
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು (ನಿ.) ನಲ್ಲಿ 32 ವರ್ಷ ಸೇವೆಸಲ್ಲಿಸಿ ಪ್ರಸುತ್ತ ಹಿರಿಯ ಬ್ಯಾಂಕ್ ನಿರೀಕ್ಷಿಕರಾಗಿ ಸೇವಾ ನಿವೃತ್ತಿಯಾದ ಪ್ರಭೋದ್ ಚಂದ್ರ ಹೆಜಮಾಡಿ ಇವರನ್ನು ಡಿಸೆಂಬರ್ 31 ರಂದು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಕೆ. ಗೋಪಾಲ ಕೃಷ್ಣ ಭಟ್,ಹಾಗೂ ದ. ಕ ಜಿಲ್ಲಾ ಸಹಕಾರಿ ಸಂಘ ಗಳ ಉಪ ನಿಬಂಧಕ ರಮೇಶ್ ಎಚ್. ಎನ್. ಸನ್ಮಾನಿಸಿದರು.

ಬ್ಯಾಂಕಿನ ಮಹಾಪ್ರಭಂದಕ ಸುನೀಲ್ ಕುಮಾರ್ ಹೊಳ್ಳ, ಉಪ ಮಹಾಪ್ರಬಂಧಕ ನಿತ್ಯಾನಂದ ಶೇರಿಗಾರ್, ಐ. ಟಿ. ಮ್ಯಾನೇಜರ್ ಸುನೀಲ್ ಕುಮಾರ್ ಹೆಜಮಾಡಿ, ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ಜೋವಿನ್ ಪ್ರಕಾಶ್ ಡಿಸೋಜಾ, ರಾಜೇಶ್ ಶೆಟ್ಟಿ, ಸಹನಾ ಶೆಟ್ಟಿ, ಸುಜಾತ ಭಟ್, ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
.
.




