30 C
Mumbai
September 19, 2026
Mumbai News Kannada
ಸುದ್ದಿ

ದಿಶಾ ಸಾಲಿಯನ್ ಪ್ರಕರಣ: ಮಾತೋಶ್ರೀ ಗೇಟ್ ಹೊರಗೆ ಹೈಡ್ರಾಮಾ, ಆದಿತ್ಯ ಠಾಕ್ರೆಗೆ ನೋಟಿಸ್ ನೀಡಲು ಬಂದ ದಿಶಾ ತಂದೆ ಸತೀಶ್ ಸಾಲಿಯಾನ್





​ದಿಶಾ ಸಾಲಿಯಾನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಠಾಕ್ರೆ ಕುಟುಂಬದ ನಿವಾಸ ‘ಮಾತೋಶ್ರೀ’ ಬಂಗಲೆಯ ಗೇಟ್ ಹೊರಗೆ ಶನಿವಾರ ಮಧ್ಯಾಹ್ನ ಭಾರಿ ಹೈಡ್ರಾಮಾ ನಡೆದಿದೆ. ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ತಮ್ಮ ವಕೀಲರ ತಂಡದೊಂದಿಗೆ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಕಾನೂನು ನೋಟಿಸ್ ನೀಡಲು ಸ್ವತಃ ಮಾತೋಶ್ರೀಗೆ ಆಗಮಿಸಿದ್ದರು. ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಮತ್ತು ನೀಡಿದ ಹೇಳಿಕೆಗಳ ವಿರುದ್ಧ ಸತೀಶ್ ಸಾಲಿಯಾನ್ ಅವರು ಆದಿತ್ಯ ಠಾಕ್ರೆ ಹಾಗೂ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ 500 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದು, ಅದಕ್ಕೆ ಸಂಬಂಧಿಸಿದ ನೋಟಿಸ್ ತಲುಪಿಸಲು ಅವರು ಮಾತೋಶ್ರೀಗೆ ಬಂದಿದ್ದರು.
​ಮಾತೋಶ್ರೀ ತಲುಪುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಸಾಲಿಯಾನ್, “ನನ್ನನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ, ದೇವನೊಬ್ಬನೇ ನನ್ನನ್ನು ನಿಯಂತ್ರಿಸಬಲ್ಲ” ಎಂದು ಅತ್ಯಂತ ಆಕ್ರಮಣಕಾರಿ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಅವರು ಬಂದ ತಕ್ಷಣ ಮಾತೋಶ್ರೀ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿ, ಶಿವಸೇನೆ (ಠಾಕ್ರೆ ಬಣ) ಕಾರ್ಯಕರ್ತರು ಮಾತೋಶ್ರೀ ಗೇಟ್ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಮಾತೋಶ್ರೀ ಗೇಟ್ ಮುಚ್ಚಿ ಭಾರಿ ಭದ್ರತೆಯನ್ನು ಒದಗಿಸಿದರು. ಇದೇ ವೇಳೆ ಶಿವಸೇನಾ ಸಂಸದ ಅನಿಲ್ ದೇಸಾಯಿ ಕೂಡ ಮಾತೋಶ್ರೀಗೆ ಆಗಮಿಸಿದರು. ಅಂತಿಮವಾಗಿ ಆದಿತ್ಯ ಠಾಕ್ರೆ ಪರವಾಗಿ ವಕೀಲರಾದ ರಾಹುಲ್ ದಿವಟೆ ಮತ್ತು ಅನಿಲ್ ಜಾದವ್ ಅವರು ಮಾತೋಶ್ರೀ ಗೇಟ್ ಬಳಿಯೇ ಬಂದು ಸತೀಶ್ ಸಾಲಿಯಾನ್ ಅವರ ವಕೀಲರಿಂದ 500 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಸ್ವೀಕರಿಸಿ, ನೋಟಿಸ್ ಸ್ವೀಕರಿಸಿದ ಸ್ವೀಕೃತಿ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.



Related posts

ಹಿರಿಯ ಪತ್ರಕರ್ತ ಶ್ರೀಧರ್‌ ಉಚ್ಚಿಲ್‌ಗೆ ‘ಕೆಯುಡಬ್ಲ್ಯೂಜೆ’ ವಿಶೇಷ ಪ್ರಶಸ್ತಿ ಪ್ರದಾನ

Mumbai News Desk

ಸಂಕೋಲಿಗೆ : ಜಾನಕಿ ಸಾಲ್ಯಾನ್ ನಿಧನ

Mumbai News Desk

ಕುಲಾಲ ಸಂಘ ಮುಂಬೈ  ಅಧ್ಯಕ್ಷರಾಗಿ ಮರು ಆಯ್ಕೆಗೊಂಡ   ರಘು ಮೂಲ್ಯ ಪಾದೆಬೆಟ್ಟು ಅವರಿಗೆ ಮಂಗಳೂರುನಲ್ಲಿ  ಗೌರವ,

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಶಿವಸೇನಾ ದಕ್ಷಿಣ ಭಾರತಿಯ ಘಟಕದಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯ ಬಗ್ಗೆ ಶಿಬಿರ.

Mumbai News Desk

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk