28.4 C
Mumbai
August 3, 2026
Mumbai News Kannada
ಪ್ರಕಟಣೆ

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ





ಮುಂಬೈಯ ಹಿರಿಯ ಧಾರ್ಮಿಕ ಸಂಘಟನೆಯಾದ ಶ್ರೀ ಮದ್ಭಾರತ ಮಂಡಳಿಯು 148ವರ್ಷಗಳಿಂದ ಪುಣ್ಯ ಗ್ರಂಥ ಪಾರಾಯಣವನ್ನು ನಡೆಸಿಕೊಂಡು ಬಂದಿರುತ್ತದೆ. ಅಂತೆಯೇ ಈ ವರ್ಷ 149 ನೇ ಪುಣ್ಯ ಗ್ರಂಥ ಪಾರಾಯಣ ಕಾರ್ಯಕ್ರಮವು ಶನಿವಾರ ಜೂನ್ 20ರಂದು ಸಂಜೆ 5 ಕ್ಕೆ ಮಂಡಳಿಯ ಅಂಧೇರಿ ಪಶ್ಚಿಮದ ವೀರಾ ದೇಸಾಯಿ ರಸ್ತೆಯ ಸಮೀಪದ ಎಂ ವಿ ಎಂ ಎಜುಕೇಶನಲ್ ಮಾರ್ಗದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಪರಂಪರೆಯಂತೆ ಪ್ರಾರಂಭವಾಗಲಿದೆ . ಈ ವರ್ಷ ಗ್ರಂಥ ವಾಚನಕ್ಕೆ ಲಕ್ಷೀಶ ಕವಿ ವಿರಚಿತ “ಜೈಮಿನಿ ಭಾರತ ” ಎಂಬ ಪುಣ್ಯ ಗ್ರಂಥವನ್ನು ಆಯ್ಕೆ ಮಾಡಲಾಗಿದೆ. ಈ ಗ್ರಂಥದ ವಾಚಕರಾಗಿ ಬೈಕಂಪಾಡಿ ಶ್ಯಾಮ್ ಕೆ. ಪುತ್ರನ್ ,ಅರ್ಥ ವಿವರಣೆಗೆ ಮಲ್ಪೆ ಪುಷ್ಪಾ ಜಿ. ಬಂಗೇರ ,ಅರ್ಚಕ ಭಟ್ಟರಾಗಿ ವಾಸು ಉಪ್ಪುರು ,ಚಾಮರ ಸೇವೆಗೆ ಹೊಸಬೆಟ್ಟು ಎಚ್. ಮಹಾಬಲ ಮತ್ತು ಮುಳೂರು ಹರಿಶ್ಚಂದ್ರ ಕೆ.ಕಾಂಚನ್, ಜನಮೇಜಯ ಪೀಠದಲ್ಲಿ ಕುಳೂರು ನಾಗೇಶ್ ಎಲ್. ಮೆಂಡನ್,ಪೂಜಾ ಮೇಲ್ವಿಚಾರಕರಾಗಿ ಅಳಕೆ ಪುರಂದರ ಅಮೀನ್ ಅವರು ಮಂಡಳಿಯ ವಾಡಿಕೆಯಂತೆ ದೀಕ್ಷೆ ಪಡೆದಿರುವರು
ಜೂನ್ 20ರಂದು ಪಾರಾಯಣ ಪ್ರಾರಂಭವಾದ ನಂತರ ಪ್ರತಿ ಶನಿವಾರ ಸಂಜೆ 5 ರಿಂದ 7ರ ವರೆಗೆ ನಡೆಯಲಿದೆ.
ಗ್ರಂಥ ವಾಚನದ ನಂತರ ಭಜನೆ, ಮಹಾ ಆರತಿ, ಪ್ರಸಾದ ವಿತರಣೆ ಜರಗಲಿದೆ.ಈ ಗ್ರಂಥ ವಾಚನವು 2027ರ ಫೆಬ್ರವರಿ ವರೆಗೆ ನಿರಂತರ ಜರಗಲಿದೆ. ಪಾರಾಯಣ ದ ಪೂರ್ವಭಾವಿಯಾಗಿ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ ದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ಅವರಿಂದ ಗಣ ಹೋಮ ಹಾಗೂ ಪರಂಪರೆಯ ವಿಧಿ ವಿಧಾನಗಳು ನಡೆಯಲಿದೆ
ಈ ಪ್ರಾರಂಭೋತ್ಸವದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮಿ ನಾರಾಯಣ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪಿ. ಪುತ್ರನ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್ ಹಾಗೂ ಉಪಾಧ್ಯಕ್ಷರಾದ ನಾಗೇಶ್ ಎಲ್. ಮೆಂಡನ್ ಮತ್ತು ಲೋಕನಾಥ್ ಪಿ. ಕಾಂಚನ್, ಜತೆ ಕಾರ್ಯದರ್ಶಿ ಗಳಾದ ಸುರೇಂದ್ರ ನಾಥ ಹಳೆಯಂಗಡಿ ಮತ್ತು ಶ್ಯಾಮ್ ಕೆ. ಪುತ್ರನ್,
ಪ್ರಧಾನ ಕೋಶಾಧಿಕಾರಿ ಕೇಶವ್ ಆರ್. ಪುತ್ರನ್, ಜತೆ ಕೋಶಾಧಿಕಾರಿ ಗಳಾದ ಜಗನ್ನಾಥ ಆರ್. ಕಾಂಚನ್ ಮತ್ತು ರಮೇಶ್ ಎಸ್. ಅಮೀನ್ ಮತ್ತು ಪಾರುಪತ್ಯಗಾರರು ಹಾಗೂ ಸಮಿತಿ ಸದಸ್ಯರು
ವಿನಂತಿ ಮಾಡಿದ್ದಾರೆ.



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk

ಶ್ರೀ ರಜಕ ಸಂಘ ಮುಂಬಯಿ, ಜ.6 ರಂದು ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ

Mumbai News Desk

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’

Mumbai News Desk