September 6, 2026
Mumbai News Kannada
ಪ್ರಕಟಣೆ

ಜ 3 . ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು ಸಮಾಲೋಚನಾ ಸಭೆ.





  ಮುಂಬಯಿ ಜ1.  ಮುಲ್ಕಿ ಸೀಮೆಯ ಕರ್ನಿರೆ ಗ್ರಾಮದಲ್ಲಿಇತಿಹಾಸ ಪ್ರಸಿದ್ಧ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು  ಜನವರಿ ತಿಂಗಳ 17ನೇ ತಾರೀಕಿನಿಂದ 23ತಾರೀಕಿನ ವರೆಗೆ ನಡೆಯಲಿದೆ.

   ಆ ಪ್ರಯತ್ನ ಮುಂಬೈಯಲ್ಲಿ ನೆಲೆಸಿರುವ ಗ್ರಾಮದ ಭಕ್ತರನ್ನು ಹಿತೈಷಿಗಳನ್ನು  ವೈಯಕ್ತಿಕವಾಗಿ ಸಂಪರ್ಕಿಸುವರೇ ಸಮಯಾವಕಾಶ ಸಿಗದ ಕಾರಣ,   ಭಕ್ತರನ್ನು ಗ್ರಾಮದ ಜನರನ್ನು  ವೈಯಕ್ತಿಕವಾಗಿ ಆಮಂತ್ರಿಸಲು ಹಾಗೂ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವವು ಸಂಪೂರ್ಣ ಮಾಹಿತಿಯನ್ನು ನೀಡಲು ಸಮಾಲೋಚನೆ ಸಭೆಯನ್ನು ಜ 3.ನ ಬುದವಾರ ಮುಂಬೈ ಗೋರೆಗಾವ್ ಪೂರ್ವ ದ  ಸಿಟಿ ಫಿಲ್ಮ  ರಸ್ತೆ  ಯ ಒಬೆರಾಯ್ ಮಾಲ್ ಬಳಿಯ ಗೋಕುಲಧಾಮ್  ಹತ್ತಿರ ಹೋಟೆಲ್ *ಬಾಂಬೆ 63 * ಇಲ್ಲಿ ಸಂಜೆ 4.00 ಸಭೆಯನ್ನು ಕರೆಯಲಾಗಿದೆ

. ಈ ಸಭೆಯಲ್ಲಿ ಊರಿನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ .ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿರುತ್ತಾರೆ.

ಆದುದರಿಂದ ಶ್ರೀ ವಿಷ್ಣುಮೂರ್ತಿ ದೇವರ ಭಕ್ತಾಭಿಮಾನಿಗಳು ಈ ಸಭೆಗೆ ಆಗಮಿಸಿ ಸೂಕ್ತ . ಸಲಹೆ ಸೂಚನೆಗಳನ್ನು ನೀಡುವಂತೆ ಬ್ರಹ್ಮಕಲಶೋತ್ಸವವು ಸಮಿತಿಯ ಅಧ್ಯಕ್ಷ  ಕರ್ನಿರೆ  ವಿಶ್ವನಾಥ್ ಶೆಟ್ಟಿ 

ಗೌರವಾಧ್ಯಕ್ಷ ರವೀಂದ್ರ ಸಾಧು  ಶೆಟ್ಟಿ, ಹೊಸಮನೆ. ಕಾರ್ಯಧ್ಯಕ್ಷರು ಹರಿಶ್ಚಂದ್ರ ಶೆಟ್ಟಿ ಕರ್ನಿರೆ  ಗುತ್ತು. ಉಪಾಧ್ಯಕ್ಷ  ಗಂಗಾಧರ ಎನ್ ಅಮೀನ್ ಕರ್ನಿರೆ, ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ



Related posts

ನಮ ಜವನೆರ್ (ರಿ) ಮೀರಾ ಭಾಯಾಂದರ್: “ಶ್ರೀ ಕೃಷ್ಣ ಜನ್ಮೋತ್ಸವ 2026” ಪೂರ್ವಭಾವಿ ಸಭೆ

Mumbai News Desk

ಮಾ. 29 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ್ ನ ವತಿಯಿಂದ ಮಹಿಳಾ ದಿನಾಚರಣೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ್ -ಥಾಣೆ : ಎ. 13ಕ್ಕೆ ಮಾಸಿಕ ಸಂಕ್ರಮಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 9ಕ್ಕೆ “ಸಾಫಲ್ಯ ಸ್ತ್ರಿ ಶಕ್ತಿ ” ವಿಶೇಷ ಕಾರ್ಯಕ್ರಮ.

Mumbai News Desk

ಎ. 11, ವಿದ್ಯಾದಾಯಿನಿ ಸಭಾ ಮುಂಬಯಿ ಮತ್ತು ತುಳು ಧಾರ್ಮಿಕ ಸಂಶೋಧನಾ ಕೇಂದ್ರ ಪೇರೂರು ಇದರ ಜಂಟಿ ಆಯೋಜಕತ್ವದಲ್ಲಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ.

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk