
ಕಿಸಾನ್ ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ರಜತ ಮಹೋತ್ಸವದ ಆಚರಣೆ, 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಯನ್ನು ದಿನಾಂಕ 19-12-2025 ಶುಕ್ರವಾರದಿಂದ 21-12-2025 ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರಗಳು
ದಿನಾಂಕ: 19-12-2025, ಶುಕ್ರವಾರ
ಬೆಳಿಗ್ಗೆ 5:30: ಶರಣು ಘೋಷ ಮತ್ತು ಗಣ ಹೋಮ.
ಬೆಳಿಗ್ಗೆ 10:00: ದೀಪ ಪ್ರಜ್ವಲನೆ ಮತ್ತು ಭಜನಾ ಮಂಗಳೋತ್ಸವ.
ಮಧ್ಯಾಹ್ನ 1:00: ಅನ್ನಪ್ರಸಾದ ವಿತರಣೆ.
ಸಂಜೆ 5:00: ಧಾರ್ಮಿಕ ಸಭೆ (ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ).
ದಿನಾಂಕ: 20-12-2025, ಶನಿವಾರ
ಬೆಳಿಗ್ಗೆ 10:00: ಶ್ರೀ ಸತ್ಯನಾರಾಯಣ ಮಹಾಪೂಜೆ.
ಮಧ್ಯಾಹ್ನ 12:30: ಮಹಾ ಆರತಿ ಮತ್ತು ಅನ್ನಪ್ರಸಾದ.
ಸಂಜೆ 6:00: ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ (ಪಂಚಪರಮೇಶ್ವರಿ ದೇವಸ್ಥಾನದಿಂದ ಹೊರಟು ಶಿವಾಜಿನಗರ ಮೂಲಕ ಸಾಗಲಿದೆ).
ರಾತ್ರಿ 8:30: ಅನ್ನಪ್ರಸಾದ ವಿತರಣೆ.
ದಿನಾಂಕ: 21-12-2025, ಭಾನುವಾರ
ಬೆಳಿಗ್ಗೆ 10:00: ಸಹಸ್ರ ನಾಮಾರ್ಚನೆ.
ಮಧ್ಯಾಹ್ನ 11:30: ಹೂವಿನ ಪೂಜೆ, ಕರ್ಪೂರದ ಆರತಿ ಮತ್ತು ಮಹಾ ಆರತಿ.
ಮಧ್ಯಾಹ್ನ 12:30: ತೀರ್ಥ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ.
ಮಧ್ಯಾಹ್ನ 1:00: ಶ್ರೀ ಅಯ್ಯಪ್ಪ ಭಜನಾ ಮಂಡಳಿ ಹಾಗೂ ಚಂದ್ರಹಾಸ್ ರೈ ಮತ್ತು ಬಳಗದವರಿಂದ ಭಜನೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು
ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ್ ಎಸ್ ಪೂಜಾರಿ, ಉಪಾಧ್ಯಕ್ಷ ರಾಜೇಶ್ ರೈ, ಕಾರ್ಯದರ್ಶಿ ರಮೇಶ್ ಕೋಟ್ಯಾನ್ , ಕೋಶಾಧಿಕಾರಿ ನರೇಶ್ ಬಿ ಪೂಜಾರಿ, ಜೊತೆ ಕಾರ್ಯದರ್ಶಿ ವಿಶ್ವಾಸ್ ಸುವರ್ಣ, ಜೊತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಸಲಹೆಗಾರರಾದ ರಾಜು ಸಫಲಿಗ, ವಿನಯ್ ಸನಿಲ್ ಹಾಗೂ ಸಮಿತಿ ಸದಸ್ಯರು, ಪೂಜಾ ಸಮಿತಿ ಸದಸ್ಯರು ವಿನಂತಿಸಿದ್ದಾರೆ.




