ಮಹಾನಗರದ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಮಲಾಡ್ ಪೂರ್ವದ ಕುರಾರ ವಿಲೇಜಿನ ಲಕ್ಷಣ ನಗರದ ಶ್ರೀ ಮಹತೋಭಾರ ಶ್ರೀ ಶನಿಶ್ವರ ದೇವಸ್ಥಾನದ ಆಡಳಿತ ಸಂಸ್ಥೆ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ ಸಾಮಾಜಿಕ,ಸಾಂಸ್ಕ್ರತಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಗರದ ಪ್ರತಿಷ್ಠಿತ ಸಂಸ್ಥೆಯಾಗಿದೆ.
ಪ್ರತೀ ವರುಷ ಪರಿಸರದ ಸುಮಾರು ೮೦೦-೧೦೦೦ ಸಾವಿರ ವಿದ್ಯಾರ್ಥಿಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್ ಮತ್ತು ಶಾಲಾ ಪರಿಕರ ನೀಡುತ್ತಾ ಧಾರ್ಮಿಕ ಹಾಗು ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡುತ್ತಾ ಬರುತ್ತಿದೆ. ಶನಿ ಮಹಾತ್ಮ ಪೂಜಾ ಸಮಿತಿಯ ಉಪ ಸಮಿತಿಗಳಲ್ಲೊಂದಾದ ಶ್ರೀ ಶನಿಮಹಾತ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪರಿಸರದ ಸುಮಾರು ಒಂದು ಸಾವಿರಕ್ಕೂ ಮಿಗಿಲಾದ ಶಾಲಾ ವಿಧ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ಆದಿತ್ಯವಾರ 22-6-2025 ರಂದು ಮುಂಜಾನೆ 9 ಗಂಟೆಯಿಂದ ಉಚಿತವಾಗಿ ವಿತರಿಸಲಾಗುವುದು.
ಅಂದಿನ ಕಾರ್ಯಕ್ರಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಇನ್ನಂಜೆಯವರ ಉಪಸ್ಥಿತಿಯಲ್ಲಿ ನೆರವೇರಲಿರುವುದು. ಸಭೆಗೆ ಮುಖ್ಯ ಅತಿಥಿಯಾಗಿ ಮುಂಬಯಿ ಪ್ರೇಂಡ್ಸ ಚಾರಿಟೇಬಲ್ ಸಮಿತಿಯ ಅಧ್ಯಕ್ಷ, ಹೋಟೆಲ್ ಹಾಗು ಉದ್ಯಮಿ ಸತೀಶ್ ಶೆಟ್ಟಿ ಅಜೆಕಾರು,ಪೂಜಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಪಿ ಸಾಫ಼ಲ್ಯ, ಉದ್ಯಮಿ ಉದಯ ಮೋಗವೀರ, ಉದ್ಯಮಿ ನರೇಶ್ ಸಮಾಜ ಸೇವಕ ಭಾವೇಶ್ ಷಹ ಮೊದಲಾದವರು ಭಾಗವಹಿಸಲಿರುವರು.ಅಂದಿನ ಈ ಕಾರ್ಯಕ್ರಮದ ಲಾಭವನ್ನು ಪರಿಸರದ ಎಲ್ಲಾ ವಿದ್ಯಾರ್ಥಿಗಳು ( ೩ – ರಿಂದ ೬ ನೇ ತರಗತಿ ಪಾಸಾದವರು) ಪಡೆಯಬಹುದೆಂದು ಚಾರಿಟೇಬಲ್ ಟ್ರಸ್ಟ್, ಕಾರ್ಯದರ್ಶಿ ಶ್ರೀ ಮಹೇಶ್ ಸಾಲಿಯಾನ್ ಮತ್ತು ಎಲ್ಲಾ ಕಾರ್ಯಕಾರಿ ಸದಸ್ಯರು ಶನಿ ಮಹಾತ್ಮ ಪೂಜಾ ಸಮಿತಿ, ಮತ್ತು ಮಹಿಳಾ ವಿಭಾಗದವರು ವಿನಂತಿಸಿರುವರು.
B. Dinesh Kulal
Mob.: 9821868674




