July 23, 2026
Mumbai News Kannada
ತುಳುನಾಡು

ಕಾಪು ಮಾರಿಯಮ್ಮ ನ ಅನುಗ್ರಹ, ಭಾರತ ಟಿ20 ತಂಡದ ನಾಯಕನಾದ ಸೂರ್ಯಕುಮಾರ ಯಾದವ್.







ಇತ್ತೀಚಿಗೆ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ 11 ವರ್ಷಗಳ ಬಳಿಕ ಕಪ್ ಗೆಲ್ಲುವಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಪ್ರಮುಖ ಪಾತ್ರವಹಿಸಿತ್ತು.
ಟಿ20 ಕಪ್ ಗೆದ್ದ ಬಳಿಕ ಸೂರ್ಯಕುಮಾರ್, ಪತ್ನಿ ದೇವಿಷಾ ಶೆಟ್ಟಿ ಅವರೊಂದಿಗೆ ಕಾಪುವಿನ ಇತಿಹಾಸ ಪ್ರಸಿದ್ಧ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ನ ದರುಶನ ಪಡೆದಿದ್ದರು.ಸೂರ್ಯಕುಮಾರ ಯಾದವ್ ಅಮ್ಮನಲ್ಲಿ ಪ್ರಾಥಿಸಿ, ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಶಿಲಾಮಯ ದೇವಸ್ಥಾನಕ್ಕೆ ಶಿಲಾ ಕಂಬವನ್ನು ನೀಡಿದ್ದರು.


ಈ ಸಂಧರ್ಭದಲ್ಲಿ ದೇವಸ್ಥಾನದ ಅರ್ಚಕರು ಸೂರ್ಯಕುಮಾರ ಯಾದವ್ ಅವರಿಗೆ ಅಮ್ಮನ ಮಹಾಪ್ರಸಾದ ನೀಡಿ “ಮುಂದೆ ಭಾರತ ತಂಡದ ನಾಯಕನಾಗಿ ಇಲ್ಲಿ ಬರುತ್ತೀರಿ ” ಎಂದು ಹರಸಿದ್ದರು.
ಸೂರ್ಯಕುಮಾರ್ ಕಾಪುವಿಗೆ ಭೇಟಿ ನೀಡಿದ 10 ದಿನದಲ್ಲೇ, ಅವರು ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ 20 ಸರಣಿಗೆ ತಂಡದ ನಾಯಕನಾಗಿ ಆಯ್ಕೆಯಗಿದ್ದು, ‘ಕಾಪು ಅಮ್ಮನ” ಅನುಗ್ರಹ ಮತ್ತು ಸೂರ್ಯಕುಮಾರ್ ಯಾದವ್ ಅವರ ಭಕ್ತಿ ಎನ್ನಬಹುದು.
ನಂಬಿ ಬಂದ ಭಕ್ತರ ಪ್ರಾರ್ಥನೆಯನ್ನು ಅನುಗ್ರಹಿಸುವ ತಾಯಿ “ಕಾಪುವಿನ ಅಮ್ಮ” ಭಕ್ತ ಕೋಟಿಯ ಮನ- ಮಂದಿರದಲ್ಲಿ ವಿರಾಜಮಾನರಾಗಿದ್ದಾರೆ.



Related posts

ಕುಲಾಲ ಪರ್ಬ ಉದ್ಘಾಟನೆ.

Mumbai News Desk

ಕೂತಲ್ಲೇ ಸಿಕ್ತು ಬೂತಾಯಿ ಮೀನಿನ ‘ಲಾಟರಿ’: ಉಳ್ಳಾಲ ತೀರದಲ್ಲಿ ಪ್ರಕೃತಿಯ ‘ಬಂಪರ್ ಆಫರ್

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಮಂಗಳೂರು ಕುಲಾಲ ಭವನ ಉದ್ಘಾಟನೆ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ, ಸಿಎಂ ಆಗಮನಕ್ಕೆ ಮನವಿ

Mumbai News Desk

ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥ ರಿಂದ ಭೂತರಾಜರ ಸಾನ್ನಿಧ್ಯ ಸಂಕೋಚವನ್ನು ಮಾಡಿ ಜೀರ್ಣೋದ್ಧಾರಕ್ಕೆ ಚಾಲನೆ

Mumbai News Desk

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk