
ಮುಂಬಯಿ ಜೂ 16 .ವೈಟ್ ಲಿಫ್ಟರ್ ನಲ್ಲಿ ದೇಶ ವಿದೇಶಗಳಲ್ಲಿ ವಿವಿದೆಡೆ ಮಿಂಚುತ್ತಿರುವ, ಖ್ಯಾತ ವೈಟ್ ಲಿಫ್ಟರ್, ಏಷ್ಯನ್ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಕಮಿಟಿ ಯ ಸದಸ್ಯ ಮುಂಬಯಿಯ ಉದಯ ಎಸ್. ಶೆಟ್ಟಿ ಯವರು ಭಾರತದಿಂದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಏಷ್ಯನ್ ಮಾಸ್ಟರ್ಸ್ ವೇಟ್ಲಿಫ್ಟಿಂಗ್ ಚಾಂಪಿಯನ್ ಶಿಪ್ಗಾಗಿ ಕತಾರ್ ದೋಹಾಕ್ಕೆ ಆಯ್ಕೆಯಾಗಿದ್ದು ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿ ಉದಯ ಎಸ್. ಶೆಟ್ಟಿ ನೇತೃತ್ವದ ತಂಡವು 7 ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಪಡೆದು ಜಯಬೇರಿ ಗಳಿಸಿದೆ.
ಜೂ. 6 ರಿಂದ 8 ರ ತನಕ ಸೂರತ್ನಲ್ಲಿ ರಾಷ್ಟ್ರೀಯ ವೈಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ನಡೆದಿದ್ದು
ದೇಶಾದ್ಯಂತ ಸುಮಾರು 20 ರಾಜ್ಯದ 150 ಸ್ಪರ್ದಾಳುಗಳು ಭಾಗವಹಿಸಿದ್ದರು.
ಫೆಡರೇಶನ್ ಕಾರ್ಯದರ್ಶಿ ಉದಯ್ ಶೆಟ್ಟಿ ಮಹಾರಾಷ್ಟ್ರ ತಂಡ ಚಾಂಪಿಯನ್ಶಿಪ್ ಗೆದ್ದರು.
ಮಹಾರಾಷ್ಟ್ರದ ಪ್ರರಿಕ್ ಅತ್ಯುತ್ತಮ ವೇಟ್ಲಿಫ್ಟರ್ ಪ್ರಶಸ್ತಿ ಗೆದ್ದರು. ಮುಂಬಯಿಯ ಅಂಜಲಿ ಕುಡ್ವಾ ಅತ್ಯುತ್ತಮ ಮಹಿಳಾ ವೇಟ್ಲಿಫ್ಟರ್ ಆಗಿದ್ದಾರೆ.
ಈ ಚಾಂಪಿಯನ್ಶಿಪ್ ಯುಎಸ್ಎಯ ವೇಗಾಸ್ ಲ್ಲಿ ನಡೆಯುವ ವಿಶ್ವ ಚಾಂಪಿಯನ್ಶಿಪ್ಗೆ ಆಯ್ಕೆ ಯಾಗಿದೆ. ಭಾರತದ ಉದಯ್ ಶೆಟ್ಟಿ ಭಾರತ ಒಕ್ಕೂಟದ ಕಾರ್ಯದರ್ಶಿಯಾಗಿ ಮತ್ತು ತಂಡದ ಉಸ್ತುವಾರಿಯಾಗಿ ದೇಶವನ್ನು ಪ್ರತಿನಿಧಿಸಲಿದ್ದಾರೆ.




