July 23, 2026
Mumbai News Kannada
ಸುದ್ದಿ

ಹಿರಿಯ ರಂಗ ಕಲಾವಿದ ಸುಂದರ ಮೂಡಬಿದ್ರಿ ಕುಲಾಲ ಸಮಾಜದ ಗೌರವ. 







ಮುಂಬೈ ತುಳು ರಂಗಭೂಮಿಯ ಅಭಿನಯದ ನೆನಪುಗಳು ಬದುಕಿಗೆ ಸ್ಪೂರ್ತಿ : ಸುಂದರ್ ಮೂಡಬಿದ್ರಿ 

ಮುಂಬೈಯ ಹಿರಿಯ ರಂಗ ಕಲಾವಿದ, ನಿರ್ದೇಶಕ ಲೇಖಕ,ಕುಲಾಲ ಸಮಾಜದ ಹಿರಿಯ ಮುಕ್ಸದಿ ಸುಂದರ್ ಮೂಡಬಿದ್ರಿ ಇವರ ವೈವಾಹಿಕ ಬದುಕಿನ 50ನೇ ಸಂಭ್ರಮಾಚರಣೆ ಎ 24. ರಂದು ಅವರ ಪುತ್ರಿಯ ಸ್ವಗ್ರಹವಾದ ಥಾಣೆ ಪಶ್ಚಿಮ ಮಾಜಿವಾಡ ಸಾಯಿನಾಥ್ ನಗರ ರುಸ್ತಮ್ಜೀ ಅಥೇನಾ, ಇಲ್ಲಿ ಸತ್ಯನಾರಾಯಣ ಮಹಾಪೂಜೆಯೊಂದಿಗೆ ನಡೆಯಿತು. 

ಸಂದರ್ಭದಲ್ಲಿ ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ ಪಾದೆ ಬೆಟ್ಟು, ಉಪಾಧ್ಯಕ್ಷ ಡಿ ಐ ಮೂಲ್ಯ, ಕುಲಾಲ ಸಂಘದ ಚರ್ಚಿ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರತ್ನ ಕುಲಾಲ್, ಹಿರಿಯ ರಂಗ ಕಲಾವಿದ ನಾರಾಯಣ ಶೆಟ್ಟಿ ನಂದಳಿಕೆ ಮತ್ತಿತರರು ಉಪಸ್ಥರಿದರು.

ಸುಂದರ್ ಮೂಡಬಿದ್ರಿ ದಂಪತಿಯನ್ನು ಕುಲಾಲ ಸಂಘದ ಮತ್ತು ಕುಲಾಲ ಪ್ರತಿಷ್ಠಾನದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. 

ಗೌರವವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಮಾತನಾಡಿ ನನ್ನ ಸಾಮಾಜಿಕ ಹಾಗೂ ರಂಗಭೂಮಿಯ ಸೇವೆಯನ್ನು ಮುಂಬೈಯ ಕಲಾಭಿಮಾನಿಗಳು ವಿವಿಧ ಸಂಘ-ಸಂಸ್ಥೆಗಳು . ಹಾಗೂ ಮುಂಬೈ ಕುಲಾಲ ಸಂಘ ಸದಾ ನೆನಪಿಸಿರುವುದು ನನಗೆ ಬದುಕು ಮುನ್ನಡೆಸಲು ಪೂರ್ತಿಯಾಗುತ್ತಿದೆ. ಹಿಂದೇ ನಾನು ಮಾಡಿರುವ ಪ್ರತಿಯೊಂದು ನಾಟಕಗಳನ್ನು ನೋಡಿ ನಾರಾಯಣ್ ಶೆಟ್ಟಿ ನಂದಳಿಕೆಯವರು ಕಲಾ ಸೇವೆಗೆ ಸ್ಪೂರ್ತಿ ತುಂಬಿದವರು. ನನ್ನ ಪತ್ನಿ ಮಕ್ಕಳು ಅಳಿಯ ಮೊಮ್ಮಕ್ಕಳ ಪ್ರೋತ್ಸಾಹದಿಂದ ಬದುಕು ಮುನ್ನಡೆಸುತ್ತಿದ್ದೇನೆ ಎಂದು ನುಡಿದರು.

ಸುಂದರ ಮೂಡಬಿದ್ರಿ ಮತ್ತು ರತ್ನ ಸುಂದರ್ ಮೂಡಬಿದ್ರಿ ದಂಪತಿಗಳು. ಇಬ್ಬರು ಪುತ್ರಿಯರು. ಅಳಿಯ ಮೊಮ್ಮಕ್ಕಳು ಮತ್ತು  ಪರಿವಾರದವರು ಉಪಸ್ತರಿದ್ದರು.



Related posts

ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರಿಗೆ ಮಾತೃ ವಿಯೋಗ

Mumbai News Desk

ಬಂಟ್ವಾಳ: ಮಕ್ಕಳ ಸಂಭ್ರಮೋತ್ಸವ, ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ : ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಪ್ರಭಾ ಎನ್ ಸುವರ್ಣ

Mumbai News Desk

ಡೊಂಬಿವಲಿ – ವೆಂಕಟೇಶ್ ಕೆ. ಕೋಟ್ಯಾನ್ ನಿಧನ.

Mumbai News Desk

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್

Mumbai News Desk

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

Mumbai News Desk

ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ

Mumbai News Desk