30 C
Mumbai
April 24, 2026
Mumbai News Kannada
ಮುಂಬಯಿ

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರುಇವರ ಸಹಯೋಗದಲ್ಲಿ” ಆಟಿದ ಪೊರ್ಲ ಪೊಲಬು”





ಅಟಿದ ಕೂಟ ಸಂಭ್ರಮವಾಗದೇ ಹಿಂದೆ ದಿನ ನೆನಪಾಗುವಂತಾಗಲಿ ಡಾ. ಎಮ್ ಜೆ ಪ್ರವೀಣ್ ಭಟ್,

ಮುಂಬಯಿ ಆ45. ಬಿಲ್ಲವ ಸಮಾಜದ ಹಿರಿಯ ಮುಖಂಡ    ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರು
ಇವರ ಸಯೋಗದಲ್ಲಿಜಯ ಸಿ. ಸುವರ್ಣ ಮಹಿಳಾ ಅಭಿಮಾನಿಗಳ
ವತಿಯಿಂದಆಟಿದ ಪೊರ್ಲ ಪೊಲಬು ಕಾರ್ಯಕ್ರಮ ಆ 02 ಆಗಸ್ಟ್ 2025   ಜಯಲೀಲಾ ಬ್ಯಾಂಕ್ವೆಟ್ ಸಭಾಗೃಹ, ಗೋರೆಗಾಂವ್ ಪೂರ್ವ ಇಲ್ಲಿ ನಡೆಯಿತು,

  ಕಾರ್ಯಕ್ರಮವನ್ನುಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸಿದರು,

  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಸಂಘ ಸಯನ್  ಅಧ್ಯಕ್ಷರಾದಡಾ.  ಎಂ ಜೆ. ಪ್ರವೀಣ್  ಭಟ್ ಮಾತನಾಡುತ್ತಾ ಸಮಾಜವನ್ನು ಒಗ್ಗಟ್ಟು ಮಾಡುವುದಕ್ಕೆ ಇಂಥ ಕಾರ್ಯಕ್ರಮಗಳು ಅಗತ್ಯ ಇದು ಸಂಭ್ರಮವಾಗದೆ, ಅಂದಿನ ಕಾಲದ ನೆನಪುಗಳಾಗಬೇಕುವ ಕ್ರಮ ಆಗಬೇಕು, ಮಹಿಳೆಯರು ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸಬೇಕು ಎಂದು ನುಡಿದರು,,

ಅತಿಥಿಯಾದ  ಸಾಹಿತಿ ಲತಾ ಸಂತೋಷ್ ಶೆಟ್ಟಿ ಸಂದರ್ಭ ಉಚಿತವಾಗಿ ಮಾತನಾಡಿ ಶುಭ ಹಾರೈಸಿದರು,

ವೇದಿಕೆಯಲ್ಲಿ   ಧಾಣೆ ಮಹೇಶ್ ಕರ್ಕೇರ ,ನೈನಾ ಓಕೆ (ಮನಃಶಾಸ್ತ್ರಜ್ಞೆ), ಕಲ್ಪನಾ ಹರೀಶ್ ಕುಮಾರ್ ( ಯೋಗ ಶಿಕ್ಷಕಿ) ,ಪುಷ್ಪಲತಾ ಬಿ. ಪಾಲನ್ (ಸಮಾಜ ಸೇವಕಿ) ಲತಾ ಸಂತೋಷ್ ಶೆಟ್ಟಿ -( ಸಮಾಜ ಸೇವಕಿ), ಲತಾ ಎಸ್. ಸುವರ್ಣ – (ಸಮಾಜ ಸೇವಕಿ), ಪೂರ್ಣಿಮಾ ಎಂ. ಪೂಜಾರಿ (- ಸಮಾಜ ಸೇವಕಿ) ಮತ್ತಿತರರು ಉಪಸ್ಥಿತರಿದ್ದರು,

ಈ ಸಂದರ್ಭದಲ್ಲಿ ದೇವಕಿ ಸದಾಶಿವ್ ಕರ್ಕೇರ, ಅರುಣಾ ದಾಮೋದರ್, ಶಾಂತ ಅಚ್ಚಣ್ಣ,ಲೀಲಾ ಗಣೇಶ್,
 ರೂಪಾoಜಲಿ ಧನಂಜಯ್, ಸಬಿತಾ ಜಿ ಪೂಜಾರಿ, ಹೇಮಾ ಕೇಶವ್, ಪುಷ್ಪ ಅಮೀನ್, ಆಶಾ ಸಂಜೀವ್, ಆಶಾಲತಾ ಕೇಶವ್, ವಿಜಯ ನರೇಂದ್ರ ಮೂಲ್ಕಿ, ಸರೋಜಿನಿ ವಾಶಿ, ವನಿತಾ ಅಶೋಕ್, ಸರಸ್ವತಿ ಆಶೋಕ್ , ಉಷಾ ರವಿ ಕೋಟ್ಯಾನ್ ಇವರನ್ನು ಗೌರವಿಸಲಾಯಿತು,

ಕಾರ್ಯಕ್ರಮವನ್ನು ಶಶಿಧರ್ ಬಂಗೇರ ನಿರೂಪಿಸಿ ಹೊಂದಿಸಿದರು,

  ಕಾರ್ಯಕ್ರಮದಲ್ಲಿ   ಮುಂಬಯಿಯ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಿಲ್ಲವ ಕುಟುಂಬಗಳು ಒಮ್ಮನಸ್ಸಿನಿಂದ ಮುಂಬಯಿಯ ಗೊರೆಗಾಂವ್‌ನ ಜಯಲೀಲಾ ಸಭಾಗೃಹದಲ್ಲಿ ಸೇರಿಕೊಂಡಿದ್ದಾರು,
ಕಾರ್ಯಕ್ರಮದಲ್ಲಿ ಮುಖ್ಯವಾಗಿ 350ಕ್ಕೂ ಹೆಚ್ಚು ಸಂಪ್ರದಾಯಿಕ ತಿಂಡಿ ತಿನಿಸುಗಳು, ಮುಂಬಯಿಯ ವಿವಿಧ ಬಿಲ್ಲವ ಮನೆಗಳಿಂದ ಮಹಿಳೆಯರು ತಾವು ತಯಾರಿಸಿದವುಗಳನ್ನು ತಂದು, ಈ ಸಮಾರಂಭಕ್ಕೆ ಶೋಭೆಯನ್ನು ನೀಡಿದರು. ಮಕ್ಕಳ ನೃತ್ಯಗಳು, ಮಹಿಳೆಯರ ಜಾನಪದ ನೃತ್ಯಗಳು, ಹಾಗೂ ವಿಶೇಷವಾಗಿ “ಪೊರ್ಲ ಸಂಸಾರ” ನಾಟಕವು ತುಳುನಾಡಿನ ದಿನಚರಿ, ಜೀವನದ ಸಾಂಸ್ಕೃತಿಕ ತಾತ್ವಿಕತೆಯನ್ನು  ಕಣ್ಣಿಗೆ ಕಟ್ಟುವಂತೆ ಸಾದರ ಪಡಿಸಿತು.,

—-***-

  ಮಹಿಳಾಯರು   ಆರೋಗ್ಯವಂತರಾಗಿದ್ದಾಗ ಮನೆಯನ್ನು ಸಮಾಜವನ್ನು ಸಮರ್ಥರಿಗೆ ಮುನ್ನಡೆಸಬಹುದು:ನಿಶಿತಾ ಸೂರ್ಯಕಾಂತ್ ಸುವರ್ಣ

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಯ ಸಿ. ಸುವರ್ಣ ಅಭಿಮಾನಿಗಳ ಳು ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ಮಾತನಾಡುತ್ತಾ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಒಗ್ಗಟ್ಟಾಗಿದ್ದಾರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಭದ್ರಗೊಳಿಸುವ, ಎಲ್ಲ ಮಹಿಳೆಯರು ಆರೋಗ್ಯದ ಕಡೆ ಗಮನ ನೀಡಬೇಕು, ಆರೋಗ್ಯವಂತರಾಗಿದ್ದಾಗ ಮನೆಯನ್ನು ಸಮಾಜವನ್ನು ಸಮರ್ಥರಿಗೆ ಮುನ್ನಡೆಸಬಹುದು ಎಂದು ನುಡಿದರು

B. Dinesh Kulal

Mob.: 9821868674



Related posts

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ; ಆಷಾಢ ಹಬ್ಬ ಆಚರಣೆ,

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಧಾರ್ಮಿಕ ಸಭೆ

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇದರ ದಶಮಾನೋತ್ಸವ ಕಾರ್ಯಕ್ರಮ.

Mumbai News Desk

ಮುಂಬೈ: ಭಾಯಂದರ್ ಪೂರ್ವದಲ್ಲಿ ಕಟ್ಟಡಕ್ಕೆ ನುಗ್ಗಿದ ದೊಡ್ಡ ಬೆಕ್ಕು(ಚಿರತೆ), 3 ಜನರಿಗೆ ಗಾಯ

Mumbai News Desk

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.

Mumbai News Desk