32 C
Mumbai
March 7, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್





ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ 2025-28ರ ಅವಧಿಗೆ ನಡೆದ ಆಡಳಿತ ಮಂಡಳಯ ಚುನಾವಣೆಯಲ್ಲಿ ವಿಶನ್-2030 ಪ್ಯಾನೆಲ್ ನ 24 ಅಭ್ಯರ್ಥಿಗಳು ಜಯಗಳಿಸಿ, ಮುಂದಿನ ಅವಧಿಗೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲಿರುವರು.
ಮಂಡಳಿಯ ನೂತನ ಆಡಳಿ ಮಂಡಳಿಯ ಸದಸ್ಯರ ಆಯ್ಕೆಗಾಗಿ ಜೂನ್ 29ರಂದು, ಅಂಧೇರಿ ಪಶ್ಚಿಮ ಮೊಗವೀರ ಭವನದಲ್ಲಿ ಚುನಾವಣೆ ನಡೆದಿದ್ದು, ಒಟ್ಟು 3055(ಮೂರು ಸಾವಿರದ ಐವತ್ತ ಐದು)ಸದಸ್ಯರು ಮತದಾನ ಮಾಡಿದ್ದರು. ಮತದಾನದ ಬಳಿಕ ಸಂಜೆ 6.30ಕ್ಕೆ ಮತ ಏಣಿಕೆ ಆರಂಭಗೊಂಡು, ಜೂನ್ 30ರ ಬೆಳಿಗ್ಗೆ 6 30 ಗಂಟೆಗೆ ಕೊನೆಗೊಂಡು, ವಿಶನ್-2030 ಬಣ ಜಯಭೇರಿ ಬಾರಿಸಿತು.
ಈ ಬಾರಿಯ ಚುನಾವಣೆಯಲ್ಲಿ ದಿವಂಗತ ಸದಾನಂದ ಕೋಟ್ಯಾನ್ ಅವರ ಗೌರವ ಸ್ಮರಣೆಯೊಂದಿಗೆ, ಮೊಗವೀರ ಸಮಾಜದ ಹೆಮ್ಮೆಯ ನಾಡೋಜ ಜಿ ಶಂಕರ್, ಸಮಾಜದ ಗಣ್ಯರುಗಳಾದ ವೇದ ಪ್ರಕಾಶ್ ಶ್ರೀಯಾನ್, ಸುರೇಶ್ ಕಾಂಚನ್, ಗೋಪಾಲ ಪುತ್ರನ್ ಇವರ ಸಂಪೂರ್ಣ ಬೆಂಬಲದ ‘ವಿಶನ್-2030″ ಪ್ಯಾನೆಲ್ ಮೀನಿನ ಚಿಹ್ನೆಯೊಂದಿಗೆ, ಹಾಗೂ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿರುವ ಯು ಅರುಣ್ ಕುಮಾರ್ ಅವರ ” ನಮ್ಮ ಮೊಗವೀರ ಮಂಡಳಿ” ಬಣ ಹಣತೆ ಚಿಹ್ನೆಯೊಂದಿಗೆ, ತಲಾ 25 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಸಮಾಜ ಬಾಂಧವರಲ್ಲಿ ಕುತೂಹಲ ಮೂಡಿಸಿತ್ತು.
‘ವಿಶನ್-2030’ ಬಣದಲ್ಲಿ ವರದರಾಜ್ ಶ್ರೀಯಾನ್ ಒಬ್ಬರೇ ಚುನಾವಣೆಯಲ್ಲಿ ಪರಭವಗೊಂಡಿದ್ದು, ‘ನಮ್ಮ ಮೊಗವೀರ ಮಂಡಳಿ’ ಬಣದ ಎಚ್ ಅರುಣ್ ಕುಮಾರ್ 1560 ಮತ ಗಳಿಸಿ ಜಯ ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.

ವಿಶನ್-2030 ಬಣದ ಜಯಗಳಿಸಿದ ಅಭ್ಯರ್ಥಿಗಳು ಮತ್ತು ಅವರು ಗಳಿಸಿದ ಮತಗಳು

  1. ದಯಾವತಿ ಎಂ ಸುವರ್ಣ – 1753
  2. ಪ್ರೀತಿ ಎಚ್ ಶ್ರೀಯಾನ್ – 1687
  3. ದಿಲೀಪ್ ಕುಮಾರ್ ಮೂಲ್ಕಿ – 1666
  4. ಗಣೇಶ ಕೆ ಕಾಂಚನ್ – 1653
  5. ಹರೀಶ್ ಡಿ ಸುವರ್ಣ – 1645
  6. ದೇವರಾಜ್ ಕುಂದರ್ – 1644
  7. ದಾಮೋದರ ಬಿ ಪುತ್ರನ್ – 1635
  8. ಧರ್ಮೇಶ್ ಜಿ ಪುತ್ರನ್ – 1623
  9. ಕುಮಾರ್ ಮೆಂಡನ್ – 1618
  10. ಬಿ ಕೆ ಪ್ರಕಾಶ್ 7 1613
  11. ಹೇಮಲತಾ ಶಶಿಂದ್ರ – 1609
  12. ಕಿರಣ್ ಮೆಂಡನ್ – 1605
  13. ಪ್ರಜ್ವಲ್ ಸಾಲ್ಯಾನ್ – 1602
  14. ಚಂದ್ರಕಾಂತ್ ಸಾಲಿಯಾನ್ – 1600
  15. ಪ್ರಮೋದ್ ಕುಮಾರ್ – 1600
  16. ಚಂದ್ರಶೇಖರ್ ಕರ್ಕೇರ – 1599
  17. ಪ್ರಶಾಂತ್ ಎ ತಿಂಗಳಾಯ – 1599
  18. ಪುರುಷೋತ್ತಮ್ ಎಲ್ ಕರ್ಕೇರ – 1586
  19. ಮನ್ಮೋಹನ ಯ ಕರ್ಕೇರ – 1584
  20. ಮಹೇಂದ್ರ ಜಿ ಕುಂದರ್- 1583
  21. ರವಿರಾಜ್ ಎಚ್ ಕುಂದರ್ 1569
  22. ರಾಜೇಶ್ ಎಸ್ ಪುತ್ರನ್ – 1542
  23. ವಜ್ರಕಾಂತ್ ಕುಂದರ್ – 1530
  24. ಸಂತೋಷ್ ಬಿ ಕೋಟ್ಯಾನ್ – 1510.


Related posts

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಮುಂಬೈ ಒತ್ತೆಯಾಳು ಬಿಕ್ಕಟ್ಟಿನ ಹಿಂದಿನ ವ್ಯಕ್ತಿ ರೋಹಿತ್ ಆರ್ಯ ಯಾರು? ಆತನ ಹಿನ್ನೆಲೆ ಏನು?

Mumbai News Desk

ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ವೀಕ್ಷಿಸಿದ ಶಾಸಕ ಪ್ರತಾಪ್ ಸರ್ನಾಯಕ್

Mumbai News Desk

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk

ಕುರುಬರ ಸಂಘ ಮಹಾರಾಷ್ಟ್ರ ವಾರ್ಷಿಕ ಮಹಾಸಭೆ ಹಾಗೂ ಹಳದಿ ಕುಂಕುಮ ಅಚರಣೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ

Mumbai News Desk