30.9 C
Mumbai
June 8, 2026
Mumbai News Kannada
ಪ್ರಕಟಣೆ

ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವ ಆಮಂತ್ರಣ ಪತ್ರಿಕೆ ಬಿಡುಗಡೆ.





ಮುಂಬೈಯಲ್ಲಿನ ಕಟೀಲಿನ ಭಕ್ತರ ಸಂಪೂರ್ಣ ಸಹಕಾರವಿರಲಿ:
ಕಮಲಾ ದೇವಿ‌ಪ್ರಸಾದ್ ಆಸ್ರಣ್ಣ

ಕಟೀಲು; ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ‌ ಮುಂಬೈ- ಯು.ಎ.ಇ ವತಿಯಿಂದ ಅಗಸ್ಟ್ 2 ರಂದು ಮುಂಬೈ ಕುರ್ಲ ಬಂಟರ ಭವನದಲ್ಲಿ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಟೀಲು ದೇವಳದಲ್ಲಿ ನಡೆಯಿತು.

ಕಟೀಲು ದೇವಳದ ಪ್ರಧಾನ ಅರ್ಚಕರಾದ ಲಕ್ಷೀ ನಾರಾಯಣ ಆಸ್ರಣ್ಣ ಮತ್ತು ಕಮಲಾ ದೇವಿ‌ಪ್ರಸಾದ್ ಆಸ್ರಣ್ಣ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಲಕ್ಷೀನಾರಾಯಣ ಆಸ್ರಣ್ಣ ಕಳೆದ 30 ವರ್ಷಗಳಿಂದ
ದಿ. ಗೋಪಾಲಕೃಷ್ಣ ಆಸ್ರಣ್ಣ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಆಸ್ರಣ್ಣ ಅಭಿಮಾನಿಗಳು ಹಮ್ಮಿಕೊಂಡು ಬಂದಿದ್ದಾರೆ, ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂಬೈಯಲ್ಲಿನ ಕಟೀಲಿನ ಭಕ್ತರು ಸಂಪೂರ್ಣ ಸಹಕಾರ ನೀಡುತ್ತಿರುವುದು ಅಭಿನಂದನೀಯ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಂಸ್ಮರಣಾ ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಉದ್ಘಾಟನೆ ಮಾಡಿದ್ದು ನಂತರದ ದಿನಗಳಲ್ಲಿ ವರ್ಷದದಿಂದ ವರ್ಷಕ್ಕೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುತ್ತಾ ಬಂದಿದೆ ಎಂದರು.
ಈ ಸಂದರ್ಭ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಪ್ರವರ್ತಕ ಪದ್ಮನಾಭ ಕಟೀಲು ಆಮಂತ್ರಣ ಪತ್ರಿಕೆಯನ್ನು ಕಟೀಲು ಕ್ಷೇತ್ರದಲ್ಲಿ ವಿಶೇಷ ಪೂಜ್ಯ ಸಲ್ಲಿಸಿ ಬಿಡುಗಡೆಗೊಳಿಸಿದರು.
ಲಕ್ಷ್ಮಿ ನಾರಾಯಣ ಆಸ್ರಣ್ಣ ಶ್ರೀ ದುರ್ಗೆಗೆ ವಿಶೇಷ ಪೂಜ್ಯ ಸಲ್ಲಿಸಿ, ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲಿ,ಪಾಲ್ಗೊಂಡವರಿಗೂ ವೀಕ್ಷಿಸಿದವರಿಗೂ ಶ್ರೀದೇವಿ ಅನುಗ್ರಹಿಸಲು ಎಂದರು.

ಅಗಸ್ಟ್ 2 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕಟೀಲು ಮೇಳದ ಆಯ್ದ ಕಲಾವಿದರಿಂದ ಶ್ರೀ ದೇವಿ‌ಮಹಾತ್ಮೆ ಯಕ್ಷಗಾನ ನಡೆಯಲಿದೆ.



Related posts

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೂ.14 : 35ನೇ ವಾರ್ಷಿಕ ಮಹಾಪೂಜೆ

Mumbai News Desk

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ

Mumbai News Desk

 ಆ. 8 ರಂದು ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ಶ್ರೀ ವರ ಮಹಾಲಕ್ಷ್ಮಿ ಪೂಜೆ

Mumbai News Desk

ಫೆ. 19 ರಿಂದ 24 ರ ವರಗೆ ಭಾಂಡುಪ್ ಪಶ್ಚಿಮದ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕುಂಬಾಭಿಷೇಕ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.

Mumbai News Desk

ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಜೀವನ ಆಧಾರಿತ”ದ್ವಮ್ದ್ವ” ಕನ್ನಡ ಚಲನಚಿತ್ರ, ಮುಂಬೈಯಲ್ಲಿ ಮೇ 16ಕ್ಕೆ ಪ್ರದರ್ಶನ.

Mumbai News Desk

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk