ಮಹಾರಾಷ್ಟ್ರ ಸರಕಾರವು ಮುಂಬೈ ನಗರ ಮತ್ತು ಉಪನಗರ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಸೆಪ್ಟೆಂಬರ್ 5ರ ಬದಲಿಗೆ ಸೆಪ್ಟೆಂಬರ್ 8ರಂದು ಆಚರಿಸಲಾಗುವುದು ಎಂದು ಘೋಷಿಸಿತು. ಮುಸ್ಲಿಂ ಸಮುದಾಯವು ಸೆಪ್ಟೆಂಬರ್ 6ರಂದು ಅನಂತ ಚತುರ್ದಶಿ ಇರುವುದರಿಂದ, ಸಾರ್ವಜನಿಕ ಮೆರವಣಿಗೆಳ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ದಿನವಾಗಿರುವುದರಿಂದ ಸಾಮರಸ್ಯ ಕಾಪಾಡಿಕೊಳ್ಳಲು ಸೆಪ್ಟಂಬರ್ 8ರಂದು ಈದ್ -ಎ -ಮಿಲಾದ್ ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾಮಾನ್ಯ ಆಡಳಿತ ಇಲಾಖೆ ಸುತ್ತೊಲೆಯಲ್ಲಿ ಸೆಪ್ಟೆಂಬರ್ 5 ರಂದು ರಾಜ್ಯದ ಇತರ ಜಿಲ್ಲೆಗಳಿಗೆ ರಜೆ ಬದಲಾಗದೇ ಇರುತ್ತದೆ, ಆದರೆ ಮುಂಬೈ ನಗರ ಮತ್ತು ಉಪನಗರ ಗಳಲ್ಲಿ ಅದನ್ನು ಸೆಪ್ಟೆಂಬರ್ 8ಕ್ಕೆ ಬದಲಾಯಿಸಲಾಗಿದೆ. ಎಂದು ತಿಳಿಸಿದೆ.
ಮುಂಬೈ ನಗರ ಮತ್ತು ಉಪನಗರ ಗಳಲ್ಲಿನ ಸರ್ಕಾರಿ ಕಚೇರಿಗಳು ಸೆಪ್ಟೆಂಬರ್ 5 ರಂದು ಎಂದಿನಂತೆ ತೆರೆದಿರುತ್ತದೆ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.
previous post




