ಮಂಗಳೂರು: ಗಂಜಿಮಠದ ಹಿರಿಯ ಧಾರ್ಮಿಕ ಮುಖಂಡ ಹಾಗೂ ಹಿರಿಯ ಕಬ್ಬಿಣದ ಕೆಲಸಗಾರ ಗಂಜಿಮಠ ಶಿವಣ್ಣ ಆಚಾರ್ಯ (102 ವರ್ಷ) ಅವರು ಜುಲೈ 6ರ ಸೋಮವಾರದಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಮುಂಬೈನ ಮಲಾಡ್ನ ಸ್ವರ್ಣ ವ್ಯಾಪಾರಿ ಹಾಗೂ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷರಾಗಿರುವ ಕುಮರೇಶ್ ಆಚಾರ್ಯ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ, ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಸೇರಿದಂತೆ ನಾಲ್ವರು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಜುಲೈ 7ರ ಮಂಗಳವಾರದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




