32 C
Mumbai
April 24, 2026
Mumbai News Kannada
ಪ್ರಕಟಣೆ

ಫೆ 29 ರಿಂದ ಮಾ 2 ರ ವರಗೆ ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ





ಡೊಂಬಿವಲಿ ಅಜ್ಜೆಗಾಂವ್ ತಿಲಕ ಕಾಲೇಜ ಹತ್ತಿರದ
ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವವು 29-02-2024ನೇ ಗುರುವಾರ ಸಂಜೆ 6 ಗಂಟೆಯಿಂದ ತಾ. 02.03.2024ರ ಶನಿವಾರ ರಾತ್ರಿ 9ಗಂಟೆಯ ತನಕ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ ಭಟ್ ಕಾನಂಗಿಯವರ ನೇತೃತ್ವದಲ್ಲಿ ಜರಗಲಿರುವುದು.

ಕಾರ್ಯಕ್ರಮ :

29.02.2024 ಗುರುವಾರ
ಸಂಜೆ 6.30 ರಿಂದ ವಾಸ್ತುಹೋಮ, ವಾಸ್ತುಪೂಜೆ, ಪ್ರಕಾರ ಬಲಿ, ಬಿಂಭ ಶುದ್ಧಿ

01.03.2024 ಶುಕ್ರವಾರ
ಬೆಳಿಗ್ಗೆ 6.30 ರಿಂದ ತೋರಣ ಮುಹೂರ್ತ, ಪುಣ್ಯಾಹವಾಚನ, ನವಕ ಪ್ರದಾನ ಹೋಮ, ಗಣಹೋಮ, ಬಿಂಬ ಶುದ್ಧಿ ನಂತರ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನವಕ ಕಲಶಾಭಿಷೇಕ ಹಾಗೂ ಅಷ್ಟಬಂಧ, ನಂತರ ದೇವರಿಗೆ ಪ್ರಭಾವಳಿ ಅರ್ಪಣೆ, ಅಲಂಕಾರ ಪೂಜೆ, ಅಷ್ಟೋತ್ತರ ಸೇವೆ ಹಾಗೂ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ತದನಂತರ ಮಹಾಪ್ರಸಾದ.

ಭಜನಾ ಕಾರ್ಯಕ್ರಮ

ಮಧ್ಯಾಹ್ನ 2ರಿಂದ 3 ಶ್ರೀ ಜೈ ಭವಾನಿ ಶನೀಶ್ವರ ಮಂದಿರ,ಡೊಂಬಿವಲಿ (ಪೂ.)
ಮಧ್ಯಾಹ್ನ 3ರಿಂದ 4 ಶ್ರೀ ಭ್ರಮರಾಂಬಿಕೆ ಭಜನಾ ಮಂಡಳಿ, ಡೊಂಬಿವಲಿ (ಪೂ.)
ಸಂಜೆ 4ರಿಂದ 5 ಶ್ರೀ ರಾಧಾಕೃಷ್ಣ ಮತ್ತು ಶನೀಶ್ವರ ಮಂದಿರ, ಡೊಂಬಿವಲಿ (ಪ.)
ಸಂಜೆ 5ರಿಂದ 6 ಶ್ರೀ ಮಹಾವಿಷ್ಣು ಮಂದಿರ,
ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ, ಡೊಂಬಿವಲಿ (ಪ.)

ಸಂಜೆ 6ರಿಂದ 8 ಮಹಾ ರಂಗಪೂಜೆ
ರಾತ್ರಿ 8 ರಿಂದ 9.00 ಧಾರ್ಮಿಕ ಸಭಾ ಕಾರ್ಯಕ್ರಮ ತದನಂತರ ಮಹಾಪ್ರಸಾದ.

02.03.2024 ಶನಿವಾರ
ಬೆಳಿಗ್ಗೆ 6.00 ರಿಂದ ಪ್ರಾತಃಕಾಲ ಪೂಜೆ, ಅಲಂಕಾರ ಪೂಜೆ
9 ರಿಂದ 12 ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಮಹಾ ಮಂಗಳಾರತಿ, ತೀರ್ಥಪ್ರಸಾದ
ಮಧ್ಯಾಹ್ನ 1.00 ಗಂಟೆಗೆ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಹಾಗೂ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ ಪೂಜೆ (ತಾಳಮದ್ದಳೆ ಶೈಲಿಯಲ್ಲಿ)
ರಾತ್ರಿ 8.30 ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಮಹಾ ಪ್ರಸಾದ ನಡೆಯಲಿದೆ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯಗಳಲ್ಲಿ ಭಾಗಿಗಳಾಗಿ ತನು ಮನ ಧನಗಳೊಂದಿಗೆ ಸಹಕರಿಸಿ ಶ್ರೀದೇವರ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಅಧ್ಯಕ್ಷರಾದ ರವಿ ಎಂ.ಸುವರ್ಣ, ಕಾರ್ಯದರ್ಶಿ ಸೂರಜ್ ಡಿ. ಸಪಲಿಗ ಕೋಶಾಧಿಕಾರಿ ರಂಜಿತ್ ಕೆ. ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸರ್ವ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನ ಡೊಂಬಿವಲಿಯಲ್ಲಿ 3ನೇ ಸಹಸ್ರ ಕಲಶ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂಭ್ರಮ

Mumbai News Desk

ವರ್ಲಿ : ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ (ರಿ), ನ 17 ರಂದು ಮಾಲೆ ಧಾರಣೆ

Mumbai News Desk

ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದಹಿಸರ್: ಫೆ.14  ಮತ್ತು 15 ರಂದು 40ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವ ; ಬಲಿ ಉತ್ಸವ, ಸಾಧಕರಿಗೆ ಸನ್ಮಾನ ; ಯಕ್ಷಗಾನ ಪ್ರದರ್ಶನ.

Mumbai News Desk

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಫೆ. 8, 9 ಹಾಗೂ 10 ರಂದು ತಿರುಪತಿ ತಿರುಮಲದಲ್ಲಿ ಭಜನ ಕಾರ್ಯಕ್ರಮ

Mumbai News Desk