July 23, 2026
Mumbai News Kannada
ಸುದ್ದಿ

ಮೊಗವೀರ ಮಹಾಜನ ಸೇವಾ ಸಂಘದ ವಾರ್ಷಿಕ ಮಹಾಸಭೆ. ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ, :ರಾಜು ಮೆಂಡನ್ 







ಮುಂಬೈ: ಮುಂಬೈಯ ಬಗ್ವಾಡಿ ಹೋಬಳಿಯ ಮೊಗವೀರ ಮಹಾಜನ ಸೇವಾ ಸಂಘದ 81ನೇ ವಾರ್ಷಿಕ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. 

ಸಂಘದನೂತನ ಅಧ್ಯಕ್ಷ ರಾಜು ಮೆಂಡನ್ ಮಾತನಾಡಿ, ಮುಂದಿನ ವರ್ಷ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಎಂದಿನಂತೆ ಸಮಾಜದ ಬೆಂಬಲಕ್ಕೆ ನಿಲ್ಲುವ ಸುರೇಶ್ ಕಾಂಚನ್‌ರವರ ಸಹಕಾರದ ನಿರೀಕ್ಷೆ ಮುಂದೆಯೂ ಇದೆ. ಎಲ್ಲರೂ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.

ಸುರೇಶ್ ತೋಳಾರ್ ಮಾತನಾಡಿ, ಊರಿನಲ್ಲಿ ಸೌಲಭ್ಯಗಳು ಸಾಕಷ್ಟಾಗಿವೆ. ಈಗ ಸುರೇಶ್ ಕಾಂಚನ್ ನೇತೃತ್ವದಲ್ಲಿ ಮುಂಬೈಯ ಮೊಗವೀರರಿಗೆ ಏನಾದರೂ ಮಾಡಬೇಕು ಎಂದು ಕೋರಿಕೊಂಡರು. 

ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ ಗಣೇಶ ಮೆಂಡನ್, ಮುಂದಿನ ಎರಡು ವರ್ಷ ಹೊಸ ಕಾರ್ಯಕಾರಿ ಸಮಿತಿ ಮತ್ತು ಹಿಂದಿನ ಸದಸ್ಯರೆಲ್ಲರೂ ಒಟ್ಟಾಗಿ ಸಂಘಕ್ಕಾಗಿ ದುಡಿಯೋಣ ಎಂದು ಹೇಳಿದರು. 

ನಾರಾಯಣ ಮೆಂಡನ್ ಅವರು ಮಾತನಾಡಿ, ಸಂಘದ ಎಲ್ಲಾ ಕೆಲಸಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 

     ಬಾಬು ಮೊಗವೀರ ಮಾತನಾಡಿ, ಡಾ.ಜಿ ಶಂಕರ್ ಅವರು ಇದ್ದ ಹಾಗೆ ನಮಗೆ ಮುಂಬೈಯಲ್ಲಿ ಸುರೇಶ್ ಕಾಂಚನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

   ಗೋಪಾಲ‌ ಚಂದನ್ ಅವರು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. 

ವನಿತಾ ಎಸ್. ತೋಳಾರ್ ಮಾತನಾಡಿ ಮಹಿಳಾ ವಿಭಾಗದ ಕಾರ್ಯಕ್ರಮಗಳಿಗೆ ಎಲ್ಲರೂ ಬೆಂಬಲ ನೀಡಿದರು. ಹಾಗೆಯೇ  ಸಂಘಕ್ಕೆ ಸದಾ ಬೆಂಬಲವನ್ನು ನೀಡುತ್ತೇವೆ ಎಂದರು. 

ಸಂಘದಮಾಜಿ ಅಧ್ಯಕ್ಷ ನಾಣು ಚಂದನ್ ಮಾತನಾಡಿ, ವಾರ್ಷಿಕ ಸಭೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರು ಸಮಾಜದ ಹಿತೈಷಿಗಳಾಗಿದ್ದಾರೆ. ಸುರೇಶ್ ಕಾಂಚನ್ ಅವರು ಮೊಗವೀರ ಸಮುದಾಯದ ಉಕ್ಕಿನ ಮನುಷ್ಯ ಇದ್ದಂತೆ ಎಂದು ಹೇಳಿ, ಅಧ್ಯಕ್ಷ ರಾಜು ಮೆಂಡನ್‌ರವರಿಗೆ ಸಮಾಜದ ಸಹಕಾರವನ್ನು ಕೋರಿದರು. 

ನೂತನ ಅಧ್ಯಕ್ಷ ರಾಜು ಮೆಂಡನ್ ಮಾತನಾಡಿ, ಮುಂದಿನ ವರ್ಷ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಎಂದಿನಂತೆ ಸಮಾಜದ ಬೆಂಬಲಕ್ಕೆ ನಿಲ್ಲುವ ಸುರೇಶ್ ಕಾಂಚನ್‌ರವರ ಸಹಕಾರದ ನಿರೀಕ್ಷೆ ಮುಂದೆಯೂ ಇದೆ. ಎಲ್ಲರೂ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.

ಲೆಕ್ಕಪರಿಶೋಧಕ ಯಶವಂತ ಕರ್ಕೇರ ಅವರಿಂದ ಪರಿಗಣಿಸಲ್ಪಟ್ಟ 2021-2022 ಹಾಗೂ 2022-2023 ಅವಧಿಯ ಲೆಕ್ಕಪತ್ರಗಳನ್ನು ಗಣೇಶ್ ಮೆಂಡನ್ ಸಭೆಯ ಮುಂದಿಟ್ಟರು. ಭಾಸ್ಕರ ಮೆಂಡನ್ ಮಂಜೂರು ಮಾಡಿ, ಮಂಜುನಾಥ ಮೆಂಡನ್ ಅನುಮೋದಿಸಿದರು.

ಮಂಜುನಾಥ ನಾಯ್ಕ ಅವರು ಮಹಾಸಭೆಯ ವರದಿ ಮಂಡಿಸಿದರು. ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಓದಿ ಹೇಳಲಾಯಿತು. ಹೊಸ‌ ಸಮಿತಿಗೆ ಉದಯ ಕುಮಾರ್ ಪುತ್ರನ್ ಅವರ ಸೂಚನೆಯಂತೆ ಬಾಬು ಕೆ. ಮೊಗವೀರ ಅವರು ಅನುಮೋದನೆ ನೀಡಿದರು. ಲೆಕ್ಕಪರಿಶೋಧಕ ಯಶವಂತ ಕರ್ಕೇರ ಅವರ ಆಯ್ಕೆಯನ್ನು ಸಂತೋಷ ಪುತ್ರನ್ ಸೂಚಿಸಿ, ರಾಜೇಂದ್ರ ಚಂದನ್ ಅನುಮೋದಿಸಿದರು.

——–

 ಸಂಘಟಿಕರಾಗಿ ಸಮಾಜ ಕಟ್ಟೋಣ: ಸುರೇಶ ಕಾಂಚನ್

ಸುರೇಶ ಕಾಂಚನ್‌ಸಂಘದ ಗೌರವ ಅಧ್ಯಕ್ಷ ಸುರೇಶ ಕಾಂಚನ್‌ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ  ಎಲ್ಲಾ ಕಾರ್ಯಕ್ರಮಗಳಿಗೆ ಸದಸ್ಯರ ಬೆಂಬಲ ಕೋರುತ್ತೇವೆ. ಕುಂದಾಪುರದ ಹಾಲ್‌ ನಿರ್ಮಾಣಕ್ಕೆ  ಎಲ್ಲರೂ ಸಹಕರಿಸಿದ್ದಾರೆ. ಹಾಗೆಯೇ ಮುಂಬೈಯಲ್ಲೂ ಏನಾದರೂ ಮಾಡಬೇಕು ಅನ್ನುವ ಆಶಯವನ್ನು ಈಡೇರಿಸುವತ್ತ ಪ್ರಯತ್ನ ಮಾಡೋಣ ಎಂದು ನುಡಿದರು. 



Related posts

ವಿಲೇಪಾರ್ಲೆ : ಕೆಡವಲಾದ ಜೈನ ಮಂದಿರದ ಪಕ್ಕದ ಹೋಟೆಲ್ ಗೆ ಬಿಎಂಸಿ(BMC)ಯಿಂದ ನೋಟಿಸ್ ಜಾರಿ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (27/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಲೋಕಸಭಾ ಚುನಾವಣೆ : ಉಡುಪಿ ಗೆ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡಕ್ಕೆ ಕ್ಯಾ. ಬ್ರಿಜೇಶ್ ಚೌಟ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಾಸ್ಯಾ ಶಂಕರ ಶೆಟ್ಟಿ ಶೇ. 90.80, ಲಿಖಿತ್ ಶಂಕರ್ ಶೆಟ್ಟಿಗೆ ಶೇ. 85 ಅಂಕ.

Mumbai News Desk

ಮಂಗಳೂರಿನಲ್ಲಿ ಉದ್ಯಮಿ, ಶ್ರೀಮಂತರಿಗೆ 200 ಕೋಟಿಗೂ ಅಧಿಕ ವಂಚಿಸಿದ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ ಅರೆಸ್ಟ್

Mumbai News Desk

ಸಂಘಟಕ, ಕಲಾ ಪೋಷಕ ರಾಜು ಮೆಂಡನ್ ವಂಡ್ಸೆ ಅವರಿಗೆ ಮಾತೃ ವಿಯೋಗ.

Mumbai News Desk