



ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಆಂಧ್ರಪ್ರದೇಶದ ಅಮಲಾಪುರದ ಪುಂಗನೂರು ತಳಿಯ ಹಸು ಜನಾಕರ್ಷಣೆ ಪಡೆಯುತ್ತಿದೆ.
ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಹಾಗೂ ಭಕ್ತರ ಜನಾಕರ್ಷಣೆ ಪಡೆದಿರುವ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀ ದೇವರ ಅಭಿಷೇಕಕ್ಕೆ ಪುಂಗನೂರು ತಳಿಯ ಹಸುಗಳ ಶುದ್ಧ ಹಾಲು ಸಮರ್ಪಣೆಯಾಗುತ್ತಿದ್ದು ಮಹತ್ವ ಪಡೆದಿದೆ..
ಮುಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಪುಂಗನೂರು ತಳಿಯ ಹಸುಗಳಿಗೆ ವಿಶೇಷ ದನದ ಹಟ್ಟಿ ನಿರ್ಮಾಣ ಹಾಗೂ ಆರೈಕೆ ನಡೆಯುತ್ತಿದೆ.
ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್ ರವರು ಕರಾವಳಿ ಭಾಗದಲ್ಲಿ ಅಪರೂಪವಾಗಿರುವ ಪುಂಗನೂರು ತಳಿಯ ಹಸುಗಳನ್ನು ವಿಶೇಷ ಪ್ರೀತಿಯ ಮೂಲಕ ಆರೈಕೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




