July 23, 2026
Mumbai News Kannada
ಪ್ರಕಟಣೆ

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ, ಇರಾನಿ ಕಾಲೋನಿ ಮಲಾಡ್.ಭಕ್ತಿ ಸಂಭ್ರಮದೊಂದಿಗೆ ಶನಿ ಜಯಂತಿ ಆಚರಣೆ.







ಚಿತ್ರ ವರದಿ ದಿನೇಶ್ ಕುಲಾಲ್

ಮಲಾಡ್ ಪೂರ್ವ ಗೋರೆಗಾಂವ್ ಪ್ಲೈಓವರ್ ಇರಾನಿ ಕಾಲೋನಿಯಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಆಡಳಿತದಲ್ಲಿರುವ ಶನಿಮಂದಿರದಲ್ಲಿ ವಾರ್ಷಿಕ ಅಮಾವಾಸ್ಯೆಯ ಶನಿ ಜಯಂತಿ ಆಚರಣೆ
ಮೇ. 26 ರಂದು ಭಕ್ತಿ ಸಂಭ್ರಮದೊಂದಿಗೆ ದಿನ ಪೂರ್ತಿ ನಡೆಯಿತು.
.
ಅಂದು ಬೆಳಿಗ್ಗೆ ತನಕ ಗಣಹೋಮ.ಬಳಿಕ ಗಣೇಶನ ಮೂರ್ತಿಗೆ ಬೆಳ್ಳಿಯ ಕವಚವನ್ನು ದೇವಸ್ಥಾನದ ಆಡಳಿತ ಮಂಡಳಿ ಯು ವೈದಿಕ ವಿಧಿ ವಿಧಾನಗಳೊಂದಿಗೆ
ಸಮರ್ಪಿಸಿದರು.ಆನಂತರ ವೇದಮೂರ್ತಿ ಕೆ ಗೋವಿಂದ ಭಟ್ ಇವರಿಂದ ಸಾಮೂಹಿಕ ಶನಿ ಶಾಂತಿ .ಅಭಿಷೇಕ ಮಧ್ಯಾಹ್ ಮಹಾಪೂಜೆಯನ್ನು ದೇವಸ್ಥಾನದ ಅರ್ಚಕರಾದ ಸುಧಾಕರ ಎಂ. ಶೆಟ್ಟಿ ನೆರವೇರಿಸಿದರು.

ಶಾಸ್ತ್ರ ಸಂಖ್ಯೆಯಲ್ಲಿ ಸೇರಿರುವ ಭಕ್ತರು ಶ್ರೀದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಅನ್ನ ಪ್ರಸಾದ ಸ್ವೀಕರಿಸಿದರು
. ಅಪರಾಹ್ನ ಕಲಶ ಮುಹೂರ್ತ ನಡೆದ ಬಳಿಕ, ಮಂದಿರದ ನೂತನ ಪ್ರಾರಂಭಗೊಂಡ ಮಹಿಳಾ ಮಂಡಳಿಯವರಿಂದ ಭಜನೆ ನಡೆಯಿತು.
, ಸಂಜೆ ಶನಿ ಗ್ರಂಥ ಪಾರಾಯಣ. ಸಮಿತಿಯ ಸದಸ್ಯರಿಂದ ಭಜನೆ. ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.


ದಿನಪೂರ್ತಿ ನಡೆದ ಪೂಜಾ ಕಾರ್ಯಗಳಲ್ಲಿ ಉದ್ಯಮಿಗಳು. ರಾಜಕೀಯ ನಾಯಕರು ಸಿನಿಮಾ ನಟರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು.
ಪಾಲ್ಗೊಂಡು ದೇವರ ದರ್ಶನವನ್ನು ಪಡೆದರು.


ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಮೋಹನ್ . ಜಿ. ಬಂಗೇರ, ಕಾರ್ಯದರ್ಶಿಗಗಾದ ಎಚ್.ಎಸ್. ಕರ್ಕೇರ, ಎಂ. ಎನ್. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್. ಸಾಲ್ಯಾನ್, ಅತುಲ್ ಎಂ. ಓಜಾ, ಸಮಿತಿ ಸದಸ್ಯರಾದ ಎಸ್.ಎನ್. ಕೋಟ್ಯಾನ್, ಎನ್.ಎನ್. ಪೂಜಾರಿ, ಎಸ್. ಎ. ಸಾಲ್ಯಾನ್, ಎಂ. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಬಿ. ಎಚ್. ಹೆಚ್ಚಾಡಿ, ‘ಜಯಾ ಎಂ. ಬಂಗೇರ, ತನೂಜ್ ಕಪ್ಪನಕಲ್, ಯು. ವಿ. ರಾವ್, ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಭುವಾಜಿ ಕೆ. ಎನ್. ಸಿ. ಸಾಲ್ಯಾನ್, ಉಪ ಸಮಿತಿಯ ಸದಸ್ ಪಿ. ಪಿ. ಸಾಲ್ಯಾನ್, ಚಂದ್ರಾವತಿ ಪುತ್ರನ್, ಜಿ. ಆರ್. ಸಾಲ್ಯಾನ್ ಆರ್. ಎಸ್. ದೇವಾಡಿಗ, ಆರ್. ವೈ. ಪುತ್ರನ್, ಎನ್. ಆರ್. ಬಂಗೇರ, ವಿ. ಆರ್. ವಾಪ್ಟರೆ ಮತ್ತಿತರ ಸದಸ್ಯರು ಸಹಕರಿಸಿದರು.
ರಾತ್ರಿ ದೇವಸ್ಥಾನದ ಹೊರ ಆವರಣದ
ಮುಂಬೈಯ ಅಭಿನಯ ಮಂಟಪದ ಕಲಾವಿದರು ಅಭಿನಯಿಸಿದರು. . ಕರುಣಾಕರ್ ಕಾಪು ನಿರ್ದೇಶನ ಪಂಜುರ್ಲಿ ನಾಟಕ ಪ್ರದರ್ಶನಗೊಂಡಿತು

B. Dinesh Kulal
Mob.:9821868674



Related posts

ಅ. 5 ರಂದು ಸಾಂತಾಕ್ರೂಸ್ ಪೇಜಾವರ ಮಠದಲ್ಲಿ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ 2024”

Mumbai News Desk

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ಜ. 28  ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ 

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk