
ಎಲ್ಲೂರು ಗ್ರಾಮದ,ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ಈ ವರ್ಷದ ಭಜನಾ ಮಂಗಳೋತ್ಸವ ಇದೇ ಜುಲೈ 17 ರಿಂದ ಜುಲೈ 20ರ ವರೆಗೆ ನೆರವೇರಲಿದೆ.ಅಖಂಡ ಎಪ್ಪತ್ತೆರಡು ಗಂಟೆಗಳ ತ್ರ್ಯಾಹಿಕ ಭಜನಾ ಮಂಗಳೋತ್ಸವವು ಜುಲೈ 17ರ ಗುರುವಾರ ಸೂರ್ಯೋದಯ ಕಾಲದಲ್ಲಿ ಆರಂಭಗೊಂಡು ಜುಲೈ 20ರ ಸೂರ್ಯೋದಯ ಸಮಯದಲ್ಲಿ ಸಂಪನ್ನಗೊಳ್ಳಲಿದೆ.ಮೂರು ದಿನಗಳ ಪರ್ಯಂತ ನಡೆಯುವ ಭಜನೆಯಲ್ಲಿ 53 ಭಜನಾ ತಂಡಗಳು ಪಾಲ್ಗೊಳ್ಳಲಿವೆ.ಈ ಸಂಧರ್ಭದಲ್ಲಿ ಕ್ಷೇತ್ರದಲ್ಲಿ ಸಾರ್ವಜನಿಕ ಶನಿ ಪೂಜೆ, ಆಶ್ಲೇಷ ಬಲಿ, ಲಕ್ಷ ತುಳಸೀ ಅರ್ಚನೆ, ದುರ್ಗಾನಮಸ್ಕಾರ ,ವಸಂತ ಪೂಜೆ ನೆರವೇರಲಿದೆ.ಶ್ರೀ ಮಂಡಳಿಯಲ್ಲಿ ಮೂರು ದಿನಗಳ ನಿರಂತರವಾಗಿ ನಡೆಯುವ ಭಜನೆ, ಅನ್ನಸಂತರ್ಪಣೆ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಕೇಳಿಕೊಂಡಿದೆ.





