ಮಂಗಳೂರು: ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ನ ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ಮಾರ್ಚ್ 22ರಂದು ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶೀನ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಾಯ್ಕ ಮಂಡಿಸಿದರು. ಸದಸ್ಯರು ಸರ್ವಾನುಮತದಿಂದ ಇದಕ್ಕೆ ಅನುಮೋದನೆ ನೀಡಿದರು.
ಆಯ್ಕೆಯಾದ ನೂತನ ಪದಾಧಿಕಾರಿಗಳ ವಿವರ:
- ಗೌರವಾಧ್ಯಕ್ಷರು: ಯೋಗೀಶ್ ಕಲ್ಪನೆ
- ಅಧ್ಯಕ್ಷರು: ರವಿಪ್ರಸಾದ್ ಶೆಟ್ಟಿಗಾರ್
- ಉಪಾಧ್ಯಕ್ಷರು: ರಾಜೇಶ್ ಕುಡ್ಲ
- ಪ್ರಧಾನ ಕಾರ್ಯದರ್ಶಿ: ದಿನೇಶ್ ಕೋಡಿಕಲ್
- ಜೊತೆ ಕಾರ್ಯದರ್ಶಿ: ವಜ್ರೇಶ್ ಗಾಣಿಗ
- ಕೋಶಾಧಿಕಾರಿ: ಶಿವಪ್ರಸಾದ್ ಶೆಟ್ಟಿ
- ಗೌರವ ಸಲಹೆಗಾರರು: ಅಶೋಕ್ ಕಲ್ಪನೆ
ಸಭೆಯಲ್ಲಿ ಒಟ್ಟು 10 ಜನರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.





