September 6, 2026
Mumbai News Kannada
ಸುದ್ದಿ

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ





ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದ ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ.
ಟ್ರಂಪ್ ಅವರ ಸುಂಕ ಘೋಷಣೆ ನಂತರ ಶೇರು ಮಾರುಕಟ್ಟೆಗಳಲ್ಲಿ ಬಾರಿ ಕುಸಿತ ಕಂಡು ಬಂದಿದ್ದು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಅವ್ಯವಸ್ಥೆ ಉಂಟಾಗಿದೆ. ಸೋಮವಾರ ಏಷ್ಯಾದ ಮಾರುಕಟ್ಟೆಗಳು ಪ್ರಮುಖ ಕುಸಿತವನ್ನು ಕಂಡವು. ಜಪಾನ್ ನ ನಿಕ್ಕಿ 225 ಶೇ. 6.3 ಮತ್ತು ಹಾಂಗ್ ಕಾಂಗ್ ನ ಹ್ಯಾಂಗ್ ಸೇಂಗ್ ಶೇ. 10 ರಷ್ಟು ಕುಸಿಯಿತು. ಭಾರತೀಯ ಮಾರುಕಟ್ಟೆ ಸಹ ವಹಿವಾಟು ಆರಂಭವಾದಾಗ ಶೇ. 5 ರಷ್ಟು ಕುಸಿದಿದೆ. ಅಮೇರಿಕದ ಎಲ್ಲಾ ಪ್ರಮುಖ ಷೇರು ಸೂಚ್ಯಂಕಗಳು ಶೇ. 5 ರಷ್ಟು ಕುಸಿದಿದ್ದು, 2020 ರ ನಂತರದ ಕೆಟ್ಟ ವಾರವನ್ನು ಅನುಭವಿಸಿದೆ. ಈ ಸುಂಕಗಳಿಂದಾಗಿ ಅಮೆರಿಕ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತದ ಸಂಭಾವನೀಯತೆ ಶೇ. 60 ಕ್ಕೆ ಏರಿದೆ ಎಂದು ಜೆಪಿ ಮಾರ್ಗನ್ ಎಚ್ಚರಿಸಿದೆ.
ಅಮೆರಿಕ ಅಧ್ಯಕ್ಷ ಡೋನಲ್ ಟ್ರಂಪ್ ಅವರ ನೂತನ ಸುಂಕ ನೀತಿ ಜಗತ್ತನ್ನು ಗಿರಗಿ ಹೊಡೆಯುವಂತೆ ಮಾಡಿತು. ಉದ್ಯಮಿಗಳಿಗೆ ‘ಸುವರ್ಣಕಾಲ’ ಎಂದು ಡೊನಾಲ್ಡ್ ಟ್ರಂಪ್ ಕರೆಯುತಿರುವ ಈ ಸುಂಕಗಳು ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ನಲುಗುವಂತೆ ಮಾಡಿದೆ. ಭಾರತೀಯ ಶೇರು ಮಾರುಕಟ್ಟೆ ಕಳೆದ 10 ತಿಂಗಳ ಅವಧಿಯಲ್ಲಿನ ಅತಿ ದೊಡ್ಡ ಕುಸಿತವನ್ನು ಅನುಭವಿಸಿದ್ದು ಕೆಲವೇ ಸೆಕೆಂಡುಗಳಲ್ಲಿ ಹೂಡಿಕೆದಾರರ 20 ಲಕ್ಷ ಕೋಟಿ ಹೆಚ್ಚಿನ ಮೊತ್ತ ಅಳಿಸಿ ಹೋಯಿತು. ಭಾರತದ ಅಗ್ರ ಮೂವತ್ತು ಸಂಸ್ಥೆಗಳನ್ನು ಒಳಗೊಂಡಿರುವ ಸೆನ್ಸೆಕ್ಸ್ ಬಹುತೇಕ 4000 ಅಂಕಗಳ ಕುಸಿತ ಅನುಭವಿಸಿ, ದಿನದ ವಹಿವಾಟಿನ ಒಂದು ಹಂತದಲ್ಲಿ 21, 743.65ಗೆ ತಲುಪಿತ್ತು. ಈ ಮಾರುಕಟ್ಟೆ ಕೋಲಾಹಲ ಬೃಹತ್ ಹೂಡಿಕೆದಾರದಿಂದ ಸಣ್ಣ ಹೂಡಿಕೆದಾರರ ತನಕ ಎಲ್ಲರೂ ಭಾರತದ ಪರಿಸ್ಥಿತಿ ಇನ್ನೇನಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ.



Related posts

ಏಪ್ರಿಲ್ 7 ರಂದು ಥಾಣೆ ಯಲ್ಲಿ ದಕ್ಷಿಣ ಕನ್ನಡ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳೊಂದಿಗೆ ತುಳು ಕನ್ನಡಿಗರ ಸಭೆ. ಸಂಸದ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿವಂತೆ ಮನವಿ.

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸ್ತನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ ಅವರಿಗೆ ನುಡಿನಮನ: ಅಂಧೇರಿಯಲ್ಲಿ ಸಂತಾಪ ಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ, ಪೂರ್ವಭಾವಿ ಸಭೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (26/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk