July 23, 2026
Mumbai News Kannada
ಸುದ್ದಿ

ಸಿ.ಎಮ್.ಎ. ಪರೀಕ್ಷೆಯಲ್ಲಿ ಸೃಷ್ಟಿ ಹಳೆಯಂಗಡಿಗೆ ದೇಶದಲ್ಲೇ 21 ನೇ ಶ್ರೇಣಿ ರಾಷ್ಟ್ರಪತಿಯಿಂದ ಪ್ರಮಾಣ ಪತ್ರ ಸ್ವೀಕಾರ







ಮುಂಬಯಿ : ಕ್ರೀಡೆಯೊಂದಿಗೆ ಶೈಕ್ಷಣಿಕ ಸಾಧನೆ ಗೈಯ್ಯುತ್ತಿರುವ ಸೃಷ್ಟಿ ಹಳೆಯಂಗಡಿ ಕೋಸ್ಟ್ ಆಂಡ್ ಮೆನೇಜ್ಮೆಂಟ್ ಅಕೌಂಟ್ ಸಿ.ಎಮ್.ಎ. ನಲ್ಲಿ ದೇಶದಲ್ಲೇ 21ನೇ ರಾಂಕ್ ಹಾಗೂ ಮುಂಬೈಯಲ್ಲಿ ಎರಡನೇ ರಾಂಕ್ ಪಡೆದು ಉತ್ತೀರ್ಣಳಾಗಿ ಸಾಧನೆಯನ್ನು ಮಾಡಿರುವಳು. ಜೂ. 23 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ಜರಗಿದ 12ನೇ ರಾಷ್ಟ್ರೀಯ ವಿದ್ಯಾರ್ಥಿ ಘಟಿಕೋತ್ಸವ -2025 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.

ಈಗಾಗಲೇ ಟೇಬಲ್ ಟೆನ್ನಿಸ್ ನಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ಈಕೆ ಕ್ರೀಡೆಯೊಂದಿಗೆ ಶೈಕ್ಷಣೆಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾಳೆ. ತನ್ನ ಏಳನೆಯ ಹರೆಯದಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಪ್ರತಿಭೆಯನ್ನು ಸಾಧಿಸಿದ ಸೃಷ್ಟಿ ಹಳೆಯಂಗಡಿ ಅಂದಿನಿಂದ ಈ ತನಕ ಟೇಬಲ್ ಟೆನ್ನಿಸ್ ನಲ್ಲಿ ಒಟ್ಟು 194 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಳು ಮಾತ್ರವಲ್ಲದೆ, ಈ ಕ್ರೀಡೆಯಲ್ಲಿ ಕಾಲೇಜು ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಶಿಫ್ ಗಳಿಸಿದ್ದಾಳೆ.

ಈಕೆ ನಗರದ ರಾಷ್ಟ್ರೀಯ ಬ್ಯಾಕೊಂದರ ನಿವೃತ್ತ ಉನ್ನತ ಅಧಿಕಾರಿ, ದಹಿಸರಿನ ಸುರೇಂದ್ರನಾಥ ಹಳೆಯಂಗಡಿ ಮತ್ತು ಹೇಮಾ ಹಳೆಯಂಗಡಿ ಇವರ ಸುಪುತ್ರಿ.



Related posts

ಧರ್ಮಪಾಲ್ ದೇವಾಡಿಗ ಮತ್ತು ಚಂದ್ರಶೇಖರ್ ಬೆಳ್ಚಡ ಇವರಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ

Mumbai News Desk

ತಬಲ ಮಾಂತ್ರಿಕ ಜಾಕೀರ್ ಹುಸೇನ್ ನಿಧನ

Mumbai News Desk

2023-24 ನೇ ಸಾಲಿನ ಎಚ್ ಎಸ್ ಸಿ ಪರೀಕ್ಷೆ ಯಲ್ಲಿ ನಿಶಾ ಸುಂದರ ಪೂಜಾರಿ 82.16%

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk

ಬಗ್ವಾಡಿ, ಬಚ್ಚು ಸಿ ಕುಂದರ್ ನಿಧನ

Mumbai News Desk

ಉಡುಪಿ: ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk