ಮುಲ್ಕಿ: ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ 2026–2028ರ ಅವಧಿಯ ಚುನಾವಣೆಯು ಇತ್ತೀಚೆಗೆ ನೆರವೇರಿದ್ದು, ರಾಜ್ಯದ ವಿವಿಧ ಹುದ್ದೆಗಳಿಗೆ ಏಕಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
Karnataka Professional (KPCE-SC) ಸಂಸ್ಥೆಯು ರಾಜ್ಯದಲ್ಲಿ ಸಿವಿಲ್ ಇಂಜಿನಿಯರ್ಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶಗಳು ಹೀಗಿವೆ:
- ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವುದು.
- ಇಂಜಿನಿಯರ್ಗಳ ನೋಂದಣಿ ಮತ್ತು ಜವಾಬ್ದಾರಿಯನ್ನು ವ್ಯವಸ್ಥಿತಗೊಳಿಸುವುದು.
- ನೈತಿಕ ಮೌಲ್ಯಗಳು ಮತ್ತು ಗುಣಮಟ್ಟದ ನಿರ್ಮಾಣವನ್ನು ಉತ್ತೇಜಿಸುವುದು.
- ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಇಂಜಿನಿಯರ್ಗಳ ನಡುವೆ ಸಮನ್ವಯ ಸಾಧಿಸುವುದು.
- ದೇಶದಲ್ಲಿ ‘ಸಿವಿಲ್ ಇಂಜಿನಿಯರಿಂಗ್ ಕೌನ್ಸಿಲ್’ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
- ದೇಶದ ಸಿವಿಲ್ ಪಠ್ಯವಿಷಯದಲ್ಲಿ ಪರಿವರ್ತನೆ ತರಲು ಪ್ರಯತ್ನಿಸುವುದು.
- BIS (Bureau of Indian Standards) ನೊಂದಿಗೆ ಸಮಾಲೋಚನೆ ನಡೆಸಿ NBC 2016 ಅನ್ನು ಬದಲಾಯಿಸದಂತೆ (Dilution) ಒತ್ತಾಯಿಸುವುದು.
ಈ ಚುನಾವಣೆಯಲ್ಲಿ ಮುಲ್ಕಿಯ ‘ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್’ ಅಧ್ಯಕ್ಷರು ಹಾಗೂ ‘ಶಾರದಾ ಗ್ರೂಪ್’ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ Er. ಜೀವನ್ ಕೆ. ಶೆಟ್ಟಿ ಅವರು ಮೈಸೂರು ಕಂದಾಯ ವಿಭಾಗದ (Revenue Division) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದೆ.




