
ಚಿತ್ರ ವರದಿ ದಿನೇಶ್ ಕುಲಾಲ್
ಮಲಾಡ್ ಪೂರ್ವ ಗೋರೆಗಾಂವ್ ಪ್ಲೈಓವರ್ ಇರಾನಿ ಕಾಲೋನಿಯಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಆಡಳಿತದಲ್ಲಿರುವ ಶನಿಮಂದಿರದಲ್ಲಿ ವಾರ್ಷಿಕ ಅಮಾವಾಸ್ಯೆಯ ಶನಿ ಜಯಂತಿ ಆಚರಣೆ
ಮೇ. 26 ರಂದು ಭಕ್ತಿ ಸಂಭ್ರಮದೊಂದಿಗೆ ದಿನ ಪೂರ್ತಿ ನಡೆಯಿತು.
.
ಅಂದು ಬೆಳಿಗ್ಗೆ ತನಕ ಗಣಹೋಮ.ಬಳಿಕ ಗಣೇಶನ ಮೂರ್ತಿಗೆ ಬೆಳ್ಳಿಯ ಕವಚವನ್ನು ದೇವಸ್ಥಾನದ ಆಡಳಿತ ಮಂಡಳಿ ಯು ವೈದಿಕ ವಿಧಿ ವಿಧಾನಗಳೊಂದಿಗೆ
ಸಮರ್ಪಿಸಿದರು.ಆನಂತರ ವೇದಮೂರ್ತಿ ಕೆ ಗೋವಿಂದ ಭಟ್ ಇವರಿಂದ ಸಾಮೂಹಿಕ ಶನಿ ಶಾಂತಿ .ಅಭಿಷೇಕ ಮಧ್ಯಾಹ್ ಮಹಾಪೂಜೆಯನ್ನು ದೇವಸ್ಥಾನದ ಅರ್ಚಕರಾದ ಸುಧಾಕರ ಎಂ. ಶೆಟ್ಟಿ ನೆರವೇರಿಸಿದರು.

ಶಾಸ್ತ್ರ ಸಂಖ್ಯೆಯಲ್ಲಿ ಸೇರಿರುವ ಭಕ್ತರು ಶ್ರೀದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಅನ್ನ ಪ್ರಸಾದ ಸ್ವೀಕರಿಸಿದರು
. ಅಪರಾಹ್ನ ಕಲಶ ಮುಹೂರ್ತ ನಡೆದ ಬಳಿಕ, ಮಂದಿರದ ನೂತನ ಪ್ರಾರಂಭಗೊಂಡ ಮಹಿಳಾ ಮಂಡಳಿಯವರಿಂದ ಭಜನೆ ನಡೆಯಿತು.
, ಸಂಜೆ ಶನಿ ಗ್ರಂಥ ಪಾರಾಯಣ. ಸಮಿತಿಯ ಸದಸ್ಯರಿಂದ ಭಜನೆ. ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ದಿನಪೂರ್ತಿ ನಡೆದ ಪೂಜಾ ಕಾರ್ಯಗಳಲ್ಲಿ ಉದ್ಯಮಿಗಳು. ರಾಜಕೀಯ ನಾಯಕರು ಸಿನಿಮಾ ನಟರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು.
ಪಾಲ್ಗೊಂಡು ದೇವರ ದರ್ಶನವನ್ನು ಪಡೆದರು.

ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಮೋಹನ್ . ಜಿ. ಬಂಗೇರ, ಕಾರ್ಯದರ್ಶಿಗಗಾದ ಎಚ್.ಎಸ್. ಕರ್ಕೇರ, ಎಂ. ಎನ್. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್. ಸಾಲ್ಯಾನ್, ಅತುಲ್ ಎಂ. ಓಜಾ, ಸಮಿತಿ ಸದಸ್ಯರಾದ ಎಸ್.ಎನ್. ಕೋಟ್ಯಾನ್, ಎನ್.ಎನ್. ಪೂಜಾರಿ, ಎಸ್. ಎ. ಸಾಲ್ಯಾನ್, ಎಂ. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಬಿ. ಎಚ್. ಹೆಚ್ಚಾಡಿ, ‘ಜಯಾ ಎಂ. ಬಂಗೇರ, ತನೂಜ್ ಕಪ್ಪನಕಲ್, ಯು. ವಿ. ರಾವ್, ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಭುವಾಜಿ ಕೆ. ಎನ್. ಸಿ. ಸಾಲ್ಯಾನ್, ಉಪ ಸಮಿತಿಯ ಸದಸ್ ಪಿ. ಪಿ. ಸಾಲ್ಯಾನ್, ಚಂದ್ರಾವತಿ ಪುತ್ರನ್, ಜಿ. ಆರ್. ಸಾಲ್ಯಾನ್ ಆರ್. ಎಸ್. ದೇವಾಡಿಗ, ಆರ್. ವೈ. ಪುತ್ರನ್, ಎನ್. ಆರ್. ಬಂಗೇರ, ವಿ. ಆರ್. ವಾಪ್ಟರೆ ಮತ್ತಿತರ ಸದಸ್ಯರು ಸಹಕರಿಸಿದರು.
ರಾತ್ರಿ ದೇವಸ್ಥಾನದ ಹೊರ ಆವರಣದ
ಮುಂಬೈಯ ಅಭಿನಯ ಮಂಟಪದ ಕಲಾವಿದರು ಅಭಿನಯಿಸಿದರು. . ಕರುಣಾಕರ್ ಕಾಪು ನಿರ್ದೇಶನ ಪಂಜುರ್ಲಿ ನಾಟಕ ಪ್ರದರ್ಶನಗೊಂಡಿತು
B. Dinesh Kulal
Mob.:9821868674