
ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಬ್ಯಾಂಕ್ ನ ಧಾರಾವಿ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರ, ಗ್ರಾಹಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಶಾಖಾ ಮುಖ್ಯಸ್ಥರಾದ ರಾಜೇಶ್ ಜೆ ಬಂಗೇರ ಅವರು ಸ್ವಾಗತಿಸಿ ಬ್ಯಾಂಕಿನ ಬೆಳವಣಿಗೆ ಮತ್ತು ಯಶಸ್ಸಿಗೆ ನಿರಂತರ ಬೆಂಬಲ ಮತ್ತು ಕೊಡುಗೆಗಾಗಿ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಮೌಲ್ಯಯುತ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಿದರು.

ಬ್ಯಾಂಕಿನ ನಿರ್ದೇಶಕರು ನಿರಂಜನ್ ಎಲ್. ಪೂಜಾರಿ, ಸುರೇಶ್ ಬಿ. ಸುವರ್ಣ ಪರಿಸರದ ಉದ್ಯಮಿಗಳೂ, ಗ್ರಾಹಕರು ಆದ ದಿನೇಶ್ ಶೆಟ್ಟಿ, ಅಲಹುಸುಂದರ್ ಎಸ್ ಉಡಿಯರ್, ಸಮಾಜಸೇವೆಕ ಹ್ಯಾರಿ ಆರ್. ಸಿಕ್ವೇರಾ, ರಾಜಾರಾಮ್ ಬಿ. ಪಟೇಲ್, ಪದ್ಮಾಕರ್ ಆರ್. ಆಚಾರಿ, ವಿಠ್ಠಲ್ ಪವಾರ್, ಮಹೇಶ್ ಪೂಜಾರಿ ಕಿದಿಯೂರು, ಆಕಾಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರಿಂಗ್), ಕಿಶೋರ್ ರೆಡ್ಡಿಜ್, ಅಂಕುಶ್ ಹಜಾರೆ, ದೇವೇಂದ್ರ ಸಿಂಗ್ ಉಡಿಯರ್, ಸಮಾಜಸೇವಕ , ಬಿಲ್ಲವರ ಅಸೋಸಿಯೇಷನ್ನ ಮಾಜಿ ಜಂಟಿ ಕಾರ್ಯದರ್ಶಿ,ಅಶೋಕ್ ಸಸಿಹಿತ್ಲು ಹಾಗೂ ಇತರ ಗ್ರಾಹಕರು, ಠೇವಣಿದಾರರು ಪಾಲ್ಗೊಂಡು ಶುಭ ಹಾರೈಸಿದರು.
ಶಾಖಾ ಮುಖ್ಯ ಪ್ರಬಂಧಕರಾದ ರಾಜೇಶ್ ಜೆ ಬಂಗೇರ,ಉಪಪ್ರಬಂಧಕಿ ನಯನಾ ಬಿ ಸೋಮೇಶ್ವರ, ಅಧಿಕಾರಿ ಸೂರಜ್ ಎನ್ ದೇವ್ಕರ್ , ಸಿಬ್ಬಂದಿಗಳಾದ ಚಂದ್ರಶೇಖರ್ ಕೋಟ್ಯಾನ್, ಮನೀಶ್ ಅಮೀನ್, ಧನಶ್ರೀ ಪೂಜಾರಿ ಮತ್ತು ಪ್ರಜಕ್ತಾ ಎಸ್ ಪವಾರ್ ಅವರು ಉಪಸ್ಥರಿದ್ದರು.




