32 C
Mumbai
March 7, 2026
Mumbai News Kannada
ಸುದ್ದಿ

“ಡ್ರಾಗನ್–ಆನೆ ಒಗ್ಗಟ್ಟಿಗೆ ಕರೆಯೊಡ್ಡಿದ ಷಿ, ಸಹಕಾರಕ್ಕೆ ಬದ್ಧತೆ ತೋರಿದ ಮೋದಿ”





ಟಿಯಾಂಜಿನ್ (ಚೀನಾ), ಆಗಸ್ಟ್ 31:
ಚೀನಾದ ಟಿಯಾಂಜಿನ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO)ಯ 25ನೇ ಶಿಖರ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಮಹತ್ವದ ಮಾತುಕತೆ ನಡೆಯಿತು. ಹಲವು ವರ್ಷಗಳ ಗಡಿಬಿಡಿ ನಂತರ ಎರಡೂ ರಾಷ್ಟ್ರಗಳ ನಾಯಕರ ನೇರ ಸಂವಾದವು ಹೊಸ ಬದಲಾವಣೆಯ ನಿರೀಕ್ಷೆ ಮೂಡಿಸಿದೆ.

ಮಾತುಕತೆಯಲ್ಲಿ ಗಡಿ ಪ್ರದೇಶದ ಶಾಂತಿ ಹಾಗೂ ಸ್ಥಿರತೆ ಮುಖ್ಯ ಚರ್ಚೆಯ ವಿಷಯವಾಗಿತ್ತು. ಪ್ರಧಾನಮಂತ್ರಿ ಮೋದಿ “ಭಾರತ-ಚೀನಾ ಗಡಿ ಪ್ರದೇಶದಲ್ಲಿ ಪರಸ್ಪರ ಗೌರವ, ಶಾಂತಿ ಮತ್ತು ದೈರ್ಯ ಅಗತ್ಯ. ಶಾಂತಿಯುತ ಗಡಿ ವಾತಾವರಣವೇ ನಮ್ಮ ಭವಿಷ್ಯದ ಸಹಕಾರದ ನಾಂದಿ” ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಡಿ ನಿರ್ವಹಣೆಯ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೈಲಾಶ್ ಮನ್‌ಸರೋವರ ಯಾತ್ರೆ ಪುನರ್‌ಪ್ರಾರಂಭ ಹಾಗೂ ಭಾರತ–ಚೀನಾ ನೇರ ವಿಮಾನ ಸೇವೆಗಳ ಪುನರುಜ್ಜೀವನ ಕುರಿತು ಸಹ ಒಪ್ಪಂದ ಕಾದಿದೆ. ಇದರಿಂದ ಸಾಂಸ್ಕೃತಿಕ ಹಾಗೂ ಮಾನವೀಯ ಸಂಪರ್ಕಗಳಿಗೆ ಹೊಸ ಬಾಗಿಲು ತೆರೆಯುವ ನಿರೀಕ್ಷೆಯಿದೆ.

ಅಧ್ಯಕ್ಷ ಷಿ ಜಿನ್‌ಪಿಂಗ್ ತಮ್ಮ ಮಾತಿನಲ್ಲಿ “ಭಾರತ ಮತ್ತು ಚೀನಾ ದೊಡ್ಡ ನಾಗರಿಕತೆಗಳ ಪ್ರತಿನಿಧಿಗಳು. ನಾವು ಸ್ಪರ್ಧಿಗಳು ಅಲ್ಲ, ಸಹಭಾಗಿಗಳು. ಡ್ರಾಗನ್ ಮತ್ತು ಆನೆ ಒಟ್ಟಿಗೆ ಬಂದಾಗ ವಿಶ್ವಕ್ಕೆ ಶಾಂತಿ ಹಾಗೂ ಅಭಿವೃದ್ಧಿಯ ಸಂದೇಶ ತಲುಪುತ್ತದೆ” ಎಂದು ಉಪಮೆ ನೀಡಿದರು.

ಪ್ರಧಾನಿ ಮೋದಿ ಕೂಡ “2.8 ಬಿಲಿಯನ್ ಜನರ ಕಲ್ಯಾಣಕ್ಕಾಗಿ ನಮ್ಮ ಸಹಯೋಗ ಅತ್ಯಗತ್ಯ. ವಿಶ್ವ ಮಾನವತೆಯ ಹಿತಕ್ಕಾಗಿ ಭಾರತ-ಚೀನಾ ಸಂಬಂಧ ಬಲವಾಗಬೇಕು” ಎಂದು ಒತ್ತಿಹೇಳಿದರು.

ಅಂತರರಾಷ್ಟ್ರೀಯ ರಾಜಕೀಯ ಪಠ್ಯದಲ್ಲಿ, ಅಮೆರಿಕದ ವ್ಯಾಪಾರ ನೀತಿ ಹಾಗೂ ಜಾಗತಿಕ ಸವಾಲುಗಳ ನಡುವೆ ಈ ಭೇಟಿ ಬಹುಮುಖ್ಯವಾಗಿದ್ದು, ‘ಗೋಲ್ಬಲ್ ಸೌತ್’ ಹಾಗೂ ಬಹುಧ್ರುವ ವಿಶ್ವದಲ್ಲಿ ಭಾರತ-ಚೀನಾ ನವ ಸಂಬಂಧದ ಪ್ರಾರಂಭ ಎಂದು ವೀಕ್ಷಿಸಲಾಗುತ್ತಿದೆ.

ಈ ಮಾತುಕತೆಗಳಿಂದ ಇಬ್ಬರು ಶಕ್ತಿಶಾಲಿ ರಾಷ್ಟ್ರಗಳ ನಡುವೆ ವಿಶ್ವಾಸ ಹಾಗೂ ಸಹಕಾರದ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.




Related posts

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಕಾವ್ಯ ಡಿ ಕಾಂಚನ್ ಗೆ ಶೇ 92.67 ಅಂಕ.

Mumbai News Desk

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ಮೈತ್ರಿ ಮಲ್ಲಿಗೆ ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧಿಗಳಿದ್ದ ಕಣದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ

Mumbai News Desk

ಅಜಿತ್ ಪವಾರ್ ವಿಮಾನ ಅಪಘಾತ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸೇರಿ ಆರು ಮಂದಿ ಸಾವು

Mumbai News Desk

ಅವಧಿಗೂ ಮೊದಲೇ ಮುಂಬೈಗೆ ಮಾನ್ಸೂನ್ ಪ್ರವೇಶ : 107 ವರ್ಷಗಳ ದಾಖಲೆ ಮುರಿದ ಮಳೆ.

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk