32 C
Mumbai
March 7, 2026
Mumbai News Kannada
ಪ್ರಕಟಣೆ

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ





ಕೋಟೆ ಮುಂಬಯಿಯಲ್ಲಿ ಶ್ರೀ ಭುವನೇಶ್ವರಿ ಅಮ್ಮನ ಆರಾಧನೆಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಶ್ರೀ ಭುವನೇಶ್ವರಿ ಸಮಿತಿಯ ಆಶ್ರಯದಲ್ಲಿ 42ನೇ ವಾರ್ಷಿಕ ಮಹಾಪೂಜೆ (ಮೂರ್ತಿ ಪ್ರತಿಷ್ಠಾ ಮಹೋತ್ಸವ ) ಜೂನ್ 15ರಂದು, ರವಿವಾರ ಕೋಟೆ ಮುಂಬೈ ಮಿಂಟ್ ರೋಡ್ ನ ಕಾಂಜಿ ಕೇಷ್ಟಿ ಭಾಟಿಯಾ ವಾಡಿ ಸಭಾಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಅಂದು ನಡೆಯಲಿರುವ ಕಾರ್ಯಕ್ರಮಗಳು :

ಬೆಳಿಗ್ಗೆ ಗಣಪತಿ ಹೋಮ, ಕಲಶ, ಸುವರ್ಣ ವಸ್ತ್ರ ಪೂಜೆ.
ಬೆಳಿಗ್ಗೆ 10.30 ಗಂಟೆಗೆ ಭಜನೆ ( ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ, ಇವರಿಂದ )
ಬಳಿಕ ಮಹಾ ಅಭಿಷೇಕ, ಮಂಗಳಾರತಿ
12.45 ಗಂಟೆಗೆ : ಶ್ರೀ ದೇವಿ ಆವೇಶ
1.30ರಿಂದ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ

ಸಂಜೆ 4ರಿಂದ ಧಾರ್ಮಿಕ ಸಭೆ :

ಅಧ್ಯಕ್ಷತೆ – ಡಾ. ಪ್ರಕಾಶ್ ಮೂಡಬಿದ್ರಿ ( ಅಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )
ಆಶೀರ್ವಚನ : ರಾಜೇಶ್ ಭಟ್ (ಪ್ರಧಾನ ಅರ್ಚಕರು, ದೇವಿ ಪಾತ್ರಿ)
ಮುಖ್ಯ ಅತಿಥಿ – ಎಲ್ ವಿ ಅಮೀನ್ ( ಗೌರವ ಅಧ್ಯಕ್ಷರು,ಬಿಲ್ಲವರ ಎಸೋಸಿಯೇಷನ್ ಮುಂಬೈ )
ಗೌರವ ಅತಿಥಿಗಳು :
ಚಂದ್ರಶೇಖರ್ ಬೆಲ್ಚಡ( ಉದ್ಯಮಿ, ಮಾಜಿ ಅಧ್ಯಕ್ಷರು, ತೀಯಾ ಸಮಾಜ ಮುಂಬೈ )
ನಾರಾಯಣ ಆರ್ ಪೂಜಾರಿ (ಮಾಲಕರು, ಸುಮಂಗಲ ಮೆಶಿನರಿಸ್ )
ಅಡ್ವಕೇಟ್ ರಾಜೀವ ವರ್ಮ( ನ್ಯಾಯಾಧೀಶರು ಹೈಕೋರ್ಟ್ )
ಸನ್ಮಾನ :
ಹರೀಶ್ ಜಿ ಅಮೀನ್ ( ಅಧ್ಯಕ್ಷರು, ಬಿಲ್ಲವರ ಎಸೋಸಿಯೇಷನ್, ಮುಂಬೈ )
ಪುರುಷೋತ್ತಮ ಕೋಟ್ಯಾನ್( ಅಧ್ಯಕ್ಷರು, ವಿದ್ಯಾದಾಯಿನಿ ಸಭಾ ಮುಂಬೈ )
ಪ್ರಭಾಕರ್ ಬೆಳುವಾಯಿ (ಸ್ಥಾಪಕರು, ನಮನ ಫ್ರೆಂಡ್ಸ್ )
ಸಂಜೀವ ಬಂಗೇರ ಮತ್ತು ಸುಮಿತ್ರ ಎಸ್ ಬಂಗೇರ (ಉಪಾಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )

ಸಂಜೆ 6.30ಕ್ಕೆ ಶ್ರೀ ದೇವರಿಗೆ ಮಹಾಪೂಜೆಯೊಂದಿಗೆ ವಾರ್ಷಿಕ ಪೂಜೆ ಸಂಪನ್ನಗೊಳ್ಳಲಿದೆ.

ಶ್ರೀ ಭುವನೇಶ್ವರಿ ಸೇವಾ ಸಮಿತಿಯ 42ನೇ ವಾರ್ಷಿಕ ಮಹಾಪೂಜೆಯಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಭುವನೇಶ್ವರಿ ಮಾತೆಯ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಮುಖ್ಯ ಅರ್ಚಕ ಮತ್ತು ದೇವಿ ಪಾತ್ರ ರಾಜೇಶ್ ಭಟ್, ಗೌರವಾಧ್ಯಕ್ಷ ಆರ್ ಕೆ ಮುಲ್ಕಿ, ಅಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರಿ, ಕಾರ್ಯದರ್ಶಿ ಅಶೋಕ್ ಸೈನಿ, ಕೋಶಾಧಿಕಾರಿ ಭಾಸ್ಕರ್ ಪೂಜಾರಿ, ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.



Related posts

ಡಿ.12 ರಿಂದ 23 ರ ವರಗೆ ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಜ  5 :  ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ,   47ನೇ ವಾರ್ಷಿಕ ಶ್ರೀ ಅಯ್ಯಪ್ಪ  ಮಹಾಪೂಜೆ

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಜು.21, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk