28.4 C
Mumbai
March 7, 2026
Mumbai News Kannada
ಸುದ್ದಿ

ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ, ಪುರೋಹಿತರಾದ ಡಾ. ಎಂ. ಜೆ. ಪ್ರವೀಣ್ ಭಟ್ ಅವರ ಜಾಹೀರಾತು ಮುಂಬೈ ಲೋಕಲ್ ಟ್ರೈನ್ ನಲ್ಲಿ ನೀಡಿ ಅಭಿಮಾನ ಮೆರೆದ ಅವರ ಅಭಿಮಾನಿ.





ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷ್ಯರು ಮತ್ತು ಹೆಸರಾಂತ ಪುರೋಹಿತರಾದ ಡಾ! ಎಂ ಜೆ ಪ್ರವೀಣ್ ಭಟ್ ತುಳುವ ಕನ್ನಡಿಗರೆಲ್ಲರಿಗೂ ಪರಿಚಿತರು. ಅವರು ಜ್ಯೋತಿಷಿಯಾಗಿ ಪ್ರಾವೀಣ್ಯತೆ ಪಡೆದಿದ್ದು ಹಲವು ಬಾರಿ ಅಸಾಮಾನ್ಯ ಸಾಧನೆ ಮಾಡಿರುವರು.


ಡಾ! ಪ್ರವೀಣ್ ಭಟ್ ಅವರ ಸಿದ್ದಿ ಸಾಧನೆಗೆ ಒಂದು ಮಹತ್ತರ ಉದಾಹರಣೆ :
ಅಂದು 2017ರಲ್ಲಿ ಬ್ರಹನ್ ಮುಂಬೈ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಸಾಯನ್ ಉಪನಗರದ ವಾರ್ಡ್ ಒಂದರ ಮಹಿಳಾ ಅಭ್ಯರ್ಥಿಯಾದ
ರಾಜಶ್ರೀ ಶಿರೋಡ್ಕರ್ ಅವರು ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಬರುತ್ತಾರೆ ಎಂಬ ಭವಿಷ್ಯ ಪ್ರವೀಣ್ ಭಟ್ ನುಡಿದಿದ್ದರು.ಮತ ಎಣಿಕೆಯಲ್ಲಿ ರಾಜಶ್ರೀ ಅವರು ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.ಇಂತಹ ಅನೇಕ ಘಟನೆಗಳು ನಡೆದಿದ್ದು, ಪ್ರವೀಣ್ ಭಟ್ ಅವರ ನಿಖರವಾದ ಭವಿಷ್ಯಕ್ಕೆ ಸಾಕ್ಷಿ.


ಸಯನ್ ನ್ನಲ್ಲಿರುವ ಅವರ ಕಚೇರಿಗೆ ಬರುವ ಮಂದಿಗೆ ಭವಿಷ್ಯದ ಜತೆಗೆ ಪ್ರವೀಣ್ ಭಟ್ ಸಾಂತ್ವಾನವನ್ನು ನೀಡುತ್ತಾರೆ.
ಇದೀಗ ಪ್ರವೀಣ್ ಭಟ್ ಅವರಿಂದ ಪ್ರಭಾವಿತರಾದ ಸೂರತ್ ನ ಉದ್ಯಮಿ, ಸಾಬ್ ಡೆವಲಪರ್ಸ್ ನ ಅಶ್ವಿನ್ ಪಟೇಲ್ ಅವರು ಪ್ರವೀಣ್ ಭಟ್ ಅವರ ಜಾಹೀರಾತನ್ನು ಮುಂಬೈಯ ಲೋಕಲ್ ಟ್ರೈನ್ ನಲ್ಲಿ ನೀಡಿ ಅಭಿಮಾನ ಮೆರೆದಿದ್ದಾರೆ. ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದ ಜಾಹೀರಾತು ಮೂರು ತಿಂಗಳ ಅವಧಿಯಾಗಿರುತ್ತದೆ.ಇದು ತುಳುವ-ಕನ್ನಡಿಗರೊಬ್ಬರ ಸಾಧನೆ ಹಾಗೂ ಪ್ರವೀಣ್ ಭಟ್ ಅವರ ಜನಪ್ರಿಯತೆಗೆ ಇದು ಸಾಕ್ಷಿ.
ಅರ್ಚಕರಾಗಿ, ಪುರೋಹಿತರಾಗಿ, ಜ್ಯೋತಿಷಿಯಾಗಿ ಜನಾನುರಾಗಿಯಾದ ಪ್ರವೀಣ್ ಭಟ್ ಅವರು ಕನ್ನಡ ಸಂಘ ಸಯನ್ ನ ಅಧ್ಯಕ್ಷರಾಗಿರುವರು. ಸಂಘವು ಸ್ಥಾಪನೆಯಾಗಿ ಒಂದುವರೆ ವರ್ಷದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.


ಸಂಘದ ಪ್ರಥಮ ವಾರ್ಷಿಕೋತ್ಸವದ ಸಂಧರ್ಭ ದೂರದ ದುಬೈ ಯ ನುರಿತ ನಾಟಕ ತಂಡದ ಕಲಾವಿದರು ಮುಂಬೈಯಲ್ಲಿ ತುಳು ನಾಟಕ ಪ್ರದರ್ಶನ ನೀಡಿರುವುದು ಒಂದು ದಾಖಲೆ.ಅಲ್ಲದೇ ಅವರ ಘನ ಅದ್ಯಕ್ಷ್ಯತೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಬ್ರಹತ್ ಉದ್ಯೋಗ ಮೇಳಗಳೂ ಯಶಸ್ವಿ ಸಂಪನ್ನ ಗೊಂಡಿದೆ. ಡಾ. ಪ್ರವೀಣ್ ಭಟ್ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿ ಆಗಲಿ , ಕನ್ನಡ ಸಂಘ ಸಯನ್ ಅವರ ಸಾರಥ್ಯದಲ್ಲಿ ಅನುಪಮ ಸೇವೆ ನಿಡುವಂತಾಗಲಿ.



Related posts

ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ್ ವತಿಯಿಂದ ಗಣೇಶಪುರಿಯಲ್ಲಿ  ಭಂಡಾರ ಸೇವೆ ಸಂಪನ್ನ

Mumbai News Desk

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಅವಧಿಗೂ ಮೊದಲೇ ಮುಂಬೈಗೆ ಮಾನ್ಸೂನ್ ಪ್ರವೇಶ : 107 ವರ್ಷಗಳ ದಾಖಲೆ ಮುರಿದ ಮಳೆ.

Mumbai News Desk

ಮೋದಿ-ಪುಟಿನ್ ಭೇಟಿ: ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Mumbai News Desk

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk