September 6, 2026
Mumbai News Kannada
ಸುದ್ದಿ

ನಿಟ್ಟೆ ವಿಶ್ವವಿದ್ಯಾಲಯದ   ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ  ಆಯ್ಕೆ





ಕಾರ್ಕಳ ಜ 5,   ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ  ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಸುಮಾರು 21000 ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘ- *Wenamitaa* ಇದರ 2023-25 ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿ ಶ್ರೀ ಜೀವನ್ ಕೆ. ಶೆಟ್ಟಿ ಯವರು ದಿನಾಂಕ 30-12-2023 ರಂದು ನಿಟ್ಟೆ ಸಂಸ್ಥೆಯಲ್ಲಿ  ನಡೆದ   ವಾರ್ಷಿಕ  ಮಹಾಸಭೆಯಲ್ಲಿ ಅವಿರೋಧವಾಗಿ  ಆಯ್ಕೆಯಾಗಿರುತ್ತಾರೆ.

     ಜೀವನ್ ಕೆ. ಶೆಟ್ಟಿ  ಇವರು 1996 ರಲ್ಲಿ Bachelor in Civil Engineer(B.E.) ಹಾಗೂ 2015ರಲ್ಲಿ  Master of Construction Technology (M.Tech) ನಲ್ಲಿ ಪದವಿ ಪಡೆದಿರುತ್ತಾರೆ.   1996ರಿಂದ 1998ರವರೆಗೆ NRAM ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಅಸೋಸಿಯೇಷನ್ ಆಫ್ ಸಿವಿಲ್  ಇಂಜಿನಿಯರ್ಸ್ (ACEM) ನ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ರೋಡ್ ಕಾಂಗ್ರೆಸ್(IRC) ನವದೆಹಲಿ ಇದರ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ  ಡಾ. ನಿರಂಜನ್ ಚಿಪ್ಲೋಂಕರ್, ಡೈರೆಕ್ಟರ್ ಗಳಾದ  ಯೋಗೀಶ್ ಹೆಗ್ಡೆ,   ಪ್ರಸನ್ನ ಕೈಲಾಜೆ, ಸಂಯೋಜಕರಾದ ಪ್ರೊ. ಜ್ಞಾನೇಶ್ವರ  ಪೈ ಮತ್ತು ಹಲವಾರು ಹಳೆವಿದ್ಯಾರ್ಥಿಗಳು ದೇಶ ವಿದೇಶಗಳಿಂದ ಹಳೆ ವಿದ್ಯಾರ್ಥಿಗಳುಈ ಸಂದರ್ಭದಲ್ಲಿ ಹಾಜರಿದ್ದರು. ನಿಕಟಪೂರ್ವ ಅಧ್ಯಕ್ಷೆ ಪ್ರೊ. ಪ್ರಭಾ ನಿರಂಜನ್ ಅಧಿಕಾರವನ್ನು ಹಸ್ತಾಂತರಿಸಿದರು.

      ಉಪಾಧ್ಯಕ್ಷರಾಗಿ . ಅವಿನಾಶ್ ಕೃಷ್ಣಕುಮಾರ್, ಕಾರ್ಯದರ್ಶಿಯಾಗಿ  ರಂಜಿತ್ ಭಟ್, ಜೊತೆ ಕಾರ್ಯದರ್ಶಿಯಾಗಿ  ಶರತ್ ಮತ್ತು ಖಜಾಂಚಿಯಾಗಿ ಡಾ. ಹರ್ಷಿತಾ ಜತ್ತಣ್ಣ ಇವರು ಆಯ್ಕೆಯಾಗಿರುತ್ತಾರೆ.

.

.

.

.



Related posts

ಮುಂಬೈ: ಶಾಲಾ ಬಸ್ ಮೇಲೆ ಬೃಹತ್ ಮರ ಕುಸಿತ: ಒಬ್ಬ ವಿದ್ಯಾರ್ಥಿ ದುರ್ಮರಣ, 10 ಮಕ್ಕಳಿಗೆ ಗಾಯ

Mumbai News Desk

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಪ್ರಗತಿಯ ಪಥದಲ್ಲಿ ಭಾರತ್ ಬ್ಯಾಂಕ್:  ಸೂರ್ಯಕಾಂತ್ ಜಯ ಸುವರ್ಣ 

Mumbai News Desk

ಐಫೋನ್ ವ್ಯಾಮೋಹಕ್ಕೆ ಬಲಿಯಾಯ್ತು ಸುಂದರ ಪರಿವಾರ : ಇಂದಿನ ಯುವಜನತೆಗೆ ಕಣ್ಣೀರಿನ ಎಚ್ಚರಿಕೆ

Mumbai News Desk

ಸಾಕ್ಷರತೆ ಆದರೆ ಸಾಲದು, ಜೀವನಕ್ಕೆ ಸ್ಪಂದಿಸುವ ಶಿಕ್ಷಣ ಮುಖ್ಯ: ಬಿ.ಕೆ.ಹರಿಪ್ರಸಾದ್.

Mumbai News Desk

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk