July 23, 2026
Mumbai News Kannada
ಸುದ್ದಿ

ತುಳುವ ಸಿರಿ ಕಲಾವಿದೆರ್ ನಂದಳಿಕೆ ನಾಟಕ ತಂಡ – “ಆಯೆ ಮನಿಪುಜೆ” ವರ್ಷದ ನೂತನ ತುಳು ನಾಟಕದ ಶೀರ್ಷಿಕೆ ಬಿಡುಗಡೆ.







ಕಾರ್ಕಳ : ನಾಟಕಗಳು ಬರೀ ಮನೋರಂಜನೆಯನ್ನು ಮಾತ್ರ ನೀಡದೆ ತುಳು ಭಾಷೆಗೆ ದೊಡ್ಡ ಕೊಡುಗೆ ಹಾಗೂ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುವ ಕೆಲಸ ಮಾಡುತ್ತಿದೆ. ಕಲಾವಿದರ ಶ್ರಮದಿಂದ ಇಂದು ಕಲೆಗಳ ಆರಾಧನೆಯಾಗುತ್ತಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸುವ ಕೆಲಸ ಕಾರ್ಯಕಾರ್ಯಗಳು ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಮಧುಸೂದನ್ ಭಟ್ ಹೇಳಿದರು.

ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಭಾನುವಾರ ನಡೆದ ತುಳುವ ಸಿರಿ ಕಲಾವಿದೆರ್ ನಂದಳಿಕೆ ನಾಟಕ ತಂಡದ ಈ ವರ್ಷದ ನೂತನ ನಾಟಕ, ಆಯೆ ಮನಿಪುಜೆ ತುಳು ನಾಟಕದ ಶೀರ್ಷಿಕೆ ಬಿಡುಗಡೆ  ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎನ್ ತುಕಾರಾಮ್ ಶೆಟ್ಟಿ  ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಜೊತೆಗೂಡಿ ಒಂದು ಸುಂದರ ತಂಡವನ್ನು ಕಟ್ಟಿಕೊಂಡು ತುಳು ರಂಗಭೂಮಿಯಲ್ಲಿ ಸೇವೆಯನ್ನು ನೀಡುತ್ತಿರುವ ತುಳುವ ಸಿರಿ ಕಲಾವಿದರ ಶ್ರಮ ಶ್ಲಾಘನೀಯ.  ನಾಟಕದ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕಾರ್ಯವಾಗುತ್ತಿದೆ. ನಂದಳಿಕೆಯಲ್ಲಿ ಹುಟ್ಟು ಪಡೆದ ತಂಡದ ಕೀರ್ತಿ ಪತಾಕೆ ಎಲ್ಲೆಡೆ ಹಬ್ಬಲಿ, ಆಯೆ ಮನಿಪುಜೆ ನಾಟಕ ಇಡೀ ತುಳುನಾಡಿನ ಜನತೆಯ ಮನ ಗೆಲ್ಲಲ್ಲಿ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮಾರ್ಗದರ್ಶಕರು ಹಾಗೂ ನಿವೃತ್ತ ಪ್ರಾಂಶುಪಾಲ ಜಯಂತ್ ರಾವ್ ಪಿಲಾರ್, ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷೆ ಸುನಿತಾ ನೊರೊನ್ಹಾ, ನಿವೃತ್ತ ಶಿಕ್ಷಕಿ ಸರೋಜಿನಿ ಟಿ.ಶೆಟ್ಟಿ, ತುಳುವ ಸಿರಿ ನಾಟಕ ತಂಡದ ಸಾರಥಿ ಹರಿಪ್ರಸಾದ್ ನಂದಳಿಕೆ, ಕಲಾವಿದರಾದ ಪ್ರತೀಕ್ ಸಾಲ್ಯಾನ್, ಅಶೋಕ್ ಪಳ್ಳಿ, ದೀಕ್ಷಿತ್ ದೇವಾಡಿಗ, ಯತೀಶ್ ಪಾಲಡ್ಕ, ರಕ್ಷಿತ್ ಬೇಲಾಡಿ, ಸೂರಾಜ್ ಸಾಲ್ಯಾನ್ ಮುಲ್ಲಡ್ಕ, ಸಂದೀಪ್ ಸಂಕಲಕರಿಯ, ಶ್ರೀನಿವಾಸ್ ಇನ್ನಾ, ಮೋನಿಕಾ ಅಂದ್ರಾದೆ, ಚೈತ್ರಾ ಚೇತನಹಳ್ಳಿ, ಸಂಗೀತಗಾರ ಪವನ್ ಕಡಂದಲೆ ಮತ್ತಿತರರು ಉಪಸ್ಥಿತರಿದ್ದರು. ವೀಣೇಶ್ ಅಮಿನಿ ಸಾಂತೂರು ಕಾರ್ಯಕ್ರಮ ನಿರೂಪಿಸಿದರು.

B. Dinesh Kulal

Mob.: 9821868674



Related posts

ಬೆಳ್ಮಣ್: ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಉದ್ಘಾಟನೆಗೆ ಸಿದ್ಧತೆ ,

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk

ಪಶ್ಚಿಮ ಬಂಗಾಳ ವಿಧಾನಸಭಾ ವಿಸರ್ಜನೆ: ಮಮತಾ ಬ್ಯಾನರ್ಜಿ ರಾಜೀನಾಮೆ ನಿರಾಕರಣೆ ಹಾಗೂ ರಾಜ್ಯಪಾಲರ ಕಠಿಣ ಕ್ರಮ

Mumbai News Desk

ಪೇಜಾವರ ಮಠದಲ್ಲಿ ಶ್ರೀ ಕೃಷ್ಣನವಮಿ ಪ್ರತಿಷ್ಠಾ ವರ್ಧಂತಿ ಉತ್ಸವ ಆಚರಣೆ.

Mumbai News Desk