July 23, 2026
Mumbai News Kannada
ಪ್ರಕಟಣೆ

ಅ. 2 : ಮುಂಬಯಿ ಬಿಲ್ಲವರು ಹಾಗೂ ಜಯಿ ಸಿ ಸುವರ್ಣ ಅಭಿಮಾನಿಗಳು ಇವರ ಸಹಯೋಗದಲ್ಲಿ ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳವತಿಯಿಂದ ‘ಆಟಿದ ಪೊರ್ಲ ಪೊಲಬು’ ಕಾರ್ಯಕ್ರಮ







ಮುಂಬಯಿ ಬಿಲ್ಲವರು ಹಾಗೂ ಜಯಿ ಸಿ ಸುವರ್ಣ ಅಭಿಮಾನಿಗಳು ಇವರ ಸಹಯೋಗದಲ್ಲಿ ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳವತಿಯಿಂದ ಆಗಸ್ಟ್ 2ರ, ಶನಿವಾರ ಸಂಜೆ 5 ಗಂಟೆಗೆ ‘ಆಟಿದ ಪೊರ್ಲ ಪೊಲಬು’ ಕಾರ್ಯಕ್ರಮ ಗೋರೆಗಾಂವ್ ಪೂರ್ವ ಜಯಲೀಲಾ ಬ್ಯಾಂಕ್ವೆಟ್ ಸಭಾಗ್ರಹದಲ್ಲಿ ನಡೆಯಲಿದೆ.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಜಯ ಸಿ ಸುವರ್ಣ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ನಿಶಿತಾ ಎಸ್ ಸುವರ್ಣ ಅಧ್ಯಕ್ಷತೆ ವಹಿಸಲಿರುವರು. ಜ್ಯೋತಿಷಿ, ಸಯನ್ ಕನ್ನಡ ಸಂಘದ ಅಧ್ಯಕ್ಷ ಎಂ. ಜೆ. ಪ್ರವೀಣ್ ಭಟ್ ಆಶೀರ್ವಚನ ನೀಡಲಿರುವರು.
ಸಾಯಿಲಿ ಸುನೀಲ್ ಪ್ರಭು (ಸಮಾಜ ಸೇವಕಿ)
ಕಲ್ಪನಾ ಹರೀಶ್ ಕುಮಾರ್( ಯೋಗ ಶಿಕ್ಷಕಿ)
ಜಯಲಕ್ಷ್ಮಿ ಸಿ ಪೂಜಾರಿ ( ಸಮಾಜ ಸೇವಕಿ
ಪುಷ್ಪಲತಾ ಬಿ ಪಾಲನ್ (ಸಮಾಜ ಸೇವಕಿ)
ಲತಾ ಸಂತೋಷ್ ಶೆಟ್ಟಿ (ಸಮಾಜ ಸೇವಕಿ)
ನೈನಾ ಓಕೆ (ಮನಶಾಸ್ತ್ರಜ್ಞೆ)
ಲತಾ ಎಸ್ ಸುವರ್ಣ (ಸಮಾಜ ಸೇವಕಿ)
ಪೂರ್ಣಿಮಾ ಎಂ ಪೂಜಾರಿ (ಸಮಾಜ ಸೇವಕಿ)
ಅತಿಥಿ ಅಭ್ಯಾಗತರಾಗಿ ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ, ತುಳುನಾಡಿನ ವಿವಿಧ ಪ್ರಕಾರದ ಆಟ, ಹಾಗೂ ಮನೋರಂಜನಾ ಕಾರ್ಯಕ್ರಮ ಜರಗಲಿದೆ.

ಮುಂಬಯಿ ಬಿಲ್ಲವರು ಹಾಗೂ ಜಯ ಸಿ ಸುವರ್ಣ ಅಭಿಮಾನಿಗಳು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.



Related posts

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ಡೊಂಬಿವಿಲಿ ಶ್ರೀ ಜಗದಂಬಾ ಮಂದಿರ: ಅ. 16 ರಂದು ಚಂಡಿಕಾ ಹೋಮ ಹಾಗೂ ಅನ್ನಸಂತರ್ಪಣೆ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

Mumbai News Desk