July 23, 2026
Mumbai News Kannada
ಪ್ರಕಟಣೆ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀರ್ ಸಾವರ್ಕರ್ ನಗರ, ಥಾಣೆ (ಪ) : ಸೆ. 26ರಂದು ಶರನ್ನವರಾತ್ರೋತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿ ದರ್ಶನ, ರಂಗ ಪೂಜೆ







ಥಾಣೆ ಪಶ್ಚಿಮ ವೀರ ಸಾವರ್ಕರ್ ನಗರದಲ್ಲಿ ದೈವ ಭಕ್ತ, ಜ್ಯೋತಿಷಿ ಶಿವ ಪ್ರಸಾದ್ ಪೂಜಾರಿ ಪುತ್ತೂರು ಸ್ಥಾಪಿಸಿ, ಖ್ಯಾತಿಯಾಗಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನಾಂಕ 26/09/2025ರ ಶುಕ್ರವಾರದಂದು ಶರನ್ನವರಾತ್ರೋತ್ಸವದnನಿಮಿತ್ತ ಶ್ರೀ ಜಗದೀಶ್ ಎಸ್ ತಂತ್ರಿಯವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಂಟೆ 09:00 ರಿಂದ ಮಧ್ಯಾಹ್ನ ಗಂಟೆ 12:00 ರವರೆಗೆ “ವಿಶೇಷ ದುರ್ಗಾ ಹೋಮ (ಯಾಗ)” ನಂತರ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಹಾಗೂ ಗಂಟೆ 01:00 ಕ್ಕೆ ಅನ್ನ ಸಂತರ್ಪಣೆಯು ನಡೆಯಲಿದೆ.
ಸಾಯಂಕಾಲ ಗಂಟೆ 04:00 ರಿಂದ 06:00 ರವರೆಗೆ “ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ” ಸೇವೆಯು ನಡೆದು ಸಾಯಂಕಾಲ ಗಂಟೆ 06:00 ರಿಂದ ರಾತ್ರಿ ಗಂಟೆ 08:00 ರವರೆಗೆ “ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ, ಬೈಪಾಸ್ ಭಿವಂಡಿ ” ಇವರಿಂದ ಭಜನೆ ನಡೆಯಲಿದೆ. ಮತ್ತು ಶ್ರೀ ದೇವಿಗೆ “ವಿಶೇಷ ರಂಗ ಪೂಜೆ” ನಡೆದು ಮಹಾ ಮಂಗಳಾರತಿಯು ನಡೆಯಲಿದೆ.
ಈ ಸುಸಂದರ್ಭದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಪಾಲ್ಗೊಂಡು ಅಮ್ಮನವರ ತೀರ್ಥಪ್ರಸಾದವನ್ನು ಸ್ವೀಕರಿಸುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರವಾಗಿ,
ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ವಿನಂತಿಸಿದ್ದಾರೆ.



Related posts

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ಮೇ 26ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರ ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk

ಫೆ. 1, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

  ನ 14 ರಂದು ಡೊಂಬಿವಲಿ  ಶ್ರೀ ಜಗದಂಬ  ಮಂದಿರದಲ್ಲಿ ದೀಪೋತ್ಸವ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾ ಗಾವ್ ವಾರ್ಷಿಕ ಮಹಾಶಿವರಾತ್ರಿ ಉತ್ಸವ ಮತ್ತು ಮಕ್ಕಳಿಂದ ಕುಣಿತ ಭಜನೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಜುಲೈ 19ರಂದು ಆಷಾಢ ಹಬ್ಬ ಆಚರಣೆ

Mumbai News Desk