28.4 C
Mumbai
March 7, 2026
Mumbai News Kannada
ಪ್ರಕಟಣೆ

ನ. 19 ರಂದು ಶ್ಲೋಕಾ ಸಂತೋಷ್ ಶೆಟ್ಟಿ  ಪನ್ವೆಲ್ ಯವರಿಂದ ಭರತನಾಟ್ಯ ಆರಂಗೇಟ್ರಂ






  ನವಿ ಮುಂಬಯಿ : ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನ. 19 ರಂದು ಅಪರಾಹ್ನ 3 ಗಂಟೆಗೆ ಸರಿಯಾಗಿ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯಲಿದೆ.  ಈ ತಂಡದಲ್ಲಿ ನ್ಯೂ ಪನ್ವೆಲ್ ನಗರ  ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ಆರಂಗೇಟ್ರಂ ಮಾಡಲಿದ್ದಾರೆ. 

 ಕಾರ್ಯಕ್ರಮಕ್ಕೆ ಪನ್ವೆಲ್ ನ  ಮಾಜಿ ಸಂಸದ ರಾಮ್ ಸೇಟ್  ಠಾಕೂರ್, ಮಾಜಿ ಕಾರ್ಪೊರೇಟರ್  ಪರೇಶ್ ರಾಮ್ ಸೇಟ್  ಠಾಕೂರ್, ಪನ್ವಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ( ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಬಾಗವಹಿಸಲಿದ್ದಾರೆ.

ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಳು. ಅಲ್ಲದೆ ಪ್ರವೀಣ್ ಸಾರ್ ನೃತ್ಯ ಅಕಾಡೆಮಿಯಿಂದ ಹಿಪ್ ಹೋಪ್ ಡಾನ್ಸ್ ಕಲಿತು ಕೆಲವು ಸಿನೇಮಾಗಳಲ್ಲಿ ಸಹಾಯಕಿ ನೃತ್ಯಗಾರ್ತಿಯಾಗಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾಳೆ. ಶ್ರೀ ನೃತ್ಯಕಲಾ ಮಂದಿರದ ಹಲವಾರು ಕಾರ್ಯಕ್ರಮಗಳಲ್ಲಿ ಬಾಗವಹಿಸಿದ್ದಾಳೆ. ಐ ಸಿ ಎಮ್ ಡಿ ಎ ಅಯಗಿರಿ ನಂದಿನಿ ಜಾಗತಿಕ ಮಟ್ಟದ ದಾಖಲೆ ನಿರ್ಮಿಸಿದ ಈಕೆ ಮಿಹಿರ್ ಎಸ್ ಶೆಟ್ಟಿಯ ಸಹೋದರಿ, ಸಾವಿತ್ರಿ ಮತ್ತು ದಿ. ವಿಠಲ್ ರೈ ಹಾಗೂ ಪ್ರೇಮಾ ಮತ್ತು ದಿ. ಗುಡ್ಡಪ್ಪ ಶೆಟ್ಟಿಯವರ ಮೊಮ್ಮಗಳು. ಶ್ರೀ ನೃತ್ಯ ಕಲಾಮಂದಿರದ ಈ ತಂಡದಲ್ಲಿ ಇತರ ಕಲಾವಿದರಾದ ಸಂಸ್ಕೃತಿ ನಿನದ್, ನೇಹ ಚವಾಣ್, ವರ್ಷಿತ ವಿಶ್ವನಾಥನ್  ಭಾಗವಹಿಸಲಿದ್ದಾರೆ.

1989ರಲ್ಲಿ ಪ್ರಾರಂಭಗೊಂಡ ಗುರು ಪದ್ಮಶ್ರೀ ಲಕ್ಷ್ಮೀನಾರಾಯಣನ್ ಇವರ ನೃತ್ಯ ಕಲಾ ಮಂದಿರದ ಕಲಾವಿದರು ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.  ನೃತ್ಯ ಕಲಾಮಂದಿರದ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದು ಇವರ ಸಾಧನೆಯು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಇವರ ತಂಡದಲ್ಲಿ ಮಧುರ ಗಾನ ತಿಲಕ್ಕಂ ಪಿ ಎಚ್ ರಮಣಿ, ಪ್ರಜೇಶ್ ಸಿ ನಾಯರ್, ರಜನಿ ಅಯ್ಯರ್, ಅನಿರುದ್ಧ ಮೆನನ್, ರಂಗನಾಥನ್, ಅನುರಾಧ ದೊಡ್ಕೆ, ಪನ್ವಲ್ ಕರ್ನಾಟಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಲಿದ್ದಾರೆ.



Related posts

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜೂ. 8 ರಂದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಧನ ಸಹಾಯ 

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ನಾಳೆ (ಜ. 26)ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ,ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk