July 23, 2026
Mumbai News Kannada
Uncategorized

ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ,ಎಲ್ಲೂರು: ಜು. 17ರಿಂದ 20ರ ತನಕ ತ್ರ್ಯಾಹಿಕ ಭಜನಾ ಮಂಗಳೋತ್ಸವ







ಎಲ್ಲೂರು ಗ್ರಾಮದ,ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ಈ ವರ್ಷದ ಭಜನಾ ಮಂಗಳೋತ್ಸವ ಇದೇ ಜುಲೈ 17 ರಿಂದ ಜುಲೈ 20ರ ವರೆಗೆ ನೆರವೇರಲಿದೆ.ಅಖಂಡ ಎಪ್ಪತ್ತೆರಡು ಗಂಟೆಗಳ ತ್ರ್ಯಾಹಿಕ ಭಜನಾ ಮಂಗಳೋತ್ಸವವು ಜುಲೈ 17ರ ಗುರುವಾರ ಸೂರ್ಯೋದಯ ಕಾಲದಲ್ಲಿ ಆರಂಭಗೊಂಡು ಜುಲೈ 20ರ ಸೂರ್ಯೋದಯ ಸಮಯದಲ್ಲಿ ಸಂಪನ್ನಗೊಳ್ಳಲಿದೆ.ಮೂರು ದಿನಗಳ ಪರ್ಯಂತ ನಡೆಯುವ ಭಜನೆಯಲ್ಲಿ 53 ಭಜನಾ ತಂಡಗಳು ಪಾಲ್ಗೊಳ್ಳಲಿವೆ.ಈ ಸಂಧರ್ಭದಲ್ಲಿ ಕ್ಷೇತ್ರದಲ್ಲಿ ಸಾರ್ವಜನಿಕ ಶನಿ ಪೂಜೆ, ಆಶ್ಲೇಷ ಬಲಿ, ಲಕ್ಷ ತುಳಸೀ ಅರ್ಚನೆ, ದುರ್ಗಾನಮಸ್ಕಾರ ,ವಸಂತ ಪೂಜೆ ನೆರವೇರಲಿದೆ.ಶ್ರೀ ಮಂಡಳಿಯಲ್ಲಿ ಮೂರು ದಿನಗಳ ನಿರಂತರವಾಗಿ ನಡೆಯುವ ಭಜನೆ, ಅನ್ನಸಂತರ್ಪಣೆ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಕೇಳಿಕೊಂಡಿದೆ.



Related posts

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk

ಮೇ. 15ರಿಂದ ಮುಂಬೈನಲ್ಲಿ ಶೇಕಡಾ 10 ರಷ್ಟು ನೀರು ಕಡಿತ: ಸಾರ್ವಜನಿಕರು ಮಿತಬಳಕೆ ಮಾಡಲು ಬಿಎಂಸಿ ಸೂಚನೆ

Mumbai News Desk

Trump Tried to Protect Qualcomm. Now His Trade War May Be Hurting It

admin

What Is a Genetically Modified Crop? A European Ruling Sows Confusion

admin