September 6, 2026
Mumbai News Kannada
ತುಳುನಾಡು

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ





ಕೊಳಚಿಕಂಬಳ ಬಸವ ಮರಕಾಲ ಕುಟುಂಬಿಕರು ಮತ್ತು ಬಪ್ಪನಾಡು ಮೊಗವೀರ ಮಹಾಸಭಾದ ಕೊಳಚಿಕಂಬಳದಲ್ಲಿರುವ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ(ಡಿ. 12) ಶಿಲನ್ಯಾಸ ನೆರವೇರಿಸಲಾಯಿತು.
ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ದೈವಸ್ಥಾನ ಕಾಮಗಾರಿಗೆ ಗುರಿಕಾರ ಸುಜಿತ್ ಎಸ್ ಅಮೀನ್- ರೇಖಾ ಸುಜಿತ್ ದಂಪತಿ ಶಿಲನ್ಯಾಸ ನೆರವೇರಿಸಿದರು. ಬಪ್ಪನಾಡು ಕೃಷ್ಣರಾಜ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು.


ಮೊಗವೀರ ಮಹಾಸಭಾದ ಅಧ್ಯಕ್ಷ ಪಂಡರಿಕಾಕ್ಷ ಎಸ್ ಕೋಟ್ಯಾನ್, ಕಾರ್ಯದರ್ಶಿ ಸುದೀಪ್ ಕೋಟ್ಯಾನ್, ಕೋಶಾಧಿಕಾರಿ ಪ್ರೇಮ ಎಂ ಕುಂದರ್, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಬಂಗೇರ, ಗೌರವಾಧ್ಯಕ್ಷ ನವೀನ್ ಕೋಟ್ಯಾನ್, ವಿಕ್ರಂ ರಾಜ್, ಗ್ರಾಮದ ಪ್ರಮುಖರಾದ ಗುರಿಕಾರ ಹರಿಶ್ಚಂದ್ರ ಪಿ ಸಾಲ್ಯಾನ್, ಕೃಷ್ಣ,ಕೋಟ್ಯಾನ್, ಕರುಣಾಕರ್ ಸುವರ್ಣ, ತೇಜ ಪೂಜಾರಿ,ಪ್ರಾಣೇಶ್ ಪೂಜಾರಿ, ಚರಣ್ ಕೊಳಚಿಕಂಬಳ, ಮುಲ್ಕಿ 4 ನಾಲ್ಕು ಪಟ್ಣ ಮೊಗವೀರ ಮಹಾಸಭಾಧ್ಯಕ್ಷ ಸುಜಿತ್ ಸಾಲಿಯನ್, ರೋಹಿತ್ ಎಸ್ ಅಮೀನ್, ಹರೀಶ್ ಮಲ್ಪೆ ಉಪಸ್ಥಿತರಿದ್ದರು.
ಶಿಲ್ಪಿ ಕೆ ಗೋಪಾಲ್ ಕಾರ್ಕಳ, ಎಂಜಿನಿಯರ್ ಸುಹಾನ್ ಕರ್ಕೇರ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಎಪ್ರಿಲ್ 29ರಂದು ಪುನರ್ ಪ್ರತಿಷ್ಠೆ ನೇಮೋತ್ಸವ ಜರಗಲಿದೆ.



Related posts

ಮೂಲ್ಕಿ : ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಬಪ್ಪನಾಡು ದೇವಸ್ಥಾನದಲ್ಲಿ ದೇವಕಾರ್ಯ ಮಾಡುವ ಶ್ರೀ ನಾರಾಯಣ ಭಟ್ ಎನ್. ಪಿಯವರಿಗೆ ಸನ್ಮಾನ

Mumbai News Desk

ಬಿಲ್ಲವ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲಿ : ಪ್ರವೀಣ್‌ ಪೂಜಾರಿ ಆಗ್ರಹ.

Mumbai News Desk

ಹೂಡೆ : ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮೊಳಗಿದ ಅಮರ ವೀರ ಗೀತೆ; ವಿಜೇತರಿಗೆ ಪ್ರಶಸ್ತಿ ಪ್ರದಾನ

Mumbai News Desk

ಮುಲ್ಕಿ : ಸಾಧಕರ ಅರಸು ಕಂಬಳ ಪ್ರಶಸ್ತಿ 2025 ಪ್ರಕಟ – ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ

Mumbai News Desk

ಮೂಲ್ಕಿ : ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ 108 ಕ್ಷೇತ್ರ ಪ್ರದಕ್ಷಿಣೆಯ ಅಂಗವಾಗಿ ಕಾಪು ಶ್ರೀ ಮಾರಿಯಮ್ಮನ ದರುಶನ

Mumbai News Desk