವಿಕ್ರಮ ಜೋಡುಕರೆ ಕಂಬಳ :166 ಜೋಡಿ ಭಾಗಿ

Mumbai News Desk

ಸುರತ್ಕಲ್ :  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, 

Mumbai News Desk

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk

ಸಮರ್ಥ್ ರೈ, ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಅಂಡರ್-15 ವಿಭಾಗದಲ್ಲಿ ಅತೀ ಹೆಚ್ಚು ಗೋಲ್ ಹೊಡೆತದಿಂದ,ತಂಡ ಟಾಪ್ 3ರ ಸ್ಥಾನಕ್ಕೆ

Mumbai News Desk

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿ

Mumbai News Desk