30.5 C
Mumbai
June 8, 2026
Mumbai News Kannada
ಮುಂಬಯಿ

ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ , ಹೋಟೆಲ್ ಬಂದ್





ಪಾಲ್ಘರ್ ತಾ: 14.07.2025


ಸುದ್ದಿ ವಿವರ :ಪಿ.ಆರ್.ರವಿಶಂಕರ್
ವ್ಯಾಟ್ ಮತ್ತು ಅಬಕಾರಿ ಪರವಾನಗಿ ತೆರಿಗೆಯಲ್ಲಿ ಹೆಚ್ಚಳ ಹಾಗೂ ಉದ್ಯಮದಲ್ಲಿ ಆಗುವ ವ್ಯತಿರಿಕ್ತ ಪರಿಣಾಮವನ್ನು ಸರಕಾರದ ಗಮನಕ್ಕೆ ತರುತ್ತಾ ಇಂಡಿಯನ್ ಹೋಟೆಲ್ಸ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ( ಆಹಾರ್) ಮಹಾರಾಷ್ಟ್ರದಾದ್ಯಂತ ಒಂದು ದಿನದ ಬಂದ್ ಗೆ ಕರೆ ನೀಡಿದ್ದು ಇಂದು ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ಸದಸ್ಯರು ಇಲ್ಲಿನ ಹುತಾತ್ಮ ಚೌಕ್ ಪರಿಸರದಲ್ಲಿ ಜಮಾಯಿಸಿ ತಮ್ಮವಿರೋಧವನ್ನು ಘೋಷಣೆಗಳೊಂದಿಗೆ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪರಿಸರದ ಎಲ್ಲಾ ಬಾರ್ ಮತ್ತು ಪರ್ಮಿಟ್ ರೂಮ್ ಗಳನ್ನು ಬಂದ್ ಮಾಡಿದ್ದು , ಒಂದೇ ವರ್ಷದ ಅವ ಧಿಯಲ್ಲಿ ಮೂರನೆಯ ಬಾರಿಗೆ ತೆರಿಗೆ ಹೆಚ್ಚಳದಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುವ ಅತೀ ತೊಂದರೆ ಹಾಗೂ ಹಿನ್ನಡೆ ಕುರಿತು ಗಮನಕ್ಕೆ ತರುವಲ್ಲಿ ಪ್ರತಿಭಟನಾ ರೂಪದಲ್ಲಿ ಒಂದು ದಿನದ ಬಂದ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ನ ನಿತಾಂತ್ ಚವ್ಹಾಣ್ , ಸತೀಶ್ ಶೆಟ್ಟಿ , ಗಿರೀಶ್ ಶೆಟ್ಟಿ , ಮಂಗೇಶ್ ಆವಸ್ಥಿ , ಸಿದ್ದೇಶ್ ಶೆಟ್ಟಿ , ಅಭಿ ಷೇಕ್ ಶೆಟ್ಟಿ , ಕೌಶಿಕ್ ಶೆಟ್ಟಿ , ಪ್ರವೀಣ್ ಶೆಟ್ಟಿ , ಮ್ಯಾಕ್ಸಿ ಡಿಸಿಲ್ವ ಮತ್ತು ರಮೇಶ್‌ ಪೂಜಾರಿ ಹಾಗೂ ಹೋಟೆಲ್ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .
ಆ ಬಳಿಕ ಹೋಟೆಲ್ ಅಸೋಸಿಯೇಶನ್ ಸದಸ್ಯರು ಉಪಜಿಲ್ಲಾಧಿಕಾರಿ ಕಛೇರಿಗೆ ತೆರಳಿ ತಮ್ಮ ಅಹವಾಲು ಪತ್ರವನ್ನು ಸಮರ್ಪಿಸಿದರು
ಸುದ್ದಿ ವಿವರ : ಪಿ.ಆರ್.ರವಿಶಂಕರ್
Cell No. 8483980035



Related posts

ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡ (ರಿ.): ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ 31ನೇ ವಾರ್ಷಿಕ ಮಹಾಸಭೆ

Mumbai News Desk

“ಅಂಬರ್ನಾಥ್ ಗೋಪಾಲ್ ಪೂಜಾರಿ” ಯವರಿಗೆ ಬಿಲ್ಲವರ ಅಸೋಸಿಯೇಷನ್, ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಸನ್ಮಾನ

Mumbai News Desk

ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ  ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಜಯ ಎ ಶೆಟ್ಟಿ ಶಿಮಂತೂರು  ಆಯ್ಕೆ,

Mumbai News Desk

ಜಯ ಲೀಲಾ ಟ್ರಸ್ಟ್ ವತಿಯಿಂದ ಸಂಶೋಧನ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಣೆ

Mumbai News Desk

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್,30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಸಾಂತಾಕ್ರೂಜ್  ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ

Mumbai News Desk