32 C
Mumbai
April 23, 2026
Mumbai News Kannada
ಪ್ರಕಟಣೆ

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.





ಒಕ್ಕಲಿಗರ ಸಂಘ ಮಹಾರಾಷ್ಟ್ರದ ಆಯೋಜನೆಯಲ್ಲಿ, ಕುರುಬರ ಸಂಘ ಮಹಾರಾಷ್ಟ್ರ, ಗೌಡರ ಉನ್ನತೀಕರಣ ಸಂಸ್ಥೆ , ಕೆಂಪೇಗೌಡ ಎಸೋಸಿಯೇಷನ್ ಹಾಗೂ ಕಲಾ ಸೌರಭ ಮುಂಬೈ ಇದರ ಸಹಯೋಗದಲ್ಲಿ ಕನಕದಾಸ ಕುವೆಂಪು ಜಯಂತಿ ಗೌರವಾರ್ಥ ಕರ್ನಾಟಕ ರಾಜ್ಯೋತ್ಸವ ಸಂಭ್ರಮ – “ಕರುನಾಡ ಡಿಂಡಿಮ – 2024” ಕಾರ್ಯಕ್ರಮವನ್ನು ಡಿಸೆಂಬರ್ 29ರ ಆದಿತ್ಯವಾರ ಮಧ್ಯಾಹ್ನ 1:30ಕ್ಕೆ ಕುರ್ಲಾ ಪೂರ್ವ ಬಂಟರ ಭವನದ ಸಭಾಗ್ರಹದಲ್ಲಿ ಆಯೋಜಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮ ಅಪರಾಹ್ನ 1. 30 ರಿಂದ :

ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಕೆ ರಾಜೇಗೌಡರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಬಂಟರ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ, ಕವಯತ್ರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಸುನಿತಾ ಎಂ ಶೆಟ್ಟಿ, ಸಯನ್ ಕನ್ನಡ ಸಂಘದ ಅಧ್ಯಕ್ಷರೂ, ಜ್ಯೋತಿಷಿ ಡಾ. ಎಂ ಜೆ ಪ್ರವೀಣ್ ಭಟ್, ಹೋಟೆಲ್ ಫೆಡರೇಶನ್ ಆಫ್ ಮಹಾರಾಷ್ಟ್ರದ ಅಧ್ಯಕ್ಷರಾದ ವಿರಾರ್ ಶಂಕರ್ ಬಿ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ,ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ , ಬಿಲ್ಲವರ ಎಸೋಸಿಯೇಷನ್ ನ ಉಪಾಧ್ಯಕ್ಷರಾದ ಸುರೇಶ್ ಕುಮಾರ್ ಕದ್ರಿ, ಕನ್ನಡ ಕಲಾ ಕೇಂದ್ರ ಮುಂಬೈ ಅಧ್ಯಕ್ಷರಾದ ಮಧುಸೂದನ್ ಟಿ ಆರ್, ಕುರುಬರ ಸಂಘ ಮಹಾರಾಷ್ಟ್ರದ ಅಧ್ಯಕ್ಷರಾದ ಯೋಗೇಶ್ ಗೌಡ, ಗೌಡರ ಉನ್ನತೀಕರಣ ಸಂಸ್ಥೆ ಮುಂಬೈಯ ಅಧ್ಯಕ್ಷರಾದ ಮೋಹನ್ ಕುಮಾರ್ ಗೌಡ, ಕೆಂಪೇಗೌಡ ಅಸೋಸಿಯೇಷನ್ ಮುಂಬೈಯ ಅಧ್ಯಕ್ಷರಾದ ವಿಕಾಸ್ ಕುಮಾರ್ ಗೌಡ, ಕಲಾ ಸೌರಭ ಮುಂಬೈ ಅಧ್ಯಕ್ಷರಾದ ಪದ್ಮನಾಭ ಸಸಿಹಿತ್ಲು ಭಾಗವಹಿಸಲಿರುವರು.


ಸಾಂಸ್ಕೃತಿಕ ಕಾರ್ಯಕ್ರಮ :
ಅಪರಾಹ್ನ 1.30ರಿಂದ : ಹಳದಿ ಕುಂಕುಮ ( ಒಕ್ಕಲಿಗರ ಸಂಘ, ಕುರುಬರ ಸಂಘ, ಗೌಡರ ಉನ್ನತಿಕರಣ ಸಂಸ್ಥೆ ಮತ್ತು ಕೆಂಪೇಗೌಡ ಅಸೋಸಿಯೇಷನ್- ಇದರ ಮಹಿಳಾ ವಿಭಾಗ )
ಭಜನಾಮೃತ : ಚಿಣ್ಣರ ಬಿಂಬ ಮುಂಬಯಿ
ಪ್ರಾರ್ಥನೆ : ಗಣೇಶ ವಂದನ – ವೀಣಾ ಬಾಬು ಗೌಡ ಮತ್ತು ಬಳಗ
ಕನಕದಾಸ ಸ್ತುತಿ ನೃತ್ಯ ರೂಪಕ/ ಕುವೆಂಪು ಸ್ಮರಣೆ ಜಾನಪದ ಸಮೂಹ ನ್ರತ್ಯ
ಪ್ರಸ್ತುತಿ : ವಿದ್ವಾನ್ ಕೋಲಾರ ರಮೇಶ್ ಮತ್ತು ಬಳಗ ಬೆಂಗಳೂರು
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು.
ಮೇಲ್ವಿಚಾರಣೆ : ಗಂಗಾಧರ್ ಜಿ ಗೌಡ
ಸರಣಿ ನೃತ್ಯ ವೈವಿಧ್ಯ
ಪ್ರಸ್ತುತಿ : ಯುವ ವಿಭಾಗ ಒಕ್ಕಲಿಗರ ಸಂಘ, ಕುರುಬರ ಸಂಘ, ಗೌಡರ ಉನ್ನತಿಕರಣ ಸಂಸ್ಥೆ, ಕೆಂಪೇ ಗೌಡ ಎಸೋಸಿಯೇಷನ್
ಮೇಲ್ವಿಚಾರಣೆ : ರವಿ ಪಿ ಗೌಡ
ನಾಟ್ಯ ಸಂಭ್ರಮ
ಮೇಲ್ವಿಚಾರಣೆ : ಕಲಾ ಸೌರಭ ಮುಂಬೈ
ಭಾವ – ಲಘು ಶಾಸ್ತ್ರಿ ಯ ಜಾನಪದ ನೃತ್ಯ ವೈವಿಧ್ಯ
ಪ್ರಸ್ತುತಿ : ಅಮಿತಾ ಕಲಾ ಮಂದಿರ ಮೀರಾ ರೋಡ್
ಭರತನಾಟ್ಯ ಮತ್ತು ಜಡೆ ಕೋಲಾಟ
ಪ್ರಸ್ತುತಿ : ದೀಕ್ಷಾ ದೇವಾಡಿಗ ಮತ್ತು ಸೌಜನ್ಯ ಬಿಲ್ಲವ ಮತ್ತು ಬಳಗ ಮುಂಬೈ
ಯಕ್ಷ ಕುಣಿತ ಸಂಭ್ರಮ ( ತೆಂಕು ಬಡಗು ಜುಗಲ್ಬಂದಿ)
ಪ್ರಸ್ತುತಿ : ಕುಮಾರಿ ಅಂಕಿತ ನಾಯಕ್ ಮತ್ತು ಬಳಗ
ಬಿಸಿಲು ಬೆಳದಿಂಗಳು – ಕನ್ನಡ ನಾಟಕ
ರಚನೆ : ನಾರಾಯಣಶೆಟ್ಟಿ ನಂದಳಿಕೆ
ನಿರ್ದೇಶನ : ಮನೋಹರ ಶೆಟ್ಟಿ ನಂದಳಿಕೆ
ಪ್ರಸ್ತುತಿ : ಕನ್ನಡ ಕಲಾ ಕೇಂದ್ರ ಮುಂಬೈ
ಮೇಲ್ವಿಚಾರಣೆ : ಪ್ರೊ.ಚೇತನ್ ಗೌಡ ಮತ್ತು ಬಳಗ


ಸಮಾರೋಪ ಸಮಾರಂಭ
ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ಸರಕಾರದ ಮಾನ್ಯ ಕ್ಯಾಬಿನೆಟ್ ಸಚಿವ,ನ್ಯಾಯವಾದಿ ಆಶಿಷ್ ಶೇಲಾರ್
ಅಧ್ಯಕ್ಷತೆ : ಡಾ. ಕೆ ಸಿ ನಾರಾಯಣಗೌಡ, ಮಾಜಿ ಕ್ಯಾಬಿನೆಟ್ ಮಂತ್ರಿಗಳು ಕರ್ನಾಟಕ ಸರಕಾರ, ಗೌರವಾಧ್ಯಕ್ಷರು ಒಕ್ಕಲಿಗರ ಸಂಘ ಮಹಾರಾಷ್ಟ್ರ.
ಗೌರವ ಅತಿಥಿಗಳಾಗಿ :
ಡಾ.ಕೆ ಎಚ್ ಗೋವಿಂದರಾಜ್ – ಐಎಎಸ್, ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರ ಸರಕಾರದ ನಗರಾಭಿವೃದ್ಧಿ ವಿಭಾಗ
ಸಿ ಎನ್ ಬಾಲಕೃಷ್ಣ – ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ನಿರ್ದೇಶಕರು,
ಪ್ರವೀಣ್ ಭೋಜ ಶೆಟ್ಟಿ – ಅಧ್ಯಕ್ಷರು,ಬಂಟರ ಸಂಘ ಮುಂಬೈ
ರವಿ ಎಸ್ ಶೆಟ್ಟಿ – ಸಿಎಂಡಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್
ಎಚ್ ಎಮ್ ರೇವಣ್ಣ – ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳು, ಅಧ್ಯಕ್ಷರು ಪಂಚ ಯೋಜನಾ ಅನುಷ್ಠಾನ ಕರ್ನಾಟಕ ಸರಕಾರ
ಎ ಎಚ್ ವಿಶ್ವನಾಥ್ – ಶಾಸಕರು, ಮಾಜಿ ಮಂತ್ರಿಗಳು, ಶಾಸಕಾಂಗ ಸಭಾ ಸದಸ್ಯರು, ಕರ್ನಾಟಕ ಸರಕಾರ
ಸಿಎಂ ನಾಗರಾಜ್ -ಅಧ್ಯಕ್ಷರು, ದೆಹಲಿ ಕರ್ನಾಟಕ ಸಂಘ ನವದೆಹಲಿ.
ಜಯಕೃಷ್ಣ ಎ ಶೆಟ್ಟಿ – ಸ್ಥಾಪಕ ಅಧ್ಯಕ್ಷರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈ
ಸಿ ಎಂ ನಾಗರಾಜ್ – ರಾಜ್ಯಾಧ್ಯಕ್ಷ ಶೆಫಾರ್ಡ್ ಇಂಡಿಯಾ ಅಂತರಾಷ್ಟ್ರೀಯ ಸಂಸ್ಥೆ
ಕೆ ಎಂ ರಾಮಸ್ವಾಮಿಜಿ – ಧರ್ಮದರ್ಶಿ, ಶ್ರೀ ಶನೇಶ್ವರ ಮಂದಿರ ಚೆoಬೂರು,
ಎಂ ಬಿ ಹರೀಶ್ – ರಾಷ್ಟ್ರೀಯ ಸಂಚಾಲಕರು ಶೆಫರ್ಡ್ ಇಂಡಿಯಾ ಅಂತರಾಷ್ಟ್ರೀಯ ಸಂಸ್ಥೆ
ಸೂರ್ಯಕಾಂತ್ ಜೆ ಸುವರ್ಣ – ಕಾರ್ಯಾಧ್ಯಕ್ಷರು ಭಾರತ್ ಬ್ಯಾಂಕ್ ಲಿಮಿಟೆಡ್ ಮುಂಬೈ
ರಂಗಪ್ಪ ಸಿ ಗೌಡ – ಕಾರ್ಯಧ್ಯಕ್ಷರು ಜಯಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
ಗೌರವ ಅತಿಥಿಗಳು : ಮಲ್ಲಿಕಾರ್ಜುನ – ಆರ್ ಟಿ ಓ ಕಾಮಗಾರ ಸಂಘ ಕೆ ಆರ್ ಪೇಟೆ ಬೆಂಗಳೂರು,
ಶ್ಯಾಮ್ ಎನ್ ಶೆಟ್ಟಿ – ಮಾಜಿ ಅಧ್ಯಕ್ಷರು ಬಾಂಬೆ ಬಂಚ್ ಅಸೋಸಿಯೇಷನ್ ಮುಂಬೈ
ಎಲ್ ವಿ ಅಮೀನ್ – ಮಾಜಿ ಅಧ್ಯಕ್ಷರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈ
ಸುರೇಂದ್ರ ಕುಮಾರ್ ಹೆಗ್ಡೆ – ಅಧ್ಯಕ್ಷರು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ
ಮೋಹನ್ ಗೌಡ – ಗೌರವ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಕ್ಷ ಮುಂಬೈ
ಸ್ವಾಗತ ಮಾತು : ಜಿತೇಂದ್ರ ಗೌಡ, ಮಾಜಿ ಅಧ್ಯಕ್ಷರು ಒಕ್ಕಲಿಗರ ಸಂಘ ಮಹಾರಾಷ್ಟ್ರ
ಅಭಿನಂದನಾ ನುಡಿ : ದಯಾಸಾಗರ್ ಚೌಟ, ಹಿರಿಯ ಪತ್ರಕರ್ತರು ,ವಾಗ್ಮಿ
ಅಭಿನಂದನಾ ಗೌರವ ಸನ್ಮಾನ
ಸ್ವೀಕರಿಸುವವರು :
ಒಕ್ಕಲಿಗರ ಸಂಘ ಮಹಾರಾಷ್ಟ್ರ, ಕೆಂಪೇಗೌಡ ಎಸೋಸಿಯೇಷನ್ ಮುಂಬೈ, ಕುರುಬರ ಸಂಘ ಮಹಾರಾಷ್ಟ್ರ, ಗೌಡರ ಉನ್ನತೀಕರಣ ಸಂಸ್ಥೆ ನವಿ ಮುಂಬೈ
ವಿಶೇಷ ಅಭಿನಂದನಾ ಗೌರವ ಸ್ವೀಕರಿಸುವವರು :
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ( ವಜ್ರ ಮಹೋತ್ಸವ ವರ್ಷ ಸಂಭ್ರಮ)
ಕನ್ನಡ ಭವನ ಸ್ಕೂಲ್, ಜೂನಿಯರ್ ಕಾಲೇಜ್, ಫೋರ್ಟ್ ಮುಂಬೈ (ವಜ್ರ ಮಹೋತ್ಸವ ವರ್ಷ ಸಂಭ್ರಮ )
ಸಾಧಕ ಗೌರವ ಸನ್ಮಾನ
ಸ್ವೀಕರಿಸುವವರು : ಅಮೃತ ಶೆಟ್ಟಿ( ಶಿಕ್ಷಣ ಮತ್ತು ಸಮಾಜ ಸೇವೆ )
ಡಾ. ಬಲರಾಮ ಗೌಡ (ಶಿಕ್ಷಣ ಮತ್ತು ಸಮಾಜ ಸೇವೆ )
ವೇಣುಗೋಪಾಲ್ ಶೆಟ್ಟಿ (ಸಮಾಜ ಸೇವೆ ಕಲಾ ರಂಗ ಪೋಷಕ )
ಲಯನ್ ಕೃಷ್ಣಯ್ಯ ಹೆಗಡೆ (ಸಮಾಜ ಸಂಘಟನೆ )
ಪ್ರೊ.ಚೇತನ್ ಗೌಡ ( ಶಿಕ್ಷಣ ,ರಂಗ ಕಲಾವಿದ )
ಮತ್ತು ಸಾಧಕ ಪ್ರತಿಭೆಗಳಿಗೆ ಯುವ ಪ್ರತಿಭಾ ಗೌರವ ಹಾಗೂ ಬಾಲ ಪ್ರತಿಭಾ ಗೌರವ
ನಿರೂಪಣೆ : ನಳಿನಾ ಪ್ರಸಾದ್, ಬಾಲಕೃಷ್ಣ ಆಧ್ಯಪಾಡಿ, ರವಿ ಗೌಡ, ಪದ್ಮನಾಭ ಸಸಿಹಿತ್ಲು.

ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೇಳಿ ಕೊಂಡಿದ್ದಾರೆ.

.



Related posts

ಮಲಾಡ್ ಕುರಾರ್  ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ: ಡಿ.1ರಂದು ಅಖಂಡ ಹರಿನಾಮ ಸಂಕೀರ್ತನೆ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಕುಲಾಲ ಸಂಘ ಮುಂಬಯಿ: ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ – ಪೆ 15.: ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ – 10.2.26ರಿಂದ 23.02.26ರ ವರೆಗೆ “ವರ್ಷಾವಧಿ ಉತ್ಸವ”

Mumbai News Desk

ಮಾ. 29: ಬೋರಿವಲಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಸ್ಪಂದಿಸಲು ಭಕ್ತಾದಿಗಳಿಗೆ ಕರೆ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk