ಗೋಕುಲ ಶ್ರೀ ಕೃಷ್ಣ ಮಂದಿರ ತುಳು ಕನ್ನಡಿಗರ ಗೌರವ ನೆಚ್ಚಿಸಿದೆ: ಡಾ. ಜಿ ಶಂಕರ್.
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜೂ 30.ಸಯನ್ ಬಿ ಎಸ್ ಕೆ ಬಿ ಅಸೋಸಿಯೇಶನ್ ಗೋಕುಲ ದೇವಸ್ಥಾನಕ್ಕೆ ಮೊಗವೀರ ಸಮಾಜದ ಕುಲರತ್ನ. ಉಡುಪಿ ಜಿ ಶಂಕರ್ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅವರು
ಭೇಟಿ ನೀಡಿದಾಗ ದೇವಸ್ಥಾನದ ಅಧ್ಯಕ್ಷರಾದ ಡಾ. ಸುರೇಶ್ ರಾವ್ ಅವರು ಕ್ಷೇತ್ರದ ವಿಶೇಷ ಪ್ರಸಾದವನ್ನು ನೀಡಿ ಗೌರವಿಸಿ ದೇವಸ್ಥಾನದ ಸೇವಾಕಾರಿಗಳು ಮತ್ತು ಬಿ ಎಸ್ ಕೆ ಬಿ ಅಸೋಸಿಯೇಷನ್ 100 ವರ್ಷದ ಸಂಭ್ರಮದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಕಲಾಕೃತಿಗಳು ಕೆತ್ತನೆಯ ಕೆಲಸಗಳು ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದ ಡಾ. ಜಿ ಶಂಕರ್ ಅವರು ಮುಂಬೈಯಲ್ಲಿ ವಾಸ್ತವಿರುವ ತುಳು ಕನ್ನಡಿಗರಿಗೆ ಗೋಕುಲ ಸಂಕಿರಣ ಗೌರವವನ್ನು ಹೆಚ್ಚಿಸಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಬಿ ಎಸ್ ಕೆ ಬಿ ಅಸೋಸಿಯೇಷನ್ ಸೇವಾ ಕಾರ್ಯಗಳಲ್ಲಿ ನಮ್ಮ ಸಹಕಾರವಿದೆ ಎಂದು ತಿಳಿಸಿದರು.
. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ದಿವ್ಯಾ ಶಿಪ್ಪಿನ್ಗ್ ನ ಆಡಳಿತ ನಿರ್ದೇಶಕ ವೇದ್ ಪ್ರಕಾಶ್ ಶ್ರೀಯಾನ್, ವಿನಯ್ ಕರ್ಕೇರ, ದಿನೇಶ್ ಎರ್ಮಾಳ್, ದೇವಸ್ಥಾನದ ಕಾರ್ಯದರ್ಶಿ ಅನಂತ್ ಫೋತಿ, ಹರಿದಾಸ್ ಭಟ್ ಉಪಸ್ಥಿತರಿದ್ದರು.




