September 6, 2026
Mumbai News Kannada
ಮುಂಬಯಿ

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.





ಮುಂಬೈಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ಸ್ ಆಫ್  ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು 25 ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್  (ಗೋಮಂತಕ್ ಸೀ ಫುಡ್, (Gomantak sea food )ಹೊಟೇಲಿಗೆ 2025 ರ ಟೈಮ್ಸ್ ಫುಡ್ & ನೈಟ್‌ಲೈಫ್ ಪ್ರಶಸ್ತಿ ದೊರಕಿದೆ. 

ಮಾ 29 ರಂದು ಅಂದೇರಿ ಪೂರ್ವದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಐಟಿಸಿ ಮರಾಠ ಹೋಟೆಲ್  ಸಭಾಂಗಣದಲ್ಲಿ ಟೈಮ್ಸ್ ಸಮೂಹದವರು ಕೊಡಮಾಡಿದ ಈ ಪ್ರಶಸ್ತಿಯನ್ನು ಕೊಂಕಣ್ ಸ್ವಾದ್ ಸಮೂಹ ಹೋಟೇಲಿನ ಕರ್ನಿರೆ  ಗಂಗಾಧರ್ ಎನ್ ಅಮೀನ್, ಕರಣ್ ಶೆಟ್ಟಿ, ಮತ್ತು ಐಶ್ವರ್ಯ ಗಂಗಾಧರ್ ಅಮೀನ್ ಸ್ವೀಕರಿಸಿದರು. 

ಕೊಂಕಣ್ ಸ್ವಾದ್ ಹೋಟೇಲು ಮುಂಬಯಿಯ ಅತ್ಯುತ್ತಮ ಸಮುದ್ರಾಹಾರ (ಸೀ ಫುಡ್) ಕ್ಯಾಶುಯಲ್ ಡೈನಿಂಗ್ ಮತ್ತು  ಅತ್ಯುತ್ತಮ ಕರಾವಳಿ ಕ್ಯಾಶುಯಲ್ ಡೈನಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೆಮ್ಮೆ ತಂದಿದ್ದಾರೆ.

ಅತ್ಯುತ್ತಮ ಸಮುದ್ರಾಹಾರವನ್ನು ಪೂರೈಸಲು ಮತ್ತು ಕರಾವಳಿ ಪಾಕಪದ್ಧತಿಯನ್ನು ಉತ್ತೇಜಿಸಲು ಅವರ  25 ವರ್ಷಗಳ ಕಠಿಣ ಪರಿಶ್ರಮ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ.

  ಗೊರೆಗಾಂವ್ ಪಶ್ಚಿಮದ ಲಿಂಕ್ ರೋಡ್ ನಲ್ಲಿ ಪ್ರಾರಂಭಗೊಂಡ ಹೋಟೆಲ್ ಇದೀಗ ಅಂಧೇರಿ ಪೂರ್ವದ ಜೋಗೇಶ್ವರಿ ಪಶ್ಚಿಮದ ಲಿಂಕ್ ರೋಡಿನಲ್ಲಿಯೂ ಆರಂಭವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.



Related posts

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್‌ : ಅಂಕಲೇಶ್ವರ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಕಾಂದಿವಿಲಿ ಕನ್ನಡ ಸಂಘ ದಹಾಣುಕರ್ ವಾಡಿ 29ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇದರ ದಶಮಾನೋತ್ಸವ ಕಾರ್ಯಕ್ರಮ.

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿ. ಹೊಸ ವರ್ಷದ ಗುರುಪೂಜೆ.

Mumbai News Desk

ಮಹಾರಾಷ್ಟ್ರದಲ್ಲಿ ಮುಂಗಾರು ಆರ್ಭಟ: ಮುಂಬೈ ಮತ್ತು ಕೊಂಕಣ ಭಾಗದಲ್ಲಿ ರೆಡ್ ಅಲರ್ಟ್, ಅಸ್ತವ್ಯಸ್ತಗೊಂಡ ಜನಜೀವನ

Mumbai News Desk

ಜವಾಬ್ ಆಶ್ರಯದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ‘ನೀರಾಜನ’ ಕೃತಿ ಬಿಡುಗಡೆ – ಯಕ್ಷಗಾನ ತಾಳಮದ್ದಳೆ

Mumbai News Desk