ಥಾಣೆ ಪಶ್ಚಿಮ ವೀರ ಸಾವರ್ಕರ್ ನಗರದಲ್ಲಿ ದೈವ ಭಕ್ತ, ಜ್ಯೋತಿಷಿ ಶಿವ ಪ್ರಸಾದ್ ಪೂಜಾರಿ ಪುತ್ತೂರು ಸ್ಥಾಪಿಸಿ, ಖ್ಯಾತಿಯಾಗಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನಾಂಕ 26/09/2025ರ ಶುಕ್ರವಾರದಂದು ಶರನ್ನವರಾತ್ರೋತ್ಸವದnನಿಮಿತ್ತ ಶ್ರೀ ಜಗದೀಶ್ ಎಸ್ ತಂತ್ರಿಯವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಂಟೆ 09:00 ರಿಂದ ಮಧ್ಯಾಹ್ನ ಗಂಟೆ 12:00 ರವರೆಗೆ “ವಿಶೇಷ ದುರ್ಗಾ ಹೋಮ (ಯಾಗ)” ನಂತರ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಹಾಗೂ ಗಂಟೆ 01:00 ಕ್ಕೆ ಅನ್ನ ಸಂತರ್ಪಣೆಯು ನಡೆಯಲಿದೆ.
ಸಾಯಂಕಾಲ ಗಂಟೆ 04:00 ರಿಂದ 06:00 ರವರೆಗೆ “ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ” ಸೇವೆಯು ನಡೆದು ಸಾಯಂಕಾಲ ಗಂಟೆ 06:00 ರಿಂದ ರಾತ್ರಿ ಗಂಟೆ 08:00 ರವರೆಗೆ “ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ, ಬೈಪಾಸ್ ಭಿವಂಡಿ ” ಇವರಿಂದ ಭಜನೆ ನಡೆಯಲಿದೆ. ಮತ್ತು ಶ್ರೀ ದೇವಿಗೆ “ವಿಶೇಷ ರಂಗ ಪೂಜೆ” ನಡೆದು ಮಹಾ ಮಂಗಳಾರತಿಯು ನಡೆಯಲಿದೆ.
ಈ ಸುಸಂದರ್ಭದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಪಾಲ್ಗೊಂಡು ಅಮ್ಮನವರ ತೀರ್ಥಪ್ರಸಾದವನ್ನು ಸ್ವೀಕರಿಸುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರವಾಗಿ,
ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ವಿನಂತಿಸಿದ್ದಾರೆ.




