30 C
Mumbai
April 24, 2026
Mumbai News Kannada
ಪ್ರಕಟಣೆ

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ





.

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಹತ್ತನೇ ಮೈಲುಕಲ್ಲು, ಉದ್ಯಾವರ, ಮಂಜೇಶ್ವರ,ಇದರ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವವು ಡಿಸೆಂಬರ್ 14 ರಿಂದ 17 ರ ತನಕ ನಡೆಯಲಿದೆ. ಕಾರ್ಯಕ್ರಮಗಳು : ದಿನಾಂಕ 14.12. 24ನೇ ಶನಿವಾರ ಸಂಜೆ 7 ಗಂಟೆಗೆ ಆನೆ ಚಪ್ಪರದಲ್ಲಿ ದೀಪ ಪ್ರತಿಷ್ಠೆ. ದಿನಾಂಕ 15. 12. 24ನೇ ಆದಿತ್ಯವಾರ ಸಂಜೆ ಗಂಟೆ 3ಕ್ಕೆ 11 ಸ್ಥಾನಗಳ ಅಚ್ಚಮ್ಮಾರರ ಸಮಾವೇಶ ಸಂಜೆ ಗಂಟೆ 5ಕ್ಕೆ ಭಂಡಾರ ಎರುವುದು, ಸಂಜೆ ಗಂಟೆ 6ಕ್ಕೆ ಶ್ರೀ ಭಗವತಿ ದರ್ಶನ, ಬಳಿಕ ಅನ್ನಸಂತರ್ಪಣೆ. ರಾತ್ರಿ 8 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಗೆ ಭಂಡಾರ ಹೋರಾಡುವುದು, ಶ್ರೀ ಭಗವತಿ ಅಮ್ಮನವರಿಂದ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ. ದಿನಾಂಕ 16.12. 24ನೇ ಸೋಮವಾರ ಬೆಳಿಗ್ಗೆ ಗಂಟೆ 6ಕ್ಕೆ ಹೂವಿನ ಪೂಜೆ, 7:00 ಘಂಟೆಗೆ ಭಗವತಿ ದರ್ಶನ, ಬಿಂಬಬಲಿ ಉತ್ಸವ, 9:30ಕ್ಕೆ ಗೆಂಡಸೇವೆ, ಘಂಟೆ 10.30ಕ್ಕೆ ಪ್ರಸಾದ ವಿತರಣೆ, ಘಂಟೆ 11ಕ್ಕೆ ಮಹಾ ಅನ್ನಸಂಪರ್ಪಣೆ, ಮಧ್ಯಾಹ್ನ ಗಂಟೆ ಒಂದಕ್ಕೆ ಭಂಡಾರ ಇಳಿಯುವುದು. ದಿನಾಂಕ 17.12.2024ನೇ ಮಂಗಳವಾರ ಬೆಳಿಗ್ಗೆ ಗಂಟೆ 9ಕ್ಕೆ ಕರಿಪೊಡಿ, ನಾಗತಂಬಿಲ, ಭಗವತಿ ದರ್ಶನ, ಪ್ರಸಾದ ವಿತರಣೆ. ನಡಾವಳಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸುವ ಸೇವೆಗಳ ವಿವರ : ಮಹಾ ಅನ್ನಸಂತರ್ಪಣೆ : ರೂಪಾಯಿ 25,000 / ಹೂವಿನ ಅಲಂಕಾರ : ರೂಪಾಯಿ 15,000 /ಅನ್ನದಾನಕ್ಕೆ ಅಕ್ಕಿ ಕ್ವಿಂಟಾಲ್ : ರೂಪಾಯಿ 5,000 / ಅನ್ನದಾನಕ್ಕೆ ಅಕ್ಕಿಮುಡಿ : ರೂಪಾಯಿ 2,000/ ಹೂವಿನ ಪೂಜೆ : ರೂಪಾಯಿ 100/ ನಡಾವಳಿ ಮಹೋತ್ಸವ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪೂರ್ವ ಶಿಷ್ಠ ಸಂಪ್ರದಾಯದಂತೆ ಜರಗಲಿರುವುದು, ಭಗವದ್ಭಕ್ತರದ ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ ತನು- ಮನ-ಧನಗಳಿಂದ ಸಹಕರಿಸಿ, ಶ್ರೀ ಭಗವತಿ ಮಾತೆಯ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಾತು ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಉದ್ಯಾವರ ಎರಡೂರ ಹತ್ತು ಸಮಸ್ತರು, ಉದ್ಯಾವರ ಮುಂಬೈ ಹದಿನಾರು ಸಮಸ್ತರು ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಎಜುಕೇಶನಲ್ ಟ್ರಸ್ಟ್, ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಆಡಳಿತ ಸಮಿತಿ ಉದ್ಯವರ ಭೋವಿ ಮಹಿಳಾ ಸಂಘ, ಆಡಳಿತ ಕಾರ್ನವರು ಹಾಗೂ ಅಚ್ಚಮ್ಮಾರರು ವಿನಂತಿಸಿದ್ದಾರೆ.



Related posts

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆ, ಮೇ 1ಕ್ಕೆ 90ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ೨೦೨೫-೨೬ ರ ಸಾಫಲ್ಯ ಭಾಗ್ಯ ಹಾಗು ವಿದ್ಯಾರ್ಥಿಗಳಿಗೆ ಸಹಾಯ ನಿಧಿಗೆ ಅರ್ಜಿ ಸ್ವೀಕಾರ.

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಚಿತ್ರಾಪು ಬಿಲ್ಲವರ ಸಂಘ (ರಿ), ಮುಂಬಯಿ,ಡಿ.29 ರಂದು ವಾರ್ಷಿಕ ಮಹಾಸಭೆ,

Mumbai News Desk

ಜ. 30, ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಜೂಲೈ 21 ರಂದು ಬೊಯಿಸರ್ ನ  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  ಗುರುಪೂರ್ಣಿಮೆ ಆಚರಣೆ 

Mumbai News Desk