30.9 C
Mumbai
June 8, 2026
Mumbai News Kannada
ತುಳುನಾಡು

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ





ಮಂಗಳೂರು: ಸುರತ್ಕಲ್‌ನ ಶಾರದಾ ಮಾಸದ ಕೂಟದ ಆಶ್ರಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಹೊಸಬೆಟ್ಟು ಶಾರದಾ ಮಂದಿರದಲ್ಲಿ ಇತ್ತೀಚೆಗೆ ‘ಗಿರಿಜಾ ಕಲ್ಯಾಣ – ಇಂದ್ರಜಿತು ಕಾಳಗ’ ಅಹೋರಾತ್ರಿ ಯಕ್ಷಗಾನ ತಾಳಮದ್ದಳೆ ಜರುಗಿತು.

​ಫೆಬ್ರವರಿ 14ರ ಶನಿವಾರ ರಾತ್ರಿ ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಈ ಕಲಾ ಸೌರಭವು ಮರುದಿನ ಭಾನುವಾರ ಮುಂಜಾನೆ ಮಂಗಳಾಚರಣೆಯೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ವಿಶ್ವೇಶ್ವರ ಬಧವಿದೆ, ರಮಾ ವೆಂಕಟರಾವ್, ವೈ. ರಾಘವೇಂದ್ರ ರಾವ್ ಭಾಗವಹಿಸಿದ್ದರು. ಸಂಘಟಕ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

​ಗಿರಿಜಾ ಕಲ್ಯಾಣ: ಭಕ್ತಿ-ಭಾವದ ಸಮನ್ವಯ

​ಮೊದಲ ಪ್ರಸಂಗವಾದ ‘ಗಿರಿಜಾ ಕಲ್ಯಾಣ’ದಲ್ಲಿ ಭಾಗವತರಾಗಿ ಡಾ. ಸತೀಶ್ ಪುಣಿಂಚಿತ್ತಾಯ, ರಾಜಾರಾಮ ಹೊಳ್ಳ ಕೈರಂಗಳ ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಸಹಕರಿಸಿದರು. ಹಿಮ್ಮೇಳದಲ್ಲಿ ಮಧುಕರ ಭಾಗವತರು, ಚೆಂಡೆ-ಮದ್ದಲೆಯಲ್ಲಿ ಸಂಪತ್ ಬಾಬು, ಹರಿಶ್ಚಂದ್ರ ನಾಯಗ ಮಾಡೂರು, ಲಕ್ಷ್ಮೀಶ ಉಪಾಧ್ಯಾಯ, ಹರೀಶ್ ಹೆಬ್ಬಾರ್ ಮತ್ತು ಚಂದ್ರಶೇಖರ ಕಾರಂತ್ ಸಾಥ್ ನೀಡಿದರು.

ಅರ್ಥಧಾರಿಗಳ ವಿವರ: * ದೇವೇಂದ್ರ: ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ

  • ಈಶ್ವರ: ಪಶುಪತಿ ಶಾಸ್ತ್ರಿ ಶಿರಂಕಲ್ಲು
  • ಗಿರಿಜೆ: ವೇಣುಗೋಪಾಲ್ ಭಟ್ ಶೇಣಿ
  • ಮನ್ಮಥ: ವಿನಯಾಚಾರ್ ಹೊಸಬೆಟ್ಟು ಮತ್ತು ಸದಾಶಿವ ಆಳ್ವ ತಲಪಾಡಿ
  • ಪರ್ವತ ರಾಜ: ಕಲಾವತಿ
  • ತಾರಕಾಸುರ: ವಿನೋದ್ ಕುಮಾರ್ ಪೆರ್ಲ ಮತ್ತು ನಳಿನಿ ಮೋಹನ್
  • ರತಿ: ಗಾಯತ್ರಿ ಬಿ.ಎಸ್.
  • ನಾರದ: ರಾಧಾಕೃಷ್ಣ ಭಟ್ ಕುಳಾಯಿ
  • ವಿಷ್ಣು: ಸಾವಿತ್ರಿ ಶಾಸ್ತ್ರಿ
  • ಷಣ್ಮುಖ: ಶ್ರೀಧರ್ ಎಸ್.ಪಿ.

​ಇಂದ್ರಜಿತು ಕಾಳಗ: ರಣರೋಚಕ ಸಂವಾದ

​ನಂತರ ನಡೆದ ‘ಇಂದ್ರಜಿತು ಕಾಳಗ’ ಪ್ರಸಂಗವು ಪ್ರೇಕ್ಷಕರ ಗಮನ ಸೆಳೆಯಿತು. ಈ ಭಾಗಕ್ಕೆ ಗಣೇಶ್ ಕುಮಾರ್ ಹೆಬ್ರಿ, ಶಶಿಧರ್ ರಾವ್ ಚಿತ್ರಾಪು ಮತ್ತು ಮಾಧವ ಮಯ್ಯ ಸುರತ್ಕಲ್ ಭಾಗವತಿಕೆ ನಡೆಸಿಕೊಟ್ಟರು. ಚೆಂಡೆ-ಮದ್ದಲೆಯಲ್ಲಿ ರಾಘವೇಂದ್ರ ಹೆಜಮಾಡಿ, ರಾಕೇಶ್ ಹೊಸಬೆಟ್ಟು, ರಾಮ ಹೊಳ್ಳ ಸುರತ್ಕಲ್ ಹಾಗೂ ವೇದವ್ಯಾಸ ರಾವ್ ಸಹಕರಿಸಿದರು.

ಪಾತ್ರವರ್ಗ:

  • ಇಂದ್ರಜಿತು: ರಾಧಾಕೃಷ್ಣ ಕಲ್ಚಾರ್
  • ಹನುಮಂತ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
  • ರಾಮ: ದಿನೇಶ್ ಶರ್ಮ
  • ಮಾಯಾಸೀತೆ: ಕೆ. ಕಲಾವತಿ
  • ವಿಭೀಷಣ: ವಿನಯ ಆಚಾರ್ಯ ಹೊಸಬೆಟ್ಟು
  • ಲಕ್ಷ್ಮಣ: ಗೋಪಾಲಕೃಷ್ಣ ಅನಂತಾಡಿ

​ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ನಡೆದ ಈ ಅಹೋರಾತ್ರಿ ತಾಳಮದ್ದಳೆಯು ಕಲಾಭಿಮಾನಿಗಳಿಗೆ ವಿಶಿಷ್ಟ ಅನುಭವ ನೀಡಿತು.



Related posts

ಮೂಲ್ಕಿ : ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17ನೇ ವಾರ್ಷಿಕೋತ್ಸವ

Mumbai News Desk

ಉಡುಪಿ ಇಂದ್ರಾಣಿ ನದಿ ಮಾಲಿನ್ಯ ನಿವಾರಣೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ತುರ್ತು ಮನವಿ

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ಬಂಟರ ಸಂಘ ಸುರತ್ಕಲ್ ನಿಂದ ಅಭಿನಂದನೆ, ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಅಕ್ಷತಾ ಪೂಜಾರಿ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

Mumbai News Desk