September 6, 2026
Mumbai News Kannada
ಮುಂಬಯಿ

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್-ಗುರುಪೂರ್ಣಿಮೆ ಆಚರಣೆ.





ವರದಿ- ಉಮೇಶ್ ಕೆ.ಅಂಚನ್

ಮುಂಬಯಿ,ಜು.11: ಶ್ರೀ ನಿತ್ಯಾನಂದ ಸ್ವಾಮಿ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರು ಪೂರ್ಣಿಮೆಯ ಉತ್ಸವವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಜು.10ರಂದು
ಮೀರಾ ರೋಡ್ ಪೂರ್ವದ ಜಹಾಂಗೀರ್ ಕಾಂಪ್ಲೆಕ್ಸ್ ರಸ್ತೆಯ ವಿಜಯಾ ಪಾರ್ಕ್ ಸಮೀಪದ ಸ್ವಸ್ತಿಕ್ ಅಂಬರ್ ಪ್ಲಾಝಾ ಸಭಾಗ್ರಹದಲ್ಲಿ ವಿಜ್ರಂಭಣೆಯಿಂದ ನಡೆಯಿತು.


ಮೀರಾ ರೋಡ್ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ಅರ್ಚಕ ಲಕ್ಷ್ಮಣ್ ಶೆಟ್ಟಿಯವರ ಪೌರೋಹಿತ್ಯದಲ್ಲಿ ಗುರು ಪೂಜೆ, ಮಹಾಮಂಗಳಾರತಿ ನಡೆಯಿತು. ನಾರಾಯಣ ಶೆಟ್ಟಿ ಸಹಕರಿಸಿದರು. ಗುರು ಪೂರ್ಣಿಮೆಯ ಮಹತ್ವ ಹಾಗೂ ಗುರುಗಳ ಬಗ್ಗೆ ಜಯಪ್ರಕಾಶ್ ಅಮೀನ್ ಮಾತನಾಡಿದರು.
ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಅಲಂಕೃತ ಗುರುಸ್ವಾಮಿಯವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ ಗಂಟೆ 10ರಿಂದ ಮಧ್ಯಾಹ್ನದ ತನಕ ಪರಿಸರದ ಆಮಂತ್ರಿಸಿ ಭಜನಾ ಮಂಡಳಿಗಳಾದ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮೀರಾ ರೋಡ್, ದುರ್ಗಾ ಭಜನಾ ಮಂಡಳಿ ಸಿಲ್ವರ್ ಪಾರ್ಕ್, ಅಯ್ಯಪ್ಪ ಆರಾಧನಾ ಭಜನಾ ಮಂಡಳಿ ಭಾಯಂದರ್, ಕರ್ನಾಟಕ ಮಹಾಮಂಡಲ ಭಜನಾ ಮಂಡಳಿ ಮೀರಾ ಭಾಯಂದರ್, ತುಳುನಾಡ ಸೇವಾ ಸಮಾಜ ಭಜನಾ ಮಂಡಳಿ ಮೀರಾಭಾಯಂದರ್
ಮೀರಾ ಗಾಂವ್ ಮಹಾಲಿಂಗೇಶ್ವರ ಭಜನಾ ಮಂಡಳಿ, ಬಂಟ್ಸ್ ಫೋರಮ್ ಭಜನಾ ಮಂಡಳಿ ಮೀರಾಭಾಯಂದರ್,ಕಟೀಲೇಶ್ವರಿ ಭಜನಾ ಮಂಡಳಿ ಭಾಯಂದರ್ ,ಹನುಮಾನ್ ಭಜನಾ ಮಂಡಳಿ ಭಾಯಂದರ್ , ಮೊಗವೀರ ಭಜನಾ ಮಂಡಳಿ ಮೀರಾ ಭಾಯಂದರ್ ಹಾಗೂ ಬಂಟರ ಸಂಘ ಮೀರಾ ಭಾಯಂದರ್ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಭಜನಾ ಗುರು ಶ್ರೀಧರ್ ಶೆಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ಶ್ರೇಯಸ್ ಶೆಟ್ಟಿ ತಬುಲಾ ವಾದನದಲ್ಲಿ ಸಹಕರಿಸಿದ್ದರು.


ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಸಂಚಾಲಕ ಆನಂದ ಶೆಟ್ಟಿ ಕುಕ್ಕುಂದೂರು, ಉಪಾಧ್ಯಕ್ಷರುಗಳಾದ ವಸಂತಿ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಗೌ.ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಮಾವಾಸ್ಯೆಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ, ಜೊತೆ ಕೋಶಾಧಿಕಾರಿ ಮಲ್ಲಿಕಾ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಬಿ.ಶೆಟ್ಟಿ, ಕಾರ್ಯದರ್ಶಿ ಗೀತಾ ಸಿ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು,ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಲತಾ ಪುತ್ರನ್ , ಮುಖ್ಯ ಸಲಹೆಗಾರರಾದ ಗುಣಪಾಲ್ ಉಡುಪಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
ವಿವಿಧ ಸಂಘಸಂಸ್ಥೆಗಳ, ಸಮುದಾಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳಾದ ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಜಯಪ್ರಕಾಶ್ ಆರ್ ಭಂಡಾರಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಸಂತೋಷ್ ರೈ ಬೆಳ್ಳಿಪ್ಪಾಡಿ,ಉದಯ ಎಮ್. ಶೆಟ್ಟಿ ಮಲಾರ್ ಬೀಡು,ದಿವಾಕರ್ ಶೆಟ್ಟಿ ಪೊಸ್ರಾಲ್, ಹರ್ಷ ಕುಮಾರ್ ಡಿ.ಶೆಟ್ಟಿ ಪಾಂಗಾಳ, ಮಧುಕರ್ ಕೆ .ಶೆಟ್ಟಿ, ಅತ್ತೂರು ಭಾಸ್ಕರ್ ಎಮ್.ಶೆಟ್ಟಿ,ಪ್ರಸಾದ್ ಶೆಟ್ಟಿ ನೀರೆ ಬೈಲೂರು,ಜಿ.ಕೆ.ಕೆಂಚನಕೆರೆ, ಚಂದ್ರಶೇಖರ ಎಸ್.ಶೆಟ್ಟಿ, ಮನ್ಮಥ ಕಡಂಬ, ಡಾ.ರವಿರಾಜ್ ಸುವರ್ಣ, ಸಂಪತ್ ಶೆಟ್ಟಿ ಪಂಜದಗುತ್ತು, ಸತೀಶ್ ಶೆಟ್ಟಿ ಮುಂಡ್ಕೂರು, ಕಿಶೋರ್ ಶೆಟ್ಟಿ ಕುತ್ಯಾರು, ಹರೀಶ್ ರೈ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದ್ದರು.



Related posts

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತ್ರಿಷಾ ಯೋಗೇಶ್ ಕರ್ಕೇರ ಗೆ ಶೇ. 93 ಅಂಕ.

Mumbai News Desk

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk