July 22, 2026
Mumbai News Kannada
ಸುದ್ದಿ

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜನಾಕರ್ಷಣೆ ಪಡೆಯುತ್ತಿರುವ ಪುಂಗನೂರು ತಳಿಯ ಹಸು







ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಆಂಧ್ರಪ್ರದೇಶದ ಅಮಲಾಪುರದ ಪುಂಗನೂರು ತಳಿಯ ಹಸು ಜನಾಕರ್ಷಣೆ ಪಡೆಯುತ್ತಿದೆ.
ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಹಾಗೂ ಭಕ್ತರ ಜನಾಕರ್ಷಣೆ ಪಡೆದಿರುವ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀ ದೇವರ ಅಭಿಷೇಕಕ್ಕೆ ಪುಂಗನೂರು ತಳಿಯ ಹಸುಗಳ ಶುದ್ಧ ಹಾಲು ಸಮರ್ಪಣೆಯಾಗುತ್ತಿದ್ದು ಮಹತ್ವ ಪಡೆದಿದೆ..
ಮುಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಪುಂಗನೂರು ತಳಿಯ ಹಸುಗಳಿಗೆ ವಿಶೇಷ ದನದ ಹಟ್ಟಿ ನಿರ್ಮಾಣ ಹಾಗೂ ಆರೈಕೆ ನಡೆಯುತ್ತಿದೆ.
ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್ ರವರು ಕರಾವಳಿ ಭಾಗದಲ್ಲಿ ಅಪರೂಪವಾಗಿರುವ ಪುಂಗನೂರು ತಳಿಯ ಹಸುಗಳನ್ನು ವಿಶೇಷ ಪ್ರೀತಿಯ ಮೂಲಕ ಆರೈಕೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



Related posts

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Mumbai News Desk

ಸಮಾಜ ಸೇವಕಿ ವಿಮಲಾ ಎಲ್ ಸಾಲ್ಯಾನ್ ನಿಧನ

Mumbai News Desk

ಇಶಾನ್ ಅಂಚನ್ ಗೆ, ಜೇ ಇ ಮೈನ್ಸ್ ನಲ್ಲಿ 99.29% ಅಂಕ

Mumbai News Desk

ದೆಹಲಿ ಹೋಟೆಲ್ ಅಗ್ನಿ ದುರಂತ: 21 ಜನ ದುರ್ಮರಣ

Mumbai News Desk

ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ.ಶಾಲೆ ಶತಸಂವತ್ಸರೋತ್ಸವ

Mumbai News Desk

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಗೆ ” ಜಾನಪದ ರತ್ನ – 2026″ ಪ್ರಶಸ್ತಿ

Mumbai News Desk