July 22, 2026
Mumbai News Kannada
ಮುಂಬಯಿ

ಬೊರಿವಲಿ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, 52 ನೇ ವಾರ್ಷಿಕ ಮಹಾಸಭೆ







ಮುಂಬಯಿ : ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, ಬೋರಿವಲಿ (ಪೂರ್ವ) ಇದರ 52 ನೇ ವಾರ್ಷಿಕ ಮಹಾ ಸಭೆಯು ಜೂನ್ 14 ರಂದು ಸಂಜೆ ಕಾಂದಿವಲಿ, ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನ ಹೋಟೆಲ್ ಸುರಭಿ ಪಾರ್ಟಿ ಹಾಲ್ ನಲ್ಲಿ, ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಅಧ್ಯಕ್ಷ ರಾದ ಲಕ್ಷ್ಮಣ್ ಸಾಲ್ಯಾನ್ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರ ಆತ್ಮಕ್ಕೆ ಮೌನ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಸಭೆಯು ಪ್ರಾರಂಭವಾಯಿತು
ಪ್ರಧಾನ ಕಾರ್ಯದರ್ಶಿ ಅಭಿಜಿತ್ ಶೆಟ್ಟಿ ಇವರು ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು. ಶ್ರೀ ಜಗದೀಶ್ವರಿ ಸಮಿತಿಯ ನೂತನ ಪಧಾದಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀ ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷರಾಗಿ ದಯಾನಂದ ಪೂಜಾರಿ ವಾರಂಗ ,ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಸಾಲ್ಯಾನ್ ವಾರಂಗ ,ಜೊತೆ ಕಾರ್ಯದರ್ಶಿ ಯಾಗಿ ಕರುಣಾಕರ ಕಾಪು, ಕೋಶಾಧಿಕಾರಿಯಾಗಿ ಆಶಿಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ಉಷಾ ಸಪಳಿಗ, ಇವರನ್ನು ಸಭೆಯು ಒಮ್ಮತದಿಂದ ನೇಮಿಸಿತು. ಬೈಲಾ (ಉಪನಿಯಮ) ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಬಂಗೇರ, ಸದಸ್ಯರುಗಳಾಗಿ ವಿಠ್ಠಲ ಪೂಜಾರಿ, ಸುರೇಶ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಇವರು ನೇಮಕಗೊಂಡರು. ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಸಂಸ್ಥಾಪಕರಾದ ಶ್ರೀ ಶೇಖರ್ ಇಂದು ಸಾಲ್ಯಾನ್ ಅವರು ಜಗದೀಶ್ವರಿ ಮಾತೆಯ ಅನುಗ್ರಹದಿಂದ ನಡೆದುಕೊಂಡು ಬಂದಂತಹ ಈ ಧಾರ್ಮಿಕ ಸಂಸ್ಥೆಗೆ ಎಲ್ಲರೂ ಬೆನ್ನೆಲುಬಾಗಿದ್ದೀರಿ. ಇಲ್ಲಿ ಇನ್ನಷ್ಟು ಒಳ್ಳೆಯ ಸೇವಾ ಕಾರ್ಯಗಳು ನಡೆಯಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಲಕ್ಷ್ಮಣ್ ಸಾಲ್ಯಾನ್ ಅವರು ಸಭೆಯನ್ನುದ್ದೇಶಿಸಿ ” ಜಗದೀಶ್ವರಿ ಮಾತೆಯ ಮುಂದೆ ನಾವೆಲ್ಲರೂ ಸಮಾನರು. ನಮ್ಮಲ್ಲಿ ಯಾವುದೇ ರೀತಿಯ ವೈಮನಸ್ಯ ಇಟ್ಟುಕೊಳ್ಳದೆ ನಾವೆಲ್ಲರೂ ಒಗ್ಗಟ್ಟಾಗಿ ಈ ಸಂಸ್ಥೆಯನ್ನು ಮುನ್ನಡೆಸಬೇಕು”.ಎಂದು ನುಡಿದರು.
ಕರುಣಾಕರ ಕಾಪು ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು.



Related posts

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್  – ದಹಿಸರ್ ಸ್ಥಳೀಯ ಮಹಿಳಾ ವಿಭಾಗ. ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮ.

Mumbai News Desk

ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ, ಶತಮಾನೋತ್ಸವಾಚರಣೆಗೆ ಪಾದಯಾತ್ರೆಯ ಮೂಲಕ ಚಾಲನೆ. 

Mumbai News Desk

ಡೊಂಬಿವಲಿಯಲ್ಲಿ ‘ಚತುರ್ಜನ್ಮಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್-ಗುರುಪೂರ್ಣಿಮೆ ಆಚರಣೆ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ

Mumbai News Desk