
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಷನ್ 171ನೇ ಗುರು ಜಯಂತಿಯನ್ನು ಸೆ. 7ರಂದು ವಿಜೃಂಭಣೆಯಿಂದ ಆಚರಿಸಿಕೊಂಡಿತು.
ಮದ್ಯಾಹ್ನ ಗುರುಪೂಜೆ ನೆರವೇರಿದ ಬಳಿಕ ಬಿಲ್ಲವ ಸಮಾಜದ ಹಿರಿಯರಾದ,ಸಮಾಜ ಸೇವಕ, ಎಲ್ ವಿ ಅಮೀನ್ ಅವರು ತನ್ನ ಗೌರವಾಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದರು.






ಈ ಸುಸಂದರ್ಭದಲ್ಲಿ ಬಿಲ್ಲವರ ಅಸೋಸ್ಸಿಯೇಷನ್ ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಬಿಲ್ಲವರ ಚೇಂಬರ್ಸ್ ಆಫ್ ಕೋಮಾರ್ಸ್ ನ ಅಧ್ಯಕ್ಷ ಎನ್. ಟಿ ಪೂಜಾರಿ,, ಬಿಲ್ಲವರ ಅಸೋಸ್ಸಿಯೇಷನ್ ಉಪಾಧ್ಯಕ್ಷರುಗಳಾದ ಪುರುತೋಷಮ್ ಎಸ್ ಕೋಟ್ಯಾನ್, ಜಯಂತಿ ಉಳ್ಳಾಲ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷ ವರದ ಉಳ್ಳಾಲ್, ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ ರಾಜಾ ವಿ ಸಾಲಿಯಾನ್, ಖ್ಯಾತ ಜ್ಯೋತಿಷಿ ಅಶೋಕ್ ಪುರೋಹಿತ್, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷೆ ಸುಜಾತಾ ಶೆಟ್ಟಿ, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಧ್ಯಕ್ಷ ನವೀನ್ ಪಡು ಇನ್ನಾ, ಜತೆ ಕೋಶಾಧಿಕಾರಿ ಸದಾಶಿವ ಕೋಟ್ಯಾನ್ ಉಪಸ್ಥಿತರಿದ್ದು ಶುಭ ಕೋರಿದರು.




