
ಉಡುಪಿಯ ಹೃದಯ ಭಾಗ, ಕೆ. ಎಂ. ರೋಡ್ ಬಳಿಯ, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 10ರಂದು ಗುರು ಭಕ್ತರ ಕೂಡುವಿಕೆಯಿಂದ ಭಕ್ತಿ, ಸಡಗರದಿಂದ ನಡೆಯಿತು. ಬೆಳ್ಳಿಗೆ 5 ಕಾಕಡ ಆರತಿ,ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನೆರವೇರಿತು.



ಬಳಿಕ ನಡೆದ ಭಜನಾ ಮಹೋತ್ಸವಕ್ಕೆ ಹರ್ಷದ ಪ್ರಕಾಶ್ ರಿಟೇಲ್ ಸಂಸ್ಥೆಯ ಆಡಳಿತ ನಿರ್ದೇಶಕರ ಸೂರ್ಯಪ್ರಕಾಶ್ ದೀಪ ಬೆಳಗಿ ಚಾಲನೆ ನೀಡಿದರು. ಹರ್ಷ ಬಳಗದವರಿಂದ ಆರಂಭವಾದ ಭಜನೆ ರಾತ್ರಿ ತನಕ ನಡೆಯಿತು.
ಮಧ್ಯಾಹ್ನ ಮಹಾಪೂಜೆಯಾದ ಬಳಿಕ
ಬಾಲಾಭೋಜನ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರುಗಿತು.
ತಡ ಸಂಜೆ ಪಲ್ಲಕ್ಕಿ ಉತ್ಸವ, ರಾತ್ರಿ ಗಂಟೆ 8ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು.
ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಕೆ ದಿವಾಕರ ಶೆಟ್ಟಿ ತೋಟದಮನೆ, ತೋನ್ಸೆ ನವೀನ್ ಶೆಟ್ಟಿ, ಈಶ್ವರ್ ಚಿತ್ಪಾಡಿ, ಮೋಹನ್ ಚಂದ್ರ ನಂಬಿಯಾರ್, ತಾರಾನಾಥ್ ಮೇಸ್ತ ಮತ್ತು ಸದಸ್ಯರು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.




